ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಪೇಪರ್ ಟೌನ್ ಪೊಲೀಸ್ ಠಾಣೆಯಲ್ಲಿ ಡಿ.24ರಂದು ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು Blood Donation ಆಯೋಜಿಸಲಾಗಿದೆ.
ಈ ಕುರಿತಂತೆ ಮಾಹಿತಿ ನೀಡಿದ ಭದ್ರಾವತಿ ಸಂಚಾರಿ ಠಾಣೆ ಹೆಡ್ ಕಾನ್’ಸ್ಟೇಬಲ್ ಹಾಲೇಶಪ್ಪ, ಶಿವಮೊಗ್ಗದ ಸುಬ್ಬಯ್ಯ ವೈದ್ಯಕೀಯ ಕಾಲೇಜಿನ ರಕ್ತಕೇಂದ್ರದ ಸಹಯೋಗದಲ್ಲಿ ಈ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ ಎಂದರು.
ಈ ಸ್ವಯಂ ಪ್ರೇರಿತ ಶಿಬಿರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಳ್ಳುವ ಜೊತೆಯಲ್ಲಿ ತಮ್ಮ ಸ್ನೇಹಿತರನ್ನು ಹಾಗೂ ಪರಿಚಯದವರನ್ನು ಶಿಬಿರಕ್ಕೆ ಕರೆತಂದು ರಕ್ತದಾನ ಮಾಡಿಸಬೇಕಾಗಿ ಅವರು ಕೋರಿದ್ದಾರೆ.
Also read: Clear instructions given not to repeat the mistakes of the previous government: CM Siddaramaiah
ಹಾಲೇಶಪ್ಪ ಅವರು ಸ್ವತಃ 40 ಬಾರಿ ರಕ್ತದಾನ ಮಾಡಿ ಇತರರಿಗೆ ಮಾದರಿಯಾಗಿದ್ದು, ತಮ್ಮ ಸಮಾಜಮುಖಿ ಹಾಗೂ ಪರಿಸರ ರಕ್ಷಣೆಯ ಕಾರ್ಯಗಳಿಗಾಗಿ ಇಲಾಖೆಯಲ್ಲಿ ಹೆಸರು ಮಾಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post