ನವದೆಹಲಿ: ಭಯೋತ್ಪಾದನಾ ನಿಗ್ರಹ ರಾಷ್ಟ್ರೀಯ ತನಿಖಾ ಸಂಸ್ಥೆಯನ್ನು ಬಲಿಷ್ಠಗೊಳಿಸುವ ಕಾಯ್ದೆ ಲೋಕಸಭೆಯಲ್ಲಿಂದು ಅಂಗೀಕಾರವಾಗಿದ್ದು, ಈ ಮೂಲಕ ಜಾತ್ಯತೀತವಾಗಿ ಭಯೋತ್ಪಾದಕರನ್ನು ಧಮನ ಮಾಡುವ ವೇದಿಕೆಯನ್ನು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಸಜ್ಜುಗೊಳಿಸಿದೆ.
ಆಡಳಿತ ಹಾಗೂ ಪ್ರತಿಪಕ್ಷಗಳ ನಡುವೆ ವಾಕ್ಸಮರಕ್ಕೆ ಕಾರಣವಾಗಿದ್ದ ಈ ಕಾಯ್ದೆ ಲೋಕಸಭೆಯಲ್ಲಿ ಇಂದು ಅಂಗೀಕಾರಗೊಂಡಿದ್ದು, ವಿದೇಶಗಳಲ್ಲಿಯೂ ಭಾರತೀಯ ಮೇಲೆ ನಡೆದ ದಾಳಿಯ ತನಿಖೆ ನಡೆಸಲು ಎನ್’ಐಎಗೆ ವಿಶೇಷ ಅಧಿಕಾರ ನೀಡುವ ಕಾಯ್ದೆ ಇದಾಗಿರುವುದು ವಿಶೇಷ.
ಇನ್ನು ಈ ಕುರಿತಂತೆ ಮಾತನಾಡಿರುವ ಗೃಹ ಸಚಿವ ಅಮಿತ್ ಶಾ, ಎನ್’ಐಎ (ತಿದ್ದುಪಡಿ) ಮಸೂದೆ 2019 ಅನ್ನು ಸರ್ಕಾರ ಯಾವ ಕಾರಣಕ್ಕೂ ದುರ್ಬಳಕೆ ಮಾಡಿಕೊಳ್ಳುವುದಿಲ್ಲ. ಅಷ್ಟೇ ಅಲ್ಲ ಧಾರ್ಮಿಕ ನೆಲೆಯಲ್ಲೂ ಕಾಯ್ದೆಯನ್ನು ದುರುಪಯೋಗಪಡಿಸಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಕಾಯ್ದೆಯ ಅಡಿಯಲ್ಲಿ ಆರೋಪಿ ಯಾವುದೇ ಮತ, ಧರ್ಮಕ್ಕೆ ಸೇರಿರಲಿ, ಜಾತ್ಯತೀತವಾಗಿ ಭಯೋತ್ಪಾದನೆಯನ್ನು ಮಟ್ಟಹಾಕುವುದೇ ಸರ್ಕಾರದ ಧ್ಯೇಯವಾಗಿದೆ ಎಂದಿದ್ದಾರೆ.
Discussion about this post