ಕಲ್ಪ ಮೀಡಿಯಾ ಹೌಸ್ | ಬೀದರ್ |
ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಬಂಡೆಪ್ಪ ಖಾಶೆಂಪುರ್ ರವರ MLA Bandeppa Khashempur ಸಮ್ಮುಖದಲ್ಲಿ ಕ್ಷೇತ್ರದ ಮರಕುಂದಾ, ವರ್ಕಾಣ, ಸಿಂದೋಲ್, ಕಪಲಾಪೂರ, ಬೈರನಳ್ಳಿ ಸೇರಿದಂತೆ ವಿವಿಧ ಗ್ರಾಮಗಳ ಯುವಕರು, ಮಹಿಳೆಯರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು.
ಬಳಿಕ ನಮ್ಮ ನಾಯಕರು ಕ್ಷೇತ್ರದ ಮನ್ನಾಎಖೇಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಇದೇ ವೇಳೆ ಮನ್ನಾಎಖೇಳ್ಳಿ ಗ್ರಾಮದಲ್ಲಿ ಅನೇಕರನ್ನು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡರು. ಈ ಸಂದರ್ಭದಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ಸೇರಿದಂತೆ ಅನೇಕರಿದ್ದರು.
ನಂತರ ತೆಲಂಗಾಣ ರಾಜ್ಯದ ಜೈರಾಬಾದ್ ನಲ್ಲಿ ಯುವ ಮುಖಂಡ ಮಹಮ್ಮದ್ ತನ್ವೀರ್ ಏರ್ಪಡಿಸಿದ್ದ ಇಪ್ತಾರ್ ಕೂಟದಲ್ಲಿ ತೆಲಂಗಾಣದ ಸಚಿವ ಹರೀಶ್, ಜೈರಾಬಾದ್ ಸಂಸದ ಬಿ.ಬಿ. ಪಾಟೀಲ್ ರವರು ಸೇರಿದಂತೆ ಅನೇಕ ಗಣ್ಯರೊಂದಿಗೆ ಬಂಡೆಪ್ಪ ಖಾಶೆಂಪುರ್ ಪಾಲ್ಗೊಂಡರು.
Also read: ಚೂರಿ ಇರಿತ ಹಿನ್ನೆಲೆ: ಐವರಿಗೆ ಮೂರು ವರ್ಷ ಕಠಿಣ ಜೈಲು ಶಿಕ್ಷೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post