ಕಲ್ಪ ಮೀಡಿಯಾ ಹೌಸ್
ಭದ್ರಾವತಿ: ಶಿವಮೊಗ್ಗ ಜಿಲ್ಲೆಯಾದ್ಯಂತ ಮೇ.31ರಿಂದ ಜೂನ್ 7ರವರೆಗೆ ಕಠಿಣ ಲಾಕ್ಡೌನ್ ಜಾರಿ ಮಾಡಿರುವ ಹಿನ್ನೆಲೆ ಅಗತ್ಯ ವಸ್ತುಗಳ ಖರೀದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಮುಗಿಬಿದ್ದ ಪರಿಣಾಮ ನಗರದ ಹಲವೆಡೆ ಹೆಚ್ಚಿನ ಜನಸಂದಣಿ ಕಂಡುಬಂದಿತು.
ಕೊರೋನಾ ಸೋಂಕಿತರ ಪ್ರಮಾಣ ಕಡಿಮೆಯಾಗುತ್ತಿದ್ದರೂ ಜನರ ಓಡಾಟಕ್ಕೆ ಕಡಿವಾಣ ಇಲ್ಲದಿರುವ ಕಾರಣ ಇಂದಿನಿಂದ ಜಿಲ್ಲಾಡಳಿತ ಕಠಿಣ ಲಾಕ್ಡೌನ್ ಜಾರಿ ಮಾಡಿ ಆದೇಶಿಸಿದ್ದು, ಜನರು ಕೊರೋನಾ ಮಾರ್ಗಸೂಚಿಗಳನ್ನು ಮರೆತು ಅಗತ್ಯ ವಸ್ತುಗಳ ಖದೀದಿಗೆ ಮುಗಿಬಿದ್ದಿದ್ದರು. ಇಂದು ಬೆಳಿಗ್ಗೆ ನಗರದ ಬಹುತೇಕ ಅಂಗಡಿ ಮುಂಗಟ್ಟುಗಳ ಮುಂದೆ ಸಾಮಾಜಿಕ ಅಂತರವನ್ನು ಮರೆತು ಹೆಚ್ಚಿನ ಜನರು ನೆರೆದಿದ್ದರು. ನಗರಸಭೆ ವತಿಯಿಂದ ಎಚ್ಚರಿಕೆ ನೀಡುತ್ತಿದ್ದರೂ ಪರಿಣಾಮ ಬೀರಲಿಲ್ಲ. ಚನ್ನಗಿರಿ ರಸ್ತೆ, ಬಿ.ಹೆಚ್. ರೋಡ್ಗಳು ಟ್ರಾಫಿಕ್ ಜಾಮ್ನಿಂದಾಗಿ ಪರದಾಡುವಂತಾಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post