ಭದ್ರಾವತಿ: ನ್ಯೂಟೌನ್ ಸಾಯಿ ಕೃಪಾ ಧಾಮದ ಆವರಣದಲ್ಲಿ ಶಿವ ಸಾಯಿ ಕೃಪಾ ಧಾಮ ಟ್ರಸ್ಟ್ ಹಾಗು ಪ್ರಶಾಂತಿ ಸೇವಾ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಮೇ: 8 ರಿಂದ 19 ರವರೆಗೆ 12 ದಿನಗಳ ಕಾಲ ಲೋಕ ಕಲ್ಯಾಣಾರ್ಥ ಅತಿ ರುದ್ರ ಮಹಾ ಯಜ್ಞ ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ಡಿ.ಪ್ರಭಾಕರ್ ಬೀರಯ್ಯ ತಿಳಿಸಿದರು.
ಗುರುವಾರ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿ ಪಾಶ್ಚಾತ್ಯ ಸಂಸ್ಕøತಿ ಹೆಚ್ಚಾಗಿ ಭಾರತ ದೇಶದ ಸಂಸ್ಕøತಿ ಕಣ್ಮರೆಯಾಗುತ್ತಿರುವ ಇಂದಿನ ದಿನಗಳಲ್ಲಿ ದೇಶದ ವೈಶಿಷ್ಟತೆ, ಪರಂಪರೆ, ಸಂಸ್ಕøತಿ ಉಳಿವಿಗೆ ಹಾಗು ಲೋಕ ಕಲ್ಯಾಣಾರ್ಥಕ್ಕಾಗಿ ಸುಮಾರು 121 ಋತ್ವಿಜರಿಂದ ಅತಿ ರುದ್ರ ಯಜ್ಞ ಏರ್ಪಡಿಸಲಾಗಿದೆ ಎಂದರು.
ಮೇ: 8 ರಂದು ಬುಧವಾರ ಬೆಳಿಗ್ಗೆ ಶೃಂಗೇರಿ ಶಾರದಾಪೀಠದ ಪ್ರಧಾನ ಆಚಾರ್ಯ ಶ್ರೀ ಕೆ.ಎಸ್.ಲಕ್ಷ್ಮೀನಾರಾಯಣ ಸೋಮಯಾಜಿಗಳು ಆಗಮಿಸಲಿದ್ದು, ಮೇ: 8 ರ ಬುಧವಾರ ಬೆಳಿಗ್ಗೆ 7.30 ರಿಂದ 8.30 ರವರೆಗೆ ಮಂಗಳವಾದ್ಯ, 8.30 ರಿಂದ 9.30 ರವರೆಗೆ ಗುರು ಪ್ರಾರ್ಥನೆ, ಫಲ ಸಮರ್ಪಣೆ, ಯಾಗಶಾಲಾ ಪ್ರವೇಶ, ಗಣಪತಿ ಪೂಜೆ, ಸ್ವಸ್ತಿ ಪುಣ್ಯಾಹ ವಾಚನ, ದೇವ ನಾಂದಿ ಸಮಾರಾಧನೆ, ಮಹಾಸಂಕಲ್ಪ, ರಿತ್ವಿಕ್ ವರ್ಣನೆ, ಮಧಪರ್ಕ ಗೋದಾನ ಗವಾಧಿ ಧಶದಾನ ನೆರವೇರಿಲಿದ್ದು, 10 ರಿಂದ 12.30 ರವರೆಗೆ ಗಣಪತಿ ಹೋಮ, ನವಗ್ರಹ ಹೋಮ ನಡೆಯಲಿದೆ. ಮಧ್ಯಾಹ್ನ 3 ರಿಂದ 3.30 ರವರೆಗೆ ಮಂಗಳವಾದ್ಯ, 3.30 ರಿಂದ ಸಂಜೆ 5 ರವರೆಗೆ ಬಿಂಬಶುದ್ದಿ, ಜಲಾಧಿವಾಸ, ಕ್ಷೀರಾಧಿವಾಸ, ಧಾನ್ಯಾಧಿವಾಸ, ಪುಷ್ಪಾಧಿವಾಸ, ಫಲಾಧಿವಾಸ, ವಸ್ತ್ರಾಧಿವಾಸ, ಗಂಧಾಧಿವಾಸ, ಶಯ್ಯಾಧಿವಾಸ, ಸಂಜೆ 5 ರಿಂದ 5.45 ರವರೆಗೆ ನೇತ್ರೋನ್ಮಿನ, 5 ರಿಂದ 7 ರವರೆಗೆ ಕಲಾ ಹೋಮ, ಪ್ರಾಣ ಪ್ರತಿಷ್ಟೆ, ಜೀವಾವಾಹನೆ, ಕಲಾತತ್ವ ಹೋಮ ಹಾಗು ಸಂಜೆ 6 ರಿಂದ 8.30 ರವರೆಗೆ ವಾಸ್ತು ರಾಕ್ಷೋಘ್ನ ಹೋಮ, ಮೃತಿಕಾ ಹರಣ, ಅಂಕರಾರೋಹಣ, ಕಂಕಣಬಂಧನ ನೆರವೇರಲಿವೆ. ಇದೇ ರೀತಿ 12 ದಿನಗಳ ಕಾಲ ಧಾರ್ಮಿಕ ಪೂಜಾ ವಿಧಿ ವಿಧಾನಗಳು ನೆರವೇರಲಿವೆ.
ಮೇ: 8 ರ ಬುಧವಾರ ಸಂಜೆ 6 ಗಂಟೆಗೆ ಸಾಯಿ ಪ್ರೇಮಾಮೃತಧಾರಾ ವೇದಿಕೆಯಲ್ಲಿ ನಡೆಯುವ ಸಮಾರಂಭವನ್ನು ಪುಟ್ಟಪರ್ತಿಯ ಪ್ರಶಾಂತಿ ನಿಲಯಂನ ಶ್ರೀ ಸತ್ಯಸಾಯಿ ಸೆಂಟ್ರಲ್ ಟ್ರಸ್ಟ್ ಸದಸ್ಯ ಆರ್.ಜೆ.ರತ್ನಾಕರ್ ಉದ್ಘಾಟಿಸಲಿದ್ದಾರೆ. ಪ್ರಧಾನ ಆಚಾರ್ಯ ಶ್ರೀ ಕೆ.ಎಸ್.ಲಕ್ಷ್ಮೀನಾರಾಯಣ ಸೋಮಯಾಜಿಗಳು, ಸತ್ಯಸಾಯಿ ಸೇವಾ ಸಂಸ್ಥೆಗಳ ಅಧ್ಯಕ್ಷ ನಿಮಿಷ್ ಪಾಂಡ್ಯ, ಸಂಸ್ಥೆಯ ಶೈಕ್ಷಣಿಕ ಸಂಯೋಜಕರಾದ ಕಮಲಾ ಪಾಂಡ್ಯ, ರಾಜ್ಯಾಧ್ಯಕ್ಷ ನಾಗೇಶ್ ಜಿ.ಧಾಕಪ್ಪ, ಕನ್ವಿನರ್ ವಾಸುಕಿ, ರಾಜ್ಯ ಸಂಯೋಜಕ ಡಿ.ಪ್ರಭಾಕರ್ ಬೀರಯ್ಯ, ಪ್ರಶಾಂತಿ ಸೇವಾ ಟ್ರಸ್ಟ್ ಅಧ್ಯಕ್ಷ ದೇವೇಂದ್ರಪ್ಪ ಭಾಗವಹಿಸಲಿದ್ದಾರೆ. ಪುಟ್ಟಪರ್ತಿ ಹಾಗು ಚನ್ನೈನ ವಿದ್ಯಾ ಹಾಗು ಸತ್ಯ ಇವರಿಂದ ಭಕ್ತಿಗೀತೆಗಳ ಕಾರ್ಯಕ್ರಮ ನೆರವೇರಲಿದೆ.
ಪ್ರತಿನಿತ್ಯ ಬೆಳಗಿನ ಜಾವ ನಡೆಯುವ ಪ್ರವಚನಾ ಕಾರ್ಯಕ್ರಮದಲ್ಲಿ ರಾಜ್ಯದ ಹೆಸರಾಂತ ಕಲಾವಿದರು ಭಾಗವಹಿಸಿ ಭಕ್ತಿಗೀತೆಗಳನ್ನು ನಡೆಸಿಕೊಡಲಿದ್ದಾರೆ. ಪ್ರತಿನಿತ್ಯ ನಡೆಯುವ ಧಾರ್ಮಿಕ ಕಾರ್ಯಕ್ರಮಗಳನ್ನು 180 ರಾಷ್ಟ್ರಗಳಲ್ಲಿ ನೇರಪ್ರಸಾರವಾಗಲಿದೆ. ರಾಜ್ಯದ ವಿವಿಧ ಜಿಲ್ಲೆಗಳ ಆಯ್ದ ಹಿರಿಯ ಸಾಯಿ ಭಕ್ತರುಗಳಿಗೆ ಗೌರವ ಸಮರ್ಪಣೆ ಮಾಡಲಾಗುವುದು ಎಂದು ಪ್ರಭಾಕರ್ ಬೀರಯ್ಯ ತಿಳಿಸಿದರು. ಗೋಷ್ಟಿಯಲ್ಲಿ ಡಾ.ಮಲ್ಲಿಕಾರ್ಜುನ್, ಎಂ.ದೇವೇಂದ್ರಪ್ಪ, ಎಚ್.ಪಿ.ಶಿವಪ್ಪ, ಧರ್ಮಪ್ರಸಾದ್, ತೀರ್ಥಯ್ಯ, ಸುಧಾಕರ ಶೆಟ್ಟಿ, ಧಾಮೋದರ್, ಸಂತೋಷ್, ಡಾ.ಸತೀಶ್, ಅಶ್ವತ್ ನಾರಾಯಣ, ಚಂದ್ರನ್ ಮುಂತಾದವರಿದ್ದರು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Discussion about this post