ಭದ್ರಾವತಿ: ಶಿವಮೊಗ್ಗದಿಂದ ಭದ್ರಾವತಿ ಕಡೆಗೆ ಬರುತ್ತಿದ್ದ ಸರ್ಕಾರಿ ಬಸ್’ನಲ್ಲಿ ನಹೀಮ ಖಾನ್ ಎಂಬ ಮಹಿಳೆಯೊಬ್ಬರು 7 ಕೆಜಿ ಗಾಂಜಾ ಸಾಗಿಸುತ್ತಿದ್ದಾಗ ಡಿಸಿಐಬಿ ಪೋಲೀಸರ ಕೈಗೆ ಸಿಕ್ಕಿಬಿದ್ದ ಘಟನೆ ಇಂದು ನಡೆದಿದೆ.
ನ್ಯೂಟೌನ್ ಪೊಲೀಸರು ಇಂದು ನಡೆಸಿದ ಕ್ಷಿಪ್ರ ಕಾರ್ಯಾಚರಣೆಯ ವೇಳೆ ಗಾಂಜಾ ಸಾಗಿಸುತ್ತಿದ್ದ ಮಹಿಳೆಯನ್ನು ಬಂಧಿಸಿರುವ ಪೊಲೀಸರು, ಪ್ರಕರಣ ದಾಖಲಿಸಿದ್ದಾರೆ.
ಶಿವಮೊಗ್ಗದಿಂದ ಭದ್ರಾವತಿ ಕಡೆ ಬರುತ್ತಿದ್ದ ಕೆಎಸ್ಆರ್ಟಿಸಿ ಬಸ್’ನಲ್ಲಿ ಪ್ರಯಾಣಿಕರೋರ್ವರು ಗಾಂಜಾ ಸಾಗಿಸುತ್ತಿರುವ ಕುರಿತಂತೆ ಜಿಲ್ಲಾ ರಕ್ಷಣಾಧಿಕಾರಿ ಡಾ.ಅಶ್ವಿನಿ ಅವರಿಗೆ ಲಭಿಸಿದ ಖಚಿತ ಮಾಹಿತಿ ಆಧಾರದಲ್ಲಿ ನ್ಯೂಟೌನ್ ಪೊಲೀಸರು ತಪಾಸಣೆ ನಡೆಸಿದ್ದಾರೆ.
ಡಿಸಿಐಬಿ ಇನ್ಸ್’ಪೆಕ್ಟರ್ ಸಂಗಮೇಶ್ ಪಾಟೀಲ್ ಅವರ ತಂಡ ಭದ್ರಾವತಿ ಬೈಪಾಸ್ ಬಳಿಯ ಬಿಳಕಿ ಕ್ರಾಸ್’ನಲ್ಲಿ ಬಸ್ ತಡೆದು ನಿಲ್ಲಿಸಿ ತಪಾಸಣೆ ಮಾಡಿದ್ದಾರೆ. ಈ ವೇಳೆ ಆನ್’ಲೈನ್’ನಲ್ಲಿ ಬರುವ ವಸ್ತುಗಳನ್ನು ಪ್ಯಾಕ್ ಮಾಡುವ ರೀತಿಯಲ್ಲಿಯೇ ಪ್ಯಾಕ್ ಮಾಡಲಾದ ಬಾಕ್ಸ್ ಹೊಂದಿದ್ದ ನಹೀಮ್ ಖಾನ್ ಎಂಬ ಮಹಿಳೆಯ ಬಳಿ ಪತ್ತೆಯಾಗಿದೆ.
ಬಾಕ್ಸ್ ಅನ್ನು ತಪಾಸಣೆ ಮಾಡಲು ಪೊಲೀಸರು ಮುಂದಾದ ವೇಳೆ ಆಕೆ ಅನುಮಾನಾಸ್ಪದವಾಗಿ ವರ್ತನೆ ಮಾಡಿದ್ದು, ಆಕೆಯನ್ನು ಸ್ಥಳದಲ್ಲೇ ವಿಚಾರಣೆ ಮಾಡಿ, ಬಾಕ್ಸ್ ತೆರೆಯಲಾಗಿದೆ.
ಬಾಕ್ಸ್’ನಲ್ಲಿ ಸುಮಾರು 35 ಕೆಜಿ ಬೆಲೆ ಬಾಳುವ 7 ಕೆಜಿ ಗಾಂಜಾ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಗಾಂಜಾ, ಆಕೆಯ ಬಳಿಯದ್ದ ಮೊಬೈಲ್’ನ್ನು ವಶಕ್ಕೆ ಪಡೆದು ಆಕೆಯನ್ನು ಬಂಧಿಸಲಾಗಿದೆ.
ಬಂಧಿನ ಮಹಿಳೆ ತಾಲೂಕಿನ ಗೌಡರಹಳ್ಳಿ ನಿವಾಸಿಯಾಗಿದ್ದು, ಫ್ಯಾನ್ಸಿ ವಸ್ತುಗಳನ್ನು ಮಾರಾಟ ಮಾಡುವ ವೃತ್ತಿಯವರು ಎನ್ನಲಾಗಿದೆ. ನ್ಯೂಟೌನ್ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣವನ್ನು ಭೇಧಿಸಿ ಆರೋಪಿಯನ್ನು ಮಾಲು ಸಹಿತ ಬಂಧಿಸಿರುವ ಡಿಸಿಐಬಿ ತಂಡದ ಕಾರ್ಯಕ್ಕೆ ಜಿಲ್ಲಾರಕ್ಷಣಾಧಿಕಾರಿ ಡಾ.ಅಶ್ವಿನಿ ಮತ್ತು ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಡಾ.ಶೇಖರ್ ಅಭಿನಂದಿಸಿದ್ದಾರೆ.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Discussion about this post