ಕಲ್ಪ ಮೀಡಿಯಾ ಹೌಸ್ | ವೈಟ್’ಫೀಲ್ಡ್(ಬೆಂಗಳೂರು) |
ಶ್ವಾಸನಾಳದಲ್ಲಿ ಸಿಲುಕಿಕೊಂಡಿದ್ದ ಅಡಿಕೆ ತುಂಡುಗಳನ್ನು ಕ್ರಯೋ ಪ್ರೋಬ್ ಎಂಬ ಅತ್ಯಾಧುನಿಕ ಉಪಕರಣ ಬಳಸಿ ಕೇವಲ 7 ನಿಮಿಷದಲ್ಲಿ ಶಸ್ತ್ರಚಿಕಿತ್ಸೆ #Surgery ಮಾಡಿ ಹೊರತೆಗೆಯುವ ಮೂಲಕ ವೈಟ್ ಫೀಲ್ಡ್’ನ ಮೆಡಿಕವರ್ ಆಸ್ಪತ್ರೆಯ #MediCoverHospital ವೈದ್ಯರು ಸಾಧನೆ ಮಾಡಿದ್ದಾರೆ.
ಹೌದು… 81 ವರ್ಷದ ವೃದ್ಧನಿಗೆ ಈ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಮೆಡಿಕವರ್ ಆಸ್ಪತ್ರೆ ತನ್ನ ಸಾಧನೆಯ ಹಾದಿಯಲ್ಲಿ ಮತ್ತೊಂದು ಹೆಜ್ಜೆ ಇರಿಸಿದೆ.
81 ವರ್ಷದ ವೃದ್ದನಿಗೆ ಕಳೆದ ಮೂರು ದಿನಗಳಿಂದ ನಿರಂತರ ಕೆಮ್ಮು ಹಾಗೂ ಎದೆ ಭಾಗದಲ್ಲಿ ನೋವು ಕಾಣಿಸಿಕೊಂಡಿದ್ದ ಕಾರಣ ಮಧ್ಯ ರಾತ್ರಿ ಬೇರೆ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಹೋಗಲಾಗಿತ್ತು. ಆದರೆ ಅಲ್ಲಿ ಹೃದಯಕ್ಕೆ #Heart ಸಂಬಂಧಿಸಿದ ಪರೀಕ್ಷೆಗಳನ್ನು ನಡೆಸಿ ಯಾವುದೇ ಸಮಸ್ಯೆ ಇಲ್ಲ ಎಂದು ವರದಿ ನೀಡಿ ವಾಪಾಸ್ ಮನೆಗೆ ಕಳುಹಿಸಿಕೊಡಲಾಗಿತ್ತು. ಆದರೆ ವೃದ್ದನಿಗೆ ನೋವು ಮಾತ್ರ ಕಮ್ಮಿಯಾಗಿರಲಿಲ್ಲ.
ಬಳಿಕ ವೈಟ್ ಫೀಲ್ಡ್’ನಲ್ಲಿರುವ ಮೆಡಿಕವರ್ ಆಸ್ಪತ್ರೆಯ ಇಂಟರ್ವೆನ್ಷನಲ್ ಶ್ವಾಸಕೋಶ #Lungs ಶಾಸ್ತ್ರಜ್ಞ ಡಾ.ಬಿ.ಜಿ. ಮಂಜುನಾಥ್ ಅವರನ್ನು ಭೇಟಿ ಮಾಡಿ, ವೃದ್ದ ತನ್ನ ನೋವಿಗೆ ನಿಜವಾದ ಕಾರಣವೇನೆಂದು ತಿಳಿದುಕೊಂಡಿದ್ದಾರೆ.
ವೃದ್ದನಿಗೆ ಪ್ರತಿ ದಿನ ಮಲಗುವಾಗ ಬಾಯಿಯಲ್ಲಿ ಅಡಿಕೆಯನ್ನು ಇಟ್ಟುಕೊಂಡು ಮಲಗುವ ಅಭ್ಯಾಸವಿತ್ತು. ನಿದ್ದೆ ವೇಳೆ ಅಡಿಕೆಯ ತುಂಡುಗಳು ಶ್ವಾಸಕೋಶದೊಳಗಡೆ ಹೋಗಿತ್ತು. ಇದರಿಂದ ಅವರಿಗೆ ಉಸಿರಾಟಕ್ಕೆ ತೊಂದರೆ ಶುರುವಾಗಿತ್ತು. ತಕ್ಷಣ ಅವರಿಗೆ ಆಕ್ಸಿಜನ್ ನೀಡಿ ಎಕ್ಸ್ ರೇ ತೆಗೆದಾಗ ಶ್ವಾಸಕೋಶದ ಕೆಳಗಿಳ ಪದರ ಸಂಪೂರ್ಣವಾಗಿ ಹದಗೆಟ್ಟಿರೋದು ತಿಳಿದು ಬಂದಿತ್ತು.ತಕ್ಷಣವೇ ಅವರನ್ನು ಆಪರೇಷನ್ ಥಿಯೇಟರ್ ಕರೆದೊಯ್ದು, ಲಾರಿಂಜಿಯಲ್ ಮಾಸ್ಟ್ ಏವೇರ್ ಬಳಸಿ ಶಸ್ತ್ರಚಿಕಿತ್ಸೆ ಶುರು ಮಾಡಲಾಯಿತು. ಶಸ್ತ್ರಚಿಕಿತ್ಸೆ ವೇಳೆ ಎಡ ಮುಖ್ಯ ಶ್ವಾಸನಾಳ ಸಂಪೂರ್ಣವಾಗಿ ಬ್ಲಾಕ್ ಆಗಿರೋದು ಗೊತ್ತಾಗಿದೆ. 1.7 ಎಂಎಂ ಸೈಜಿನ ಕ್ರಯೋ ಪ್ರೋಬ್ ಉಪಕರಣದ ಸಹಾಯದಿಂದ ಅಡಿಕೆ ತುಂಡುಗಳನ್ನು ಕೇವಲ 7 ನಿಮಿಷದಲ್ಲಿ ಸಂಪೂರ್ಣವಾಗಿ ಹೊರತೆಗೆಯವಲ್ಲಿ ಶ್ವಾಸಕೋಶ ಶಾಸ್ತ್ರಜ್ಞ ಡಾ.ಬಿ.ಜಿ. ಮಂಜುನಾಥ್ ಯಶಸ್ವಿಯಾಗಿದ್ದಾರೆ.
ಈ ಕುರಿತು ಮಾತನಾಡಿದ ಡಾ.ಮಂಜುನಾಥ್, ಅತ್ಯಾಧುನಿಕ ಉಪಕರಣ ಬಳಕೆಯಿಂದ ರೋಗಿಗೆ ಅನಗತ್ಯವಾಗಿ ಸಿಟಿ ಸ್ಕ್ಯಾನ್ ಮಾಡುವ ಅವಶ್ಯಕತೆ ಇರೋದಿಲ್ಲ ಹಾಗೂ ಗಂಟೆಗಟ್ಟಲೆ ರೋಗಿಗೆ ಆಪರೇಷನ್ ಮಾಡುವ ಅಗತ್ಯನೇ ಇರುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post