ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ನಗರದ ಇತಿಹಾಸ ಪ್ರಸಿದ್ಧ ಶ್ರೀ ಲಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನದಲ್ಲಿ Shri Lakshminarsimha Temple ಡಿ. 23ರ ಶನಿವಾರ ವೈಕುಂಠ ಏಕಾದಶಿ Vaikunta Ekadashi ಅಂಗವಾಗಿ ವಿಶೇಷ ಪೂಜೆ ಹಾಗೂ ವೈಕುಂಠನಾಥದ ದರ್ಶನ ನಡೆಯಲಿದೆ ಎಂದು ತಹಶೀಲ್ದಾರ್ ಹಾಗೂ ಮುಜರಾಯಿ ಅಧಿಕಾರಿಯೂ ಆದ ಕೆ.ಆರ್. ನಾಗರಾಜ್ ತಿಳಿಸಿದರು.
ಈ ಕುರಿತಂತೆ ಮಾತನಾಡಿದ ಅವರು, ಅಂದು ಬೆಳಿಗ್ಗೆ 4.30 ಕ್ಕೆ ವೈಕುಂಠ ದ್ವಾರ ತೆರೆಯುವ ಮೂಲಕ ಭಕ್ತಾಗಳಿಗೆ ವೈಕುಂಠನಾಥನ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದರು.
ಎಂದಿನಂತೆ ಉಚಿತ ದರ್ಶನ ಇದ್ದು ವಿಶೇಷ ದರ್ಶನಕ್ಕಾಗಿ ಒಂದು ಸಾವಿರ ರೂ.ಗಳಿಗೆ 4 ಜನ, 500 ರೂ.ಗಳಿಗೆ 2 ಪ್ರವೇಶ ಕಲ್ಪಿಸಲಾಗಿದೆ. ಭದ್ರತೆ ದೃಷ್ಟಿಯಿಂದ ಸಿಸಿ ಕ್ಯಾಮರಗಳನ್ನು ಅಳವಡಿಸಲಾಗಿದೆ ಎಂದರು.
Also read: ಬಾಲಿವುಡ್ ನಟಿ ಕಂಗನಾ ಬಿಜೆಪಿಯಿಂದ ಚುನಾವಣೆಗೆ ಸ್ಪರ್ಧಿಸುವುದು ನಿಶ್ಚಿತ?
ಭಕ್ತಾದಿಗಳ ಅನುಕೂಲಕ್ಕಾಗಿ ಸಂಚಾರಿ ಶೌಚಾಲಯ ವ್ಯವಸ್ಥೆ ಮಾಡಲಾಗಿದೆ. ರಕ್ಷಣಾ ಇಲಾಖೆ ಸಹಕಾರದಿಂದ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದೆ. ವಾಹನ ನಿಲ್ಲಿಸಲು ವ್ಯವಸ್ಥೆ ಇರುತ್ತದೆ ಎಂದರು.
ದೇವಾಲಯದ ಪ್ರಧಾನ ಅರ್ಚಕ ವೇ.ಬ್ರ. ರಂಗನಾಥ್ ಶರ್ಮ ಮಾತನಾಡಿ, ರಾಜ್ಯದಲ್ಲೇ ವಿಶಿಷ್ಟವಾಗಿ ವೈಕುಂಠ ದರ್ಶನದ ವ್ಯವಸ್ಥೆಯನ್ನು ಭಕ್ತಾದಿಗಳಿಗೆ ಇಲ್ಲಿ ಮಾಡಲಾಗಿದೆ. ಬೇರೆ ಕಡೆ ಕೇವಲ ದೇವರ ದರ್ಶನ ಮಾಡುವ ವ್ಯವಸ್ಥೆ ಇದ್ದರೆ, ಇಲ್ಲಿ ವೈಕುಂಠ ದ್ವಾರವನ್ನು ತೆರೆಯುವ ಮೂಲಕ ದೇವರ ದರ್ಶನ ಮಾಡಲಾಗುತ್ತದೆ. ಇಲ್ಲಿ ಆಗಮ ಶಾಸ್ತç ರೀತ್ಯ ಪೂಜೆ ಪುನಸ್ಕಾರಗಳನ್ನು ಮಾಡಲಾಗುತ್ತದೆ. ದಾನಿಗಳ ನೆರವಿ ನಿಂದ ಭಲ್ಲದಿಗಳಿಗೆ ಲಡ್ಡು ಪ್ರಸಾದ ವಿತರಿಸಲಾಗುವುದು ಎಂದರು.
ದೇವಾಲಯ ಸಮಿತಿ ಅಧ್ಯಕ್ಷ ಮಾರುತಿ ಮಾತನಾಡಿ, ದೇವರ ಪೂಜಾ ಕಾರ್ಯಕ್ರಮದ ಚಿತ್ರೀಕರಣ ನಡೆಸಿ, ಯಜಟ್ಯೂಬ್ ಮೂಲಕ ಪ್ರಸಾರ ಮಾಡುವ ವ್ಯವಸ್ಥೆ ಮಾಡಲಾಗಿದೆ ಎಂದರು.
ಕಂದಾಯಾಧಿಕಾರಿಗಳಾದ ಮಂಜಾನಾಯ್ಕ್, ಪ್ರಶಾಂತ್, ದೇವಾಲಯದ ಸಹಾಯಕ ಅರ್ಚಕ ಶ್ರೀನಿವಾಸ್, ಸಮಿತಿ ಸದಸ್ಯರಾದ ವಿಶ್ವೇಶ್ವರ ರಾವ್, ಆಶಾ ಪುಟ್ಟಸ್ವಾಮಿ, ಗಿರಿ ನಾಯ್ಡು ಜದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post