ಕಲ್ಪ ಮೀಡಿಯಾ ಹೌಸ್
ಭದ್ರಾವತಿ: ಪ್ರಧಾನ ಅಂಚೆ ಕ್ರಿಕೆಟ್ ಕಮಿಟಿ ಹಾಗೂ ಕಚೇರಿಯ ಮನೋರಂಜನಾ ಕೂಟದ ಸಹಯೋಗದಲ್ಲಿ ಎಪ್ರಿಲ್ 2ರಂದು 4ನೆಯ ಪೋಸ್ಟಲ್ ಕ್ರಿಕೆಟ್ ಲೀಗ್ 2021 ನಡೆಯಲಿದೆ.
ಈ ಕುರಿತಂತೆ ಮಾಹಿತಿ ನೀಡಿರುವ ಭದ್ರಾವತಿ ಪ್ರಧಾನ ಅಂಚೆ ಪಾಲಕ ವಿ. ಶಶಿಧರ್, ಅಂದು ವಿಐಎಸ್’ಎಲ್ ಸ್ಟೇಡಿಯಂನಲ್ಲಿ ಶಿವಮೊಗ್ಗ ವಿಭಾಗ ಅಂಚೆ ಅಧೀಕ್ಷಕ ಜಿ. ಹರೀಶ್ ಅವರು ಮುಂಜಾನೆ 7.30ಕ್ಕೆ ಉದ್ಘಾಟಿಸಲಿದ್ದಾರೆ. ವಿಭಾಗ ಅಂಚೆ ಅಧೀಕ್ಷಕಿ ಕೆ.ಆರ್. ಕುಮಾರಿ ಉಷಾ, ಭದ್ರಾವತಿ ಅಂಚೆ ನಿರೀಕ್ಷಕ ಪ್ರಹ್ಲಾದ್ ನಾಯಕ ಪಾಲ್ಗೊಳ್ಳಲಿದ್ದಾರೆ ಎಂದರು.
ಸಂಜೆ 6 ಗಂಟೆಗೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಶಿವಮೊಗ್ಗ ವಿಭಾಗ ಅಂಚೆ ಅಧೀಕ್ಷಕ ಜಿ. ಹರೀಶ್, ಭದ್ರಾವತಿ ಅಂಚೆ ಪಾಲಕ ವಿ. ಶಶಿಧರ್, ಶಿವಮೊಗ್ಗ ಪೂರ್ವ ವಲಯ ಸಹಾಯಕ ಅಂಚೆ ಅಧೀಕ್ಷಕ ಶ್ರೀನಿವಾಸ, ಮಾಜಿ ವಲಯ ಕಾರ್ಯದರ್ಶಿ ಎಸ್.ಎನ್. ಮಂಜುನಾಥ್, ಪ್ರಮುಖರಾದ ಪ್ರಕಾಶ್ ರಾವ್, ಕೆ.ಆರ್. ಉಷಾ, ಪ್ರಹ್ಲಾದ್ ನಾಯಕ್ ಸೇರಿದಂತೆ ಹಲವರು ಇರಲಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post