ಕಲ್ಪ ಮೀಡಿಯಾ ಹೌಸ್ | ಬೀದರ್ |
ರಾಜ್ಯದಲ್ಲಿ ಅತಿಹೆಚ್ಚು ಶುಂಠಿ ಬೆಳೆಯುವ ಜಿಲ್ಲೆಗಳಲ್ಲಿ ಬೀದರ್ ಜಿಲ್ಲೆಯೂ ಒಂದಾಗಿದೆ. ಆದರೆ ಇದುವರೆಗೂ ಶುಂಠಿಗೆ ಸಂಬಂಧಿಸಿದ ಒಂದೇ ಒಂದು ಸಂಸ್ಕರಣಾ ಘಟಕ (ಪ್ರೊಸೆಸಿಂಗ್ ಯೂನಿಟ್) ಇಲ್ಲಿ ನಿರ್ಮಾಣವಾಗಿಲ್ಲ. ಸಂಸ್ಕರಣಾ ಘಟಕ ನಿರ್ಮಾಣಕ್ಕೆ ಮಹತ್ವ ನೀಡುವ ಮೂಲಕ ಶುಂಠಿ ಬೆಳೆಗಾರ ರೈತರಿಗೆ ನೆರವಾಗಿ ಎಂದು ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಬಂಡೆಪ್ಪ ಖಾಶೆಂಪುರ್ MLA Bandeppa Khashempur ಶುಂಠಿ ಬೆಳೆಗಾರರ ಪರವಾಗಿ ಸದನದಲ್ಲಿ ಧ್ವನಿ ಎತ್ತಿದರು.
ಬೆಳಗಾವಿಯ ಸುವರ್ಣ ವಿಧಾನ ಸೌಧದಲ್ಲಿರುವ ವಿಧಾನ ಸಭೆಯ ಸಭಾಂಗಣದಲ್ಲಿ ಶುಕ್ರವಾರ ನಡೆದ 15ನೇ ವಿಧಾನ ಸಭೆಯ 14ನೇ ಅಧಿವೇಶನ (ಚಳಿಗಾಲದ ಅಧಿವೇಶನ)ದ ಐದನೇ ದಿನದ ಕಲಾಪದಲ್ಲಿ ಪಾಲ್ಗೊಂಡು, ಪ್ರಶ್ನೋತ್ತರದ ವೇಳೆ ಮಾತನಾಡಿದ ಅವರು, ಶುಂಠಿ ಬೆಳೆಗೆ ಸರಿಯಾದ ಬೆಲೆ ಸಿಗದ ಕಾರಣ ಜಿಲ್ಲೆಯ ರೈತರ ಶುಂಠಿ ಕಟಾವು ಮಾಡದೇ ಭೂಮಿಯಲ್ಲೇ ಬಿಟ್ಟಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಈ ಹಿಂದೆ ಕುಮಾರಸ್ವಾಮಿರವರು ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದಲ್ಲಿ ಒಂಬತ್ತು ಕ್ಲಸ್ಟರ್ ಗಳನ್ನು ಘೋಷಣೆ ಮಾಡಿ, ಬೀದರ್ ನಲ್ಲಿ ಕೃಷಿ ಸುಧಾರಣೆಗೆ ಒತ್ತು ನೀಡಿದ್ದರು. ಅದನ್ನು ಮುಂದುವರೆಸುವುದು ನಿಮ್ಮ ಕೆಲಸವಾಗಿದೆ. ಜೊತೆಗೆ ಬೀದರ್ ನಲ್ಲಿ ಬೆಳೆಯುವ ಶುಂಠಿ ಉತ್ಪನ್ನಗಳ ಮೌಲ್ಯ ವರ್ಧನೆಗೆ ಆದ್ಯತೆ ನೀಡಬೇಕು ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಸರ್ಕಾರವನ್ನು ಒತ್ತಾಯಿಸಿದರು.
ಉತ್ತರ ನೀಡಿ ಮಾತನಾಡಿದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರಗೇಶ್ ನಿರಾಣಿ, ಬಂಡೆಪ್ಪ ಖಾಶೆಂಪುರ್ ಅವರು ಕೇವಲ ರಾಜಕಾರಣಿ ಮಾತ್ರವಲ್ಲ. ಅವರೊಬ್ಬ ಕೈಗಾರಿಕೋದ್ಯಮಿಯಾಗಿದ್ದಾರೆ. ಶುಂಠಿ ಬಗ್ಗೆ ಮತ್ತು ಬಯೋ ಪ್ರಾಡಕ್ಟ್ ಗಳ ಬಗ್ಗೆ ಅವರಿಗೆ ಮಾಹಿತಿ ಇದೆ. ಅವರೇ ಉದ್ಯಮ ಆರಂಭಿಸಲಿ, ಅದಕ್ಕೆ ನಾವು ಸರ್ಕಾರದಿಂದ ಏನೆಲ್ಲಾ ಸಹಾಯ ಮಾಡಲು ಸಾಧ್ಯವೋ ಸಹಾಯ ಮಾಡುತ್ತೇವೆ. ಬೇರೆ ಬೇರೆ ಕಡೆ ಹೂಡಿಕೆದಾರರು ಇದ್ದರೆ ಅವರನ್ನು ಒದಗಿಸಿಕೊಡಲು ಪ್ರಯತ್ನಿಸುತ್ತೇವೆ ಎಂದು ತಮಾ?ಯಾಗಿ ನುಡಿದರು. ಬೀದರ್ ಭಾಗದ ಶುಂಠಿ ಬೆಳೆಯ ಬಗ್ಗೆ ಮುಂದಿನ ದಿನಗಳಲ್ಲಿ ಸಭೆ ನಡೆಸಿ, ಯಾವ ರೀತಿಯಲ್ಲಿ ರೈತರಿಗೆ ನೆರವು ನೀಡಲು ಸಾಧ್ಯವೋ ಆ ರೀತಿಯ ನೆರವು ನೀಡುತ್ತೇವೆಂದು ಸಚಿವರು ಭರವಸೆ ನೀಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post