ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಕೊರೋನಾ ಹಿನ್ನೆಲೆಯಲ್ಲಿ ಎರಡು ವರ್ಷಗಳಿಂದ ಸ್ಥಗಿತಗೊಂಡಿದ್ದ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿಯವರ ಬ್ರಹ್ಮರಥೋತ್ಸವ ಈ ವರ್ಷ ಅದ್ದೂರಿಯಾಗಿ ನಡೆಯಲಿದ್ದು, ಇಂದಿನಿಂದ ಆರಂಭವಾಗಿದ್ದು, ಏಳು ದಿನಗಳ ಕಾಲ ವಿವಿಧ ಧಾರ್ಮಿಕ ವಿಧಿವಿಧಾನಗಳು ಆರಂಭವಾಗಿವೆ.ಇಂದು ಮುಂಜಾನೆ ಅಭಿಷೇಕ, ಅನುಜ್ಞೆ, ಪುಣ್ಯಾಹ, ಮೃತ್ತಿಕಾ ಸಂಗ್ರಹಣ, ಅಂಕುರಾರ್ಪಣ, ರಕ್ಷಾ ಬಂಧನ, ಅಷ್ಟಾವಧಾನ ನಡೆಯಿತು.
ಕಾರ್ಯಕ್ರಮ ವಿವರ:
- ಮೇ 14ರ ಶನಿವಾರ ಧ್ವಜಾರೋಹಣ, ಗರುಡೋತ್ಸವ
- ಮೇ 15ರ ಭಾನುವಾರ ನರಸಿಂಹ ಜಯಂತಿ, ವಸಂತ ಸೇವೆ ನಡೆಯಲಿದ್ದು, ಸಂಜೆ ಕಲ್ಯಾಣೋತ್ಸವ
- ಮೇ 16ರ ಸೋಮವಾರ ಅಭಿಜಿನ್ ಮುಹೂರ್ತದಲ್ಲಿ ಸ್ವಾಮಿಯವರ ಅದ್ದೂರಿ ರಥೋತ್ಸವ
- ಮೇ 17ರ ಮಂಗಳವಾರ ಬೆಳಗ್ಗೆ ಗಜವಾಹನೋತ್ಸವ ಹಾಗೂ ಸಂಜೆ ಶೇಷವಾಹನೋತ್ಸವ
- ಮೇ 18ರ ಬುಧವಾರ ಬೆಳಗ್ಗೆ ಉತ್ಸವ, ಸಂಧಾನಸೇವೆ, ಅವಭೃತ ಸ್ನಾನ ಹಾಗೂ ಸಂಜೆ ಹನುಮಂತೋತ್ಸವ, ಪೂರ್ಣಾಹುತಿ, ಧ್ವಜಾವತರಣ
- ಮೇ 19ರ ಗುರುವಾರ ಬೆಳಗ್ಗೆ ಮಹಾಭೀಷೇಕ ಹಾಗೂ ಸಂಜೆ ಪಲ್ಲಕ್ಕಿ ಉತ್ಸವ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post