ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಹೊಳೆಹೊನ್ನೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎದುರು ರಾಷ್ಟ್ರೀಯ ಹೆದ್ದಾರಿ–13ರ ಬಸ್ ನಿಲ್ದಾಣದ ಸಮೀಪ ವಾಹನಗಳ ದಟ್ಟಣೆ ಹೆಚ್ಚಾಗಿದ್ದು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಸುರಕ್ಷತಾ ದೃಷ್ಟಿಯಿಂದ ಬ್ಯಾರಿಕೇಡ್ ಅಳವಡಿಸಲಾಯಿತು.
ಹೊಳೆಹೊನ್ನೂರು ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಶಿವಪ್ರಸಾದ್ ಬ್ಯಾರಿಕೆಡ್ಗಳನ್ನು ಅಳವಡಿಸಿ ಉದ್ಘಾಟಿಸಿದರು. ರಾಷ್ಟ್ರೀಯ ಸೇವಾ ಯೋಜನೆ (NSS) ಘಟಕಗಳ ಸಹಯೋಗದೊಂದಿಗೆ ಮೂಡಲ ವಿಠಲಪುರ ಗ್ರಾಮದ ವಿಜಯಲಕ್ಷ್ಮಿ ಕ್ರಷರ್ ಮಾಲೀಕರಾದ ನವೀನ್ ಬ್ಯಾರಿಕೇಡ್ಗಳನ್ನು ದೇಣಿಗೆಯಾಗಿ ನೀಡಿದರು.
ವಾಹನಗಳ ವೇಗವನ್ನು ನಿಯಂತ್ರಿಸುವ ಉದ್ದೇಶದಿಂದ ಬ್ಯಾರಿಕೆಡ್ಗಳನ್ನು ಅಳವಡಿಸಲಾಗಿದ್ದು, ಕಾರ್ಯಕ್ರಮದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿಯ ಪದಾಧಿಕಾರಿ ರಾಜಪ್ಪ ಎಂ, ಮಂಜುನಾಥ ರಾವ್ ಶಿಂಧೆ, ವಾಜೀದ್, ಅಂಜನಪ್ಪ, ಕೆಂಚಪ್ಪ, ಶಾನು, ಸುರೇಶ್, ಮಮತಾ ಮಂಜುನಾಥ್ ಹಾಗೂ ಉಮೇಶ್ (ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಹೊಳೆಹೊನ್ನೂರು) ಉಪಸ್ಥಿತರಿದ್ದರು.
ಎ.ಕೆ. ರಮೇಶ್ (ಅಧ್ಯಕ್ಷರು, ಮಾದಿಗ ದಂಡೂರ ಸಮಿತಿ ಹೊಳೆಹೊನ್ನೂರು), ನಾಗೇಶ್ ಎ (ಮಾಜಿ ಉಪಾಧ್ಯಕ್ಷರು, ಗ್ರಾಮ ಪಂಚಾಯಿತಿ, ಹೊಳೆಹೊನ್ನೂರು), ಡಿಶ್ ಹರೀಶ್ (ಮುಖಂಡರು, ಹೊಳೆಹೊನ್ನೂರು), ಸುಧಾಕರ ಶೆಟ್ಟಿ (ಅಭಿರುಚಿ ಹೋಟೆಲ್ ಮಾಲೀಕರು ಕೊಪ್ಪ), ಸಂತೋಷ್ ಎ.ಕೆ (ಎಸ್ಡಿಎಂಸಿ ಅಧ್ಯಕ್ಷರು, ಕೊಪ್ಪ), ಸಿದ್ದಪ್ಪ ಎ.ಕೆ (ಮುಖಂಡರು, ಕೊಪ್ಪ) ಭಾಗವಹಿಸಿದ್ದರು.
ಕಾಲೇಜಿನ ಪ್ರಾಂಶುಪಾಲರಾದ ಡಾ. ಪ್ರತಿಭಾ ಕೆ.ಆರ್, ಅಧ್ಯಾಪಕ ವೃಂದ, ಆಡಳಿತಾತ್ಮಕ ಸಿಬ್ಬಂದಿ ಹಾಗೂ ಕೊಪ್ಪ ಮತ್ತು ಹೊಳೆಹೊನ್ನೂರಿನ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news




















