ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ತನ್ನ ಕಣ್ಣಿಗೆ ಜಿಗಣೆ ಕಚ್ಚಿಕೊಂಡಿದೆ ಎಂದು ತಪ್ಪು ತಿಳಿದುಕೊಂಡು ವ್ಯಕ್ತಿಯೊಬ್ಬ ತಿಳಿಯದೇ ತನ್ನದೇ ಕಣ್ಣು ಗುಡ್ಡೆಯನ್ನೇ ಕಿತ್ತೆಸೆದಿರುವ ಘಟನೆ ನಗರದಲ್ಲಿ ನಡೆದಿದೆ.
ಏನಿದು ಘಟನೆ?
ನಂಜುಂಡಸ್ವಾಮಿ(75) ಎಂಬ ವ್ಯಕ್ತಿಯೇ ಕಣ್ಣು ಗುಡ್ಡೆಯನ್ನೇ ಕಿತ್ತೆಸೆದ ವ್ಯಕ್ತಿ. ಜ.12ರಂದು ರಾತ್ರಿ ಟಿವಿ ನೋಡುತ್ತಿದ್ದ ನಂಜುಂಡಸ್ವಾಮಿ ಮಕ್ಕಳಿಗೆ ಚಾಕೊಲೇಟ್ ಕೊಡಿಸಿ, ಆನಂತರ ಮನೆಯ ಹೊರಗೆ ಕುಳಿತಿದ್ದಾರೆ. ಈ ವೇಳೆ ಕಣ್ಣಿನಲ್ಲಿ ಕಿರಿಕಿರಿ ಉಂಟಾಗಿದ್ದು, ಯಾವುದೇ ಹುಳ ಅಥವಾ ಜಿಗಣೆ ಸೇರಿಕೊಂಡಿದೆ ಎಂದು ಭಾವಿಸಿ, ತಮ್ಮ ಬಲ ಕಣ್ಣಿನ ಗುಡ್ಡೆಯನ್ನೇ ಕಿತ್ತು ಬಿಸಾಡಿದ್ದಾರೆ.
ಈ ವೇಳೆ ಹೊರಕ್ಕೆ ಬಂದ ನಂಜುಂಡಸ್ವಾಮಿಯವರ ಪುತ್ರ ಷಣ್ಮುಖ, ತಮ್ಮ ತಂದೆಯ ಕಣ್ಣಲ್ಲಿ ರಕ್ತ ಸೋರುತ್ತಿರುವುದನ್ನು ಗಮನಿಸಿ, ಜಜ್ಜಿದ್ದ ಜಾಗಕ್ಕೆ ಬೆಳಕು ಬಿಟ್ಟು ನೋಡಿದ್ದಾರೆ. ತಮ್ಮ ಮಗ ಹೊಡೆದಿದ್ದು ಜಿಗಣೆಯಲ್ಲ, ಬದಲಾಗಿ ತಮ್ಮ ತಂದೆಯ ಕಣ್ಣಿನ ಗುಡ್ಡೆ ಎಂಬುದು ತಿಳಿದಿದೆ.
ಶಂಕರ ಕಣ್ಣಿನ ಆಸ್ಪತ್ರೆಗೆ ಕರೆದುಕೊಂಡು ಬಂದು ವೈದ್ಯರ ಸಲಹೆ ಮೇರೆಗೆ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post