Read - 2 minutes
ಕಲ್ಪ ಮೀಡಿಯಾ ಹೌಸ್ | ಬೀದರ್ |
ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಎಸ್ ಎಮ್ ಕೃಷ್ಣಾನಗರ, ಜಮಿಸ್ತಾನಪುರ, ಬೆಳ್ಳೂರು ಸೇರಿದಂತೆ ವಿವಿಧೆಡೆ ಬುಧವಾರ ಬೆಳಗ್ಗೆ ಮಾಜಿ ಸಚಿವರು, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರು, ಬೀದರ್ ದಕ್ಷಿಣ ಕ್ಷೇತ್ರದ ಶಾಸಕರು, ಜೆಡಿಎಸ್ ಅಭ್ಯರ್ಥಿಯಾಗಿರುವ ಬಂಡೆಪ್ಪ ಖಾಶೆಂಪುರ್ Bandeppa Khashempur ಮತಯಾಚನಾ ಯಾತ್ರೆ (ಚುನಾವಣಾ ಪ್ರಚಾರ) ನಡೆಸಿದರು.ಕ್ಷೇತ್ರದ ಎಸ್ ಎಮ್ ಕೃಷ್ಣಾನಗರ, ಜಮಿಸ್ತಾನಪುರ, ಬೆಳ್ಳೂರುಗಳ ಜೆಡಿಎಸ್ ಕಾರ್ಯಕರ್ತರು, ಅಭಿಮಾನಿಗಳು ಶಾಸಕ ಬಂಡೆಪ್ಪ ಖಾಶೆಂಪುರ್ ರವರನ್ನು ಬಾಜಾ ಭಜಂತ್ರಿಗಳೊಂದಿಗೆ ಅದ್ದೂರಿಯಾಗಿ ಬರಮಾಡಿಕೊಂಡರು. ಮತಯಾಚನೆ ನಡೆಸಿ ಮಾತನಾಡಿದ ಶಾಸಕರು, ಮೂರು ಬಾರಿ ಶಾಸಕನಾಗಿ ನಾನು ಅನೇಕ ಜನಪರ ಕೆಲಸಗಳನ್ನು ಮಾಡಿದ್ದಿನಿ. ಎರಡು ಬಾರಿ ಸಚಿವನಾಗಿದ್ದಾಗಲೂ ಮಹತ್ವದ ಯೋಜನೆಗಳನ್ನು ಜಾರಿಗೊಳಿಸುವ ಕೆಲಸ ಮಾಡಿದ್ದೇನೆ. ಈ ಬಾರಿ ಕೂಡ ನನ್ನನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.
ಚುನಾವಣಾ ಪ್ರಚಾರದ ನಡುವೆಯೇ ಅವರು ಗ್ರಾಮಗಳ ಮಂದಿರ, ದರ್ಗಾ, ಚರ್ಚ್ ಗಳಿಗೆ ಭೇಟಿ ನೀಡಿ, ಮಹಾತ್ಮರ ಪುತ್ಥಳಿ, ಪ್ರತಿಮೆ, ಪೋಟೋಗಳಿಗೆ ಮಾಲಾರ್ಪಣೆ ಮಾಡಿದರು. ವಿವಿಧೆಡೆ ಅನೇಕರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು. ಮತಯಾಚನಾ ಯಾತ್ರೆಯುದ್ದಕ್ಕೂ ಬಾಜಾ ಭಜಂತ್ರಿಗಳೊಂದಿಗೆ ಶಾಸಕ ಬಂಡೆಪ್ಪ ಖಾಶೆಂಪುರ್ ರವರನ್ನು ಸ್ವಾಗತಿಸಲಾಯಿತು.
‘ಇಂದು ನೀವೇ ಮುಂದೆಯೂ ನೀವೇ ನಮ್ಮ ಶಾಸಕರು’:
ಶಾಸಕ ಬಂಡೆಪ್ಪ ಖಾಶೆಂಪುರ್ ರವರ ಮತಯಾಚನೆಯ ವೇಳೆ ಅವರ ಅಭಿಮಾನಿಗಳು, ಕಾರ್ಯಕರ್ತರ ಘೋಷಣೆಗಳನ್ನು ಕೂಗಿ ‘ಇಂದು ನೀವೇ ಮುಂದೆಯೂ ನೀವೇ ನಮ್ಮ ಶಾಸಕರು’, ಮುಂದಿನ ಡಿಸಿಎಂ ಬಂಡೆಪ್ಪ ಖಾಶೆಂಪುರ್ ರವರಿಗೆ ಜಯವಾಗಲಿ, ಜೆಡಿಎಸ್ ಪಕ್ಷಕ್ಕೆ ಜಯವಾಗಲಿ ಎಂದು ಹರ್ಷೋದ್ಗಾರ ಮೊಳಗಿಸಿದರು. ಮತಯಾಚನೆ ಯಾತ್ರೆಯುದ್ದಕ್ಕೂ ಸಿಳ್ಳೆ, ಕೇಕೆ, ಪಟಾಕಿಗಳ ಸದ್ದು ಮಾರ್ಧನಿಸಿತು.
Discussion about this post