ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಹೊಳೆಹೊನ್ನೂರು ರಸ್ತೆಯಲ್ಲಿನ ಕಾಗೆ ಕೋಡಮಗ್ಗೆ ಗ್ರಾಮದ ಬ್ರಿಡ್ಜ್ ಬಳಿಯಲ್ಲಿ ಗೋಮಾಂಸದ ತ್ಯಾಜ್ಯಗಳು ಪತ್ತೆಯಾಗಿದ್ದು, ಈ ಕುರಿತಂತೆ ಸಾಮಾಜಿಕ ಕಾರ್ಯಕರ್ತರೊಬ್ಬರು ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ.

ಸಾಮಾಜಿಕ ಕಾರ್ಯಕರ್ತ ದೇವರಾಜ ಅರಳಿಹಳ್ಳಿ ಅವರು ದೂರು ನೀಡಿದ್ದಾರೆ.
ಏನಿದೆ ದೂರಿನಲ್ಲಿ?
ಕಾಗೆ ಕೋಡಮಗ್ಗೆ ದಾರಿಯಲ್ಲಿ ಇರುವ ಕಾಗೆಹಳ್ಳ ಬ್ರಿಡ್ಸ್ ಬಳಿಯಲ್ಲಿ ಕೆಟ್ಟ ದುರ್ವಾಸನೆ ಬರುತ್ತಿದ್ದು ಕಾರಿನಿಂದ ಇಳಿದು ಗಮನಿಸಿ ನೋಡಿದಾಗ ಗೋವಿನ ತಲೆಯ ಕೊಂಬು ಮೂಳೆ ಮತ್ತು ಗೋವಿನ ಬೋಟಿ ಪತ್ತೆಯಾಗಿದೆ.
Also read: ಜಿಪಂ, ತಾಪಂ ಚುನಾವಣೆ | ಸ್ವತಂತ್ರವಾಗಿ ಸ್ಪರ್ಧಿಸಲಿದೆಯೇ ಎಎಪಿ? ನಾಗಣ್ಣ ಹೇಳಿದ್ದೇನು?
ಮೊನ್ನೆ ನಡೆದ ಬಕ್ರಿದ್ ಹಬ್ಬದಲ್ಲಿ ಯಾರೋ ಸುಮಾರು 10 ರಿಂದ 15ಕ್ಕಿಂತ ಹೆಚ್ಚು ಗೋವುಗಳನ್ನು ಹತ್ಯೆ ಮಾಡಿ ತಂದು ಹಾಕಿರುವುದು ಕಂಡುಬಂದಿದೆ. ಹತ್ತರಿಂದ ಹದಿನೈದು ಚೀಲಗಳು ಗೋವುಗಳ ಖನಿಜಗಳು ತಂದು ನೀರಿನಲ್ಲಿ ಎಸೆದಿದ್ದಾರೆ ಎಂದಿದ್ದಾರೆ.
ಗೋವಿನ ಖನಿಜಗಳನ್ನು ತಂದು ವ್ಯವಸಾಯಕ್ಕೆ ಉಪಯೋಗಿಸುವ ನೀರಿನಲ್ಲಿ ಹಾಕಿರುವುದರಿಂದ ಪರಿಸರ ಮಾಲಿನ್ಯವಾಗುತ್ತಿದೆ. ಈ ಮುಂಚೆ ಇದೇ ವಿಚಾರವಾಗಿ ನಾನು ತಮ್ಮ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದೇನೆ. ಆದರೂ ಸಹ ಗೋ ಹತ್ಯೆ ಮಾಡಿ ಗೋವುಗಳ ಖನಿಜವನ್ನು ತಂದು ಹಾಕುವುದು ನಿಂತಿಲ್ಲ. ಹಾಗಾಗಿ ತಾವುಗಳು ಪ್ರಕರಣ ದಾಖಲಿಸಿಕೊಂಡು ದಯವಿಟ್ಟು ಈ ಒಂದು ಕೃತ್ಯವನ್ನು ಮಾಡಿರುವವರನ್ನು ತನಿಖೆ ಮಾಡಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಕೋರಿದ್ದಾರೆ.
ಈ ಗೋ ಹತ್ಯೆ ಮಾಡಿದವರನ್ನು ಗೋ ಹತ್ಯೆ ಮಾಡಲು ಉಪಯೋಗಿಸಿದ ಸ್ಥಳವನ್ನು ಪತ್ತೆ ಹಚ್ಚಿ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಕೋರಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news




















