ಭದ್ರಾವತಿ: ತರೀಕೆರೆ ರಸ್ತೆಯ ಗಾಂಧಿ ವೃತ್ತದ ಬಸವಮಂಟಪದಲ್ಲಿ ಸೋಮವಾರ ವಿಶ್ವದ ಪ್ರಪ್ರಥಮ ಮಹಿಳಾ ಜಗದ್ಗುರು ದಿವ್ಯ ಚೇತನ ಡಾ.ಮಾತೆ ಮಹಾದೇವಿರವರ ಲಿಂಗೈಕ್ಯ ಸಂಸ್ಮರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಬೀದರ್ ಜಿಲ್ಲೆಯ ಬಸವಕಲ್ಯಾಣ ಶೂನ್ಯ ಪೀಠಾಧ್ಯಕ್ಷ ಜಗದ್ಗುರು ಸಿದ್ದರಾಮೇಶ್ವರ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿ ಪುಷ್ಪ ನಮನ ಸಲ್ಲಿಸಿ 108 ಬಸವ ಸ್ಮರಣೆ ನೆರವೇರಿಸಿ ಮಾತನಾಡಿದ ಅವರು ಬಸವ ಸಾಮ್ರಾಜ್ಯ ಸ್ಥಾಪನೆಗೆ ಜಗನ್ಮಾತೆ ಮಾತೆರವರು ಮನೆ ಮನೆಗಳಿಗೆ ಲಿಂಗಾಯ ಧರ್ಮದ ಚೇತನ ಪಸರಿಸಿದ್ದರು ಎಂದರು.
ಇದೇ ಸಂದರ್ಭದಲ್ಲಿ ಷಟ್ಸ್ಥಲ ಧ್ವಜಾರೋಹಣ ನೆರವೇರಿಸಲಾಯಿತು. ಶರಣ-ಶರಣೆಯರಿಂದ ನುಡಿ ನಮನ ಸಲ್ಲಿಸಿ ಮಾತಾಜಿಯವರ ಸತ್ಸಂಕಲ್ಪ ಅನುಷ್ಟಾನಗೊಳಿಸುವ ಕುರಿತು ನಮ್ಮ ಚಿಂತನ ನಡೆಸಲಾಯಿತು. ಮಾತೆಯ ನೂರಾರು ಭಕ್ತರು ಭಾಗವಹಿಸಿ ಶ್ರದ್ದಾ ಭಕ್ತಿಗಳಿಂದ ನಮನ ಸಲ್ಲಿಸಿದರು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Discussion about this post