ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರಿನಿಂದ ಹೊರಡುವ ಹಾಗೂ ಆಗಮಿಸುವ ಈ ಕೆಳಗಿನ ಎಕ್ಸ್’ಪ್ರೆಸ್ ರೈಲುಗಳಿಗೆ #Express Train ನೀಡಲಾಗಿದ್ದ ಪ್ರಾಯೋಗಿಕ ನಿಲುಗಡೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ ಆದೇಶದವರೆಗೆ ಮುಂದುವರೆ¸ಲಾಗುತ್ತಿದೆ.
ಈ ಕುರಿತಂತೆ ದಕ್ಷಿಣ ಮಧ್ಯ ರೈಲ್ವೆ ಮಾಹಿತಿ ನೀಡಿದ್ದು, ವಿವರಗಳು ಇಂತಿವೆ.
17212 ಸಂಖ್ಯೆಯ ಯಶವಂತಪುರ-ಮಚಲಿಪಟ್ಟಣಂ ಕೊಂಡವೀಡು ಟ್ರೈ-ವೀಕ್ಲಿ ಎಕ್ಸ್’ಪ್ರೆಸ್ ಕಂಬಬಂ ನಿಲ್ದಾಣದಲ್ಲಿ, ರೈಲು ಸಂಖ್ಯೆ 22683 ಯಶವಂತಪುರ-ಲಕ್ನೋ ಸಾಪ್ತಾಹಿಕ ಸೂಪರ್’ಫಾಸ್ಟ್ ಎಕ್ಸ್’ಪ್ರೆಸ್ ಅನಂತಪುರ ನಿಲ್ದಾಣದಲ್ಲಿ ಹಾಗೂ 16593 ಸಂಖ್ಯೆಯ ಯಶವಂತಪುರ-ನಾಂದೇಡ್ ಮತ್ತು 16594 ನಾಂದೇಡ್-ಕೆಎಸ್’ಆರ್ ಬೆಂಗಳೂರು ಎಕ್ಸ್’ಪ್ರೆಸ್ ರೈಲುಗಳು ನಗರೂರು ನಿಲ್ದಾಣದಲ್ಲಿನ ನಿಲುಗಡೆಯನ್ನು ಮುಂದುವರಿಸಲಿವೆ.
ಇನ್ನು, ವಿಶಾಖಪಟ್ಟಣಂ-ಬೆಂಗಳೂರು ವಿಶೇಷ ರೈಲು ಸಂಚಾರ ವಿಸ್ತರಣೆ
ಹೋಳಿ ಹಬ್ಬದ ಪ್ರಯುಕ್ತ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಯಂತ್ರಿಸಲು, ವಿಶಾಖಪಟ್ಟಣಂ ಮತ್ತು ಎಸ್’ಎಂವಿಟಿ ಬೆಂಗಳೂರು ನಡುವಿನ ವಿಶೇಷ ರೈಲು #Vishakapattanam-Bengaluru Special Train ಸೇವೆಗಳನ್ನು ವಿಸ್ತರಿಸಲಾಗುವುದು ಎಂದು ಪೂರ್ವ ಕರಾವಳಿ ರೈಲ್ವೆ ತಿಳಿಸಿದೆ.
- ವಿಶಾಖಪಟ್ಟಣದಿಂದ ಪ್ರತಿ ಭಾನುವಾರ ಹೊರಡುವ 08581 ಸಂಖ್ಯೆಯ ವಿಶಾಖಪಟ್ಟಣಂ-ಎಸ್’ಎಂವಿಟಿ ಬೆಂಗಳೂರು ಸಾಪ್ತಾಹಿಕ ವಿಶೇಷ ಎಕ್ಸ್’ಪ್ರೆಸ್ ಈ ಮೊದಲು ಫೆಬ್ರವರಿ 22, 2026 ರವರೆಗೆ ಸಂಚರಿಸಲು ಮಾತ್ರ ನಿಗದಿಯಾಗಿತ್ತು. ಇದೀಗ ಇದನ್ನು ಮಾರ್ಚ್ 1 ರಿಂದ 29, 2026 ರವರೆಗೆ ವಿಸ್ತರಿಸಲಾಗಿದೆ.
- ಎದಗಗ’ಎಂವಿಟಿ ಬೆಂಗಳೂರಿನಿಂದ ಪ್ರತಿ ಸೋಮವಾರ ಹೊರಡುವ 08582 ಸಂಖ್ಯೆಯ ಎಸ್’ಎಂವಿಟಿ ಬೆಂಗಳೂರು-ವಿಶಾಖಪಟ್ಟಣಂ ಸಾಪ್ತಾಹಿಕ ವಿಶೇಷ ಎಕ್ಸ್’ಪ್ರೆಸ್ ರೈಲು ಸೇವೆಯನ್ನು ಈ ಮೊದಲು ಫೆಬ್ರವರಿ 23, 2026 ರವರೆಗೆ ಮಾತ್ರ ನಿಗದಿಪಡಿಸಲಾಗಿತ್ತು. ಇದೀಗ ಇದನ್ನು ಮಾರ್ಚ್ 2 ರಿಂದ 30, 2026 ರವರೆಗೆ ವಿಸ್ತರಿಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 

















