ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಅಖಿಲ ಭಾರತ ಮಾಧ್ವ ಮಹಾಮಂಡಳಿಯ ಭದ್ರಾವತಿ ಶಾಖೆಯಿಂದ ಆಯೋಜಿಸಲಾಗಿದ್ದ ಶ್ರೀವಿಜಯದಾಸರ ಆರಾಧನೆ Shri Vijayadasa’s Aradhane ಅದ್ದೂರಿಯಾಗಿ ನಡೆಯಿತು.
ಸುಳಾದಿದಾಸರೆಂದೇ ಖ್ಯಾತರಾದ ಶ್ರೀವಿಜಯದಾಸರ ಆರಾಧನೆ ಅಂಗವಾಗಿ ಜನ್ನಾಪುರದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ Shri Raghavendra Swamy Mutt ವಿಶೇಷ ಪೂಜೆ ನೆರವೇರಿಸಲಾಯಿತು.
ವಿಶೇಷ ಅಲಂಕಾರ, ಪೂಜೆ, ತೀರ್ಥಪ್ರಸಾದ ಹೀಗೆ ಹಲವು ಧಾರ್ಮಿಕ ಆಚರಣೆಗಳು ಸಕಲ ಸದ್ಭಕ್ತರ ಸಹಕಾರದಿಂದ ನಡೆಯಿತು. ಪಂ| ಶ್ರೀ ಮೃತ್ತಿಕಾ ಗುರುರಾಜಾರ್ಚಾ ಅವರಿಂದ ವಿಜಯದಾಸರ ಕೃತಿಗಳ ಬಗ್ಗೆ ಪ್ರವಚನ ಕಾರ್ಯಕ್ರಮ ನಡೆಯಿತು.
Also read: ಹೊಣೆಗೇಡಿ ರಾಜ್ಯ ಸರ್ಕಾರ ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿದೆ
ಆರಾಧನೆ ನಿಮಿತ್ತ ಮುಂಜಾನೆ ಹಳೇನಗರದ ಪ್ರಮುಖ ಬೀದಿಗಳಲ್ಲಿ ಯಾಯಿವಾರ ನಗರ ಸಂಕೀರ್ತನೆ ನಡೆಯಿತು.
ಮಂಡಳಿಯ ಅಧ್ಯಕ್ಷರಾದ ಜಯತೀರ್ಥ, ವೆಂಕಟೇಶ ರಾವ್, ಪ್ರಮುಖರಾದ ಗೋಪಾಲಾಚಾರ್, ಶ್ರೀನಿವಾಸಚಾರ್, ರಮಾಕಾಂತ್, ಕಲ್ಲಾಪುರ ರಾಮಚಂದ್ರ ಇತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post