ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಶಾಸಕ ಬಿ.ಕೆ. ಸಂಗಮೇಶ್ವರ್ ಅವರ ಅಧ್ಯಕ್ಷತೆಯಲ್ಲಿ ಬಿ.ವೈ.ಕೆ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ತಾಲೂಕು ಮಟ್ಟದ ಹೊನಲು ಬೆಳಕಿನ ಪ್ರೊ.ಕಬ್ಬಡಿಯನ್ನು ಫೆ.27 ಮತ್ತು 28ರಂದು ಎರಡು ದಿನಗಳ ಕಾಲ ನಡೆಸಲಾಗುತ್ತಿದೆ ಎಂದು ಬಿ.ವೈ.ಕೆ. ಸ್ಪೋರ್ಟ್ಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಎಚ್.ಆರ್. ರಂಗನಾಥ್ ಹೇಳಿದರು.
ಈ ಕುರಿತಂತೆ ಶಾಸಕರ ನೇತೃತ್ವದಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶಿವಮೊಗ್ಗ ಜಿಲ್ಲಾ ಕಬ್ಬಡಿ ಅಮೆಚೂರ್ ಅಸೋಸಿಯೇಷನ್ ಅನುಮತಿ ಮೇರೆಗೆ ನಡೆಸಲಾಗುತ್ತಿರುವ ಈ ಪಂದ್ಯಾವಳಿಯನ್ನು ಪ್ರಪ್ರಥಮ ಬಾರಿಗೆ ಮ್ಯಾಟ್ ಮೇಲೆ ನಡೆಸಲಾಗುತ್ತಿದೆ. ತಂಗಾ ಅಟ್ಯಾಕರ್ಸ್, ಮಾರುತಿ ಟೈಗರ್ಸ್, ಜೋಗ್ ಜಾಗ್ವಾರ್, ಭದ್ರಾ ಬುಲ್ಸ್, ಮಲೆನಾಡು ವಾರಿಯರ್ಸ್, ಸ್ಟೀಲ್ಟೌನ್, ಎಂಪಿಎಂ ಬುಲ್ಡೋಜರ್ಸ್, ನ್ಯೂಟೌನ್ ಅಬ್ಯಾಕರ್ಸ್ ಹೆಸರುಗಳನ್ನು ಹೊಂದಿರುವ ಎಂಟು ತಂಡಗಳು ಈಗಾಗಲೇ ಸಜ್ಜಾಗಿದ್ದು ಒಂದೊಂದು ತಂಡಕ್ಕೂ ಒಬ್ಬೊಬ್ಬರು ಮಾಲೀಕರನ್ನು ನೇಮಿಸಲಾಗಿದೆ. ಸಂಜೆ ನಾಲ್ಕು ಗಂಟೆಯಿಂದ ಪಂದ್ಯಗಳು ಆರಂಭಗೊಳ್ಳಲಿವೆ ಎಂದರು.
ಶಾಸಕ ಬಿ.ಕೆ. ಸಂಗಮೇಶ್ವರ್ ಮಾತನಾಡಿ, ಕ್ರೀಡಾಭಿಮಾನಿಗಳು ಎರಡು ದಿನಗಳ ನಡೆಯಲಿರುವ ಈ ಪಂದ್ಯಾವಳಿಯನ್ನು ಕ್ರೀಡಾಭಿಮಾನಿಗಳು ವೀಕ್ಷಿಸಿ ಪಂದ್ಯಾವಳಿಯನ್ನು ಯಶಸ್ವಿಗೊಳಿಸಿಕೊಡಬೇಕೆಂದು ವಿನಂತಿಸಿದರು.
ಬಿ.ವೈ.ಕೆ. ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಕೃಷ್ಣೇಗೌಡ, ಉಪಾಧ್ಯಕ್ಷ ಚನ್ನಪ್ಪ, ಕಾರ್ಯದರ್ಶಿ ಮಾರ್ಕಂಡೇಯ, ಸಹಕಾರ್ಯದರ್ಶಿ ಬಿ.ಸಿ. ಚಂದ್ರಶೇಖರ್, ಯೋಗೇಶ್, ಧನುಷ್, ನಟರಾಜ್, ಮುಂತಾದವರು ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post