Read - 2 minutes
ಕಲ್ಪ ಮೀಡಿಯಾ ಹೌಸ್ | ಬೀದರ್ |
ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ನಿರ್ಣಾ ಗ್ರಾಮದ ಕಾಂಗ್ರೆಸ್, ಬಿಜೆಪಿ ಪಕ್ಷಗಳ ನೂರಾರು ಜನ ಯುವಕರು, ಬಸವಕಲ್ಯಾಣ ಭಾಗದ ನಿವೃತ್ತ ಎಎಸ್ಐ ಪ್ರೇಮ್ ರೋಸ್ ಸಿರ್ಗಾರವರು ಸೇರಿದಂತೆ ಅನೇಕರು ಮಾಜಿ ಸಚಿವರು, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರು, ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಬಂಡೆಪ್ಪ ಖಾಶೆಂಪುರ್ ರವರ MLA Bandeppa Khashempur ಸಮ್ಮುಖದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು.
ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಖಾಶೆಂಪುರ್ ಪಿ ಗ್ರಾಮದ ಹೊರವಲಯದಲ್ಲಿರುವ ತಮ್ಮ ನಿವಾಸದ ಆವರಣದಲ್ಲಿ ನಿರ್ಣಾ ಗ್ರಾಮದ ಯುವಕರಿಗೆ, ಬಸವಕಲ್ಯಾಣ ಭಾಗದ ನಿವೃತ್ತ ಎಎಸ್ಐರವರಿಗೆ ಬುಧವಾರ ಜೆಡಿಎಸ್ ಶಾಲು ಹೊದಿಸಿ, ಪಕ್ಷದ ಧ್ವಜ ನೀಡುವ ಮೂಲಕ ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಜೆಡಿಎಸ್ ಪಕ್ಷಕ್ಕೆ ಬರಮಾಡಿಕೊಂಡರು.
ನೂತನವಾಗಿ ಜೆಡಿಎಸ್ ಸೇರಿದ ಮುಖಂಡರು, ಕಾರ್ಯಕರ್ತರೊಂದಿಗೆ ಸಭೆ ನಡೆಸಿ ಮಾತನಾಡಿದ ಶಾಸಕ ಬಂಡೆಪ್ಪ ಖಾಶೆಂಪುರ್ ರವರು, ನೂರಾರು ಸಂಖ್ಯೆಯಲ್ಲಿ ನಿರ್ಣಾ ಭಾಗದ ಅನೇಕರು ಜೆಡಿಎಸ್ ಸೇರಿರುವುದು ಸಂತಸದ ವಿಷಯವಾಗಿದೆ. ಇದರೊಂದಿಗೆ ಪಕ್ಷಕ್ಕೆ ಇನ್ನಷ್ಟು ಬಲ ಬಂದಂತಾಗಿದೆ. ಎಲ್ಲರೂ ಸೇರಿ ಪಕ್ಷವನ್ನು ಅಧಿಕಾರಕ್ಕೆ ತರುವ ಕೆಲಸ ಮಾಡಬೇಕಾಗಿದೆ. ಆ ನಿಟ್ಟಿನಲ್ಲಿ ಎಲ್ಲರೂ ಕೆಲಸ ಮಾಡೋಣ ಎಂದು ನೂತನ ಮುಖಂಡರಿಗೆ, ಕಾರ್ಯಕರ್ತರಿಗೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಬಸವಕಲ್ಯಾಣದ ಸೈಯದ್ ಯಶ್ರಬ್ ಅಲಿ ಖಾದ್ರಿ, ಬೀದರ್ ದಕ್ಷಿಣ ಜೆಡಿಎಸ್ ಅಧ್ಯಕ್ಷ ಸಂಜೀವರೆಡ್ಡಿ ನಿರ್ಣಾ, ಬಸವಕಲ್ಯಾಣ ಜೆಡಿಎಸ್ ತಾಲೂಕು ಅಧ್ಯಕ್ಷ ಸೈಯದ್ ಹರ್ಷದ್ ಅಲಿ, ಮುಖಂಡರಾದ ಸಂಜಯ್ ಶ್ರೀವಾಸ್ತವ್, ಗೌಸ್ ಹೀರಾ, ಅಶೋಕ್ ಬಂದಾ, ಅಭಿಮನ್ಯು, ಗಣೇಶ್, ಆನಂದ್, ಅವಿನಾಶ್, ಶಿವಾನಂದ, ನಾರಾಯಣರೆಡ್ಡಿ, ಮಾರ್ಟಿನ್, ಅಂತಯ್ಯ, ಗುರುನಾಥ, ವೀರಶೆಟ್ಟಿ, ಗೋಪಾಲ್, ಸಾಗರ್, ಮಂಜುನಾಥ, ನಾಗರಾಜ್, ಕಾಶೀನಾಥ್, ಮೋಹನ್ ಸೇರಿದಂತೆ ಅನೇಕರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post