ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಹಲವು ವರ್ಷಗಳ ಸುಧೀರ್ಘ ಕಾಮಗಾರಿಯ ನಂತರ ಕೊನೆಗೂ ಕಡದಕಟ್ಟೆ ರೈಲ್ವೆ ಫ್ಲೈ ಓವರ್ ಸೈಲೆಂಟ್ ಆಗಿ ಉದ್ಘಾಟನೆ ಆಗಿದೆ.
ಸಂಸದ ಜಿ. ವೈ. ರಾಘವೇಂದ್ರ #MP Raghavendra ಹಾಗೂ ಶಾಸಕ ಬಿ.ಕೆ. ಸಂಗಮೇಶ್ವರ #MLA Sangameshwar ಅವರು ಜಂಟಿಯಾಗಿ ಉದ್ಘಾಟನೆ ಮಾಡಿದ್ದಾರೆ.
ಸುಮಾರು ಮೂರು ವರ್ಷಗಳ ಕಾಲ ಸತತವಾಗಿ ಕಾಮಗಾರಿ ನಡೆದಿದ್ದು, ಜನವರಿಯಲ್ಲೇ ಉದ್ಘಾಟನೆ ಆಗಲಿದೆ ಎಂದು ಹೇಳಲಾಗಿತ್ತು. ಆದರೆ ಕಾಮಗಾರಿ ವಿಳಂಬವಾದ ಹಿನ್ನೆಲೆಯಲ್ಲಿ ಈಗ ಉದ್ಘಟನೆಯಾಗಿದೆ.
ಭದ್ರಾವತಿಯ ಕಡದಟ್ಟೆ ಬಳಿ ಹಾದು ಹೋಗಿರುವ ರೈಲ್ವೇ ಹಳಿಗೆ ಅಡ್ಡಲಾಗಿ ರೈಲ್ವೇ ಇಲಾಖೆಯ ವತಿಯಿಂದ ನಿರ್ಮಾಣ ಮಾಡಿರುವ ಸುಸಜ್ಜಿತ ನೂತನ “ರೈಲ್ವೇ ಮೇಲ್ಸೇತುವೆ” ಇಂದು ಸಾರ್ವಜನಿಕರ ಬಳಕೆಗೆ ಅಧಿಕೃತವಾಗಿ ಲೋಕಾರ್ಪಣೆಗೊಳಿಸಲಾಯಿತು.
ಈ ಸಮಯದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ್, ತಾಲ್ಲೂಕು ಅಧ್ಯಕ್ಷ ಧರ್ಮ ಪ್ರಸಾದ್, ಶಾಸಕರುಗಳಾದಅರುಣ್, ಸಂಗಮೇಶ್ವರ್, ಬಲ್ಕಿಶ್ ಬಾನು, ಮುಖಂಡರಾದ ಮಂಗೋಟೆ ರುದ್ರೇಶ್, ಶಾರದಾ ಅಪ್ಪಾಜಿ ಸೇರಿದಂತೆ ಇನ್ನೂ ಅನೇಕ ಗಣ್ಯರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post