ನವದೆಹಲಿ: ಬಾಲಾಕೋಟ್ ಮೇಲೆ ಭಾರತೀಯ ವಾಯುಸೇನೆ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಭಾರತದ ವಿಮಾನಗಳಿಗೆ ತನ್ನ ವೈಮಾನಿಕ ವಲಯಕ್ಕೆ ಪಾಕಿಸ್ಥಾನ ವಿಧಿಸಿದ್ದ ನಿಷೇಧವನ್ನು ಇದೇ ಮೊದಲ ಬಾರಿಗೆ ತೆರವುಗೊಳಿಸಿದೆ.
ಭಾರತೀಯ ವಾಯುಸೇನೆ ಬಾಲಾಕೋಟ್ ಮೇಲೆ ದಾಳಿ ನಡೆಸಿದ ಹಿನ್ನೆಲೆಯಲ್ಲಿ, ಮತ್ತೆ ವಾಯುದಾಳಿ ನಡೆಯುವ ಸಾಧ್ಯತೆಯಿದೆ ಎಂಬ ಅನುಮಾನದಲ್ಲಿ ಅಲ್ಲಿನ ಸರ್ಕಾರ ಭಾರತ ವಿಮಾಗಳಿಗೆ ತನ್ನ ಗಡಿಯಲ್ಲಿ ಸಂಚಾರವನ್ನು ನಿಷೇಧಿಸಿತ್ತು. ಇದನ್ನು ಈಗ ತೆರವುಗೊಳಿಸಿದ್ದು, ಇಂದು ಮುಂಜಾನೆಯಿಂದಲೇ ವಿಮಾನ ಸಂಚಾರ ಪುನಾರಂಭಗೊಂಡಿದೆ.
ನಿಷೇಧದ ಪರಿಣಾಮ ಪಾಕಿಸ್ಥಾನ ಹಾಗೂ ಇತರೆ ದೇಶಗಳ ನಾಗರಿಕ ವಿಮಾನಯಾನ ಹಾರಾಟ ಕೂಡ ಪಾಕ್ ವಾಯು ಗಡಿಯಲ್ಲಿ ರದ್ದಾಗಿತ್ತು. ಈ ಹಿನ್ನೆಲೆಯಲ್ಲಿ ಪಾಕಿಸ್ಥಾನ ತನ್ನ ವಾಯುಗಡಿ ತೆರೆಯುವಂತೆ ಅಂತಾರಾಷ್ಟ್ರೀಯ ಸಮುದಾಯದಿಂದ ವ್ಯಾಪಕ ಒತ್ತಡ ಕೇಳಿ ಬಂದಿತ್ತು. ಭಾರತೀಯ ವಾಯು ಸೇನೆಯ ವಾಯುದಾಳಿ ನಡೆದ ನಾಲ್ಕು ತಿಂಗಳ ಬಳಿಕ ಇದೀಗ ಪಾಕಿಸ್ಥಾನ ಕೊನೆಗೂ ನಾಗರಿಕ ವಿಮಾನ ಸೇವೆಗೆ ತನ್ನ ವಾಯುಗಡಿಯನ್ನು ತೆರೆದಿದೆ.
Discussion about this post