ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ತಾಲೂಕಿನ ಸುಣ್ಣದಹಳ್ಳಿ ಕ್ಷೇತ್ರದಲ್ಲಿ 19ರ ಶನಿವಾರ ಶ್ರೀ ವೀರಾಂಜನೇಯ ರಥೋತ್ಸವ Sunnada halli Shri Veeranjaneya swamy ಹಮ್ಮಿಕೊಳ್ಳಲಾಗಿದೆ.
ಮಾರ್ಚ್ 17 ರ ಗುರುವಾರದಿಂದ ಶ್ರೀ ಕ್ಷೇತ್ರದಲ್ಲಿ ರಥೋತ್ಸವ ನಿಮಿತ್ತ ವಿಶೇಷ ಪೂಜಾ ಕಾರ್ಯಕ್ರಮ ಆರಂಭಗೊಳ್ಳಲಿದ್ದು, ಬೆಳಿಗ್ಗೆ ನಿರ್ಮಾಲ್ಯ ವಿಸರ್ಜನೆ, ಪಂಚಾಮೃತ, ಅಭಿಷೇಕ ಮತ್ತು ಮಹಾಮಂಗಳಾರತಿ ಹಾಗೂ ಸಂಜೆ ಸ್ವಸ್ತಿವಾಚನ, ವಾಸ್ತು ರಕ್ಷೋಘ್ನ ಹೋಮ, ವಾಸ್ತು ಪೂಜೆ, ದಿಗ್ ಬಲಿ ಶಾಲಾ ಪ್ರವೇಶ ನಡೆಯಲಿದೆ.
18ರಂದು ಶುಕ್ರವಾರ ಬೆಳಿಗ್ಗೆ ಅಂಕುರಾರ್ಪಣೆ, ನವಗ್ರಹ ಹೋಮ, ಗರುಡ ಹೋಮ, ಬೇರಿ ತಾಡನ, ಕಂಕಣ ಬಂಧನ, ಧ್ವಜಾರೋಹಣ, ಮಹಾಮಂಗಳಾರತಿ, ಸಂಜೆ ಅಗ್ನಿ ಜನನ ರಂಗಪೂಜೆ ತಂತ್ರ ಬಲಿ ಮಂಗಳಾರತಿ ನಡೆಯಲಿದೆ.
Also read: ಕನಕದಾಸರ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಬದುಕು ಸಾರ್ಥಕ: ಸಿಎಂ ಬೊಮ್ಮಾಯಿ
19ರ ಶನಿವಾರ ರಥ ಶುದ್ಧಿ, ಪ್ರಧಾನ ಹೋಮ, ರಥೋತ್ಸವ ನಂತರ ಅನ್ನಸಂತರ್ಪಣೆ ಆಯೋಜಿಸಲಾಗಿದೆ. ಸಂಜೆ ಅಷ್ಟಾವಧಾನ ಸೇವೆ ಶಯನೋತ್ಸವ ಮಂಗಳಾರತಿ ನಡೆಯಲಿದೆ.
20ರಂದು ಭಾನುವಾರ ಅವಭೃತ ಸ್ನಾನ, ಪ್ರಧಾನ ಹೋಮದ ಪೂರ್ಣಾಹುತಿ, ಗಣ ಹೋಮ ಹಾಗೂ ಸಂಜೆ ರಾಜಬೀದಿ ಉತ್ಸವ ನಡೆಯಲಿದೆ.
21ರ ಸೋಮವಾರ ಕಲಾತತ್ವ ಹೋಮ, ಕುಂಬಾಭಿಷೇಕ ಮತ್ತು ಮಂಗಳಾರತಿ ಯೊಂದಿಗೆ ರಥೋತ್ಸವ ಸಂಪನ್ನಗೊಳ್ಳಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post