Saturday, March 25, 2023
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಪ್ರಕಾಶ್ ಅಮ್ಮಣ್ಣಾಯ
    • ವಿನಯ್ ಶಿವಮೊಗ್ಗ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ದಕ್ಷ

ಬುಲೆಟ್ ಸವಾರಿ-10: ದೇವರ ನಾಡಲ್ಲಿ ಹಂತರಕ ಜಾಡು-2

January 30, 2018
in ದಕ್ಷ
0 0
0
Share on facebookShare on TwitterWhatsapp
Read - 2 minutes

ರಾಜನ್‌ನ ಹೆಂಡತಿಯ ಅಕ್ಕನ ಗಂಡ ರಾಜೇಂದ್ರ ಎಂಬಾತ ತಮಿಳುನಾಡಿನ ನಾಗರಕೋಯಲ್‌ನಲ್ಲಿದ್ದಾನೆ ಎಂಬ ಮಾಹಿತಿ ಕೊಟ್ಟ ವೇಣು. ನಾವೆಲ್ಲ ಅಲ್ಲಿ ತಲುಪಿದೆವು. ರಾಜನ್ 10 ದಿನಗಳ ಹಿಂದೆ ತನ್ನ ಪತ್ನಿಯನ್ನು ಇಲ್ಲಿ ಬಿಟ್ಟಿದ್ದ. ಆದರೆ ಸೆ.23ರಂದು ರಾತ್ರಿ (ಬೆಂಗಳೂರಿನಲ್ಲಿ ಕೊಲೆ ನಡೆದಿದ್ದು ಸೆ.22ರ ರಾತ್ರಿ) ಆತುರಾತುರವಾಗಿ ಕರೆದುಕೊಂಡು ಹೋಗಿದ್ದಾನೆ ಎಂದಾತ ಹೇಳಿದ. ನಾವು ಅಲ್ಲಿಂದ ಪಟ್ಟಣತಿಟ್ಟಂ, ಮಣಿಮಲೈ, ಕಾಂಜೀರಪಲ್ಲಿ ಪೊನ್ನುಕ್ಕೂನಂ ಮುಂತಾದ ಊರುಗಳಲ್ಲಿನ ರಬ್ಬರ್ ಎಸ್ಟೇಟ್‌ಗಳಲ್ಲಿ ಕೂಲಿಯಾಳು ವೇಷದಲ್ಲಿ ಹುಡುಕಾಡಿದೆವು. ಆದರೆ ಯಾವುದೇ ಕ್ಲೂ ಸಿಗದೇ ಹೋಯಿತು. ರಾಜನ್‌ನ ಫೋಟೊ ತೋರಿಸಿ ಅಲ್ಲಿಯ ಸ್ಟೇಷನ್‌ಗಳಿಗೆಲ್ಲ ಅಲೆದದ್ದು ವ್ಯರ್ಥವಾಯಿತು. ಮರಳಿ ಯತ್ನವ ಮಾಡು ಎಂಬಂತೆ ಮತ್ತೊಮ್ಮೆ ಆ ಮನೆಗೆ ಹೋದೆವು.

ರಾಜೇಂದ್ರನ 10 ವರ್ಷದ ಮಗ ವಿಜೇಂದ್ರ ಎಂಬಾತ ನಮ್ಮನ್ನೇ ದುರುಗುಟ್ಟಿ ನೋಡುತ್ತ ‘ಯಾರಪ್ಪಾ ಇವರು? ಪದೇಪದೇ ನಮ್ಮ ಮನೆಗೆ ಬರುತ್ತಾರೆ’ ಎಂದ. ‘ಇವರು ಬೆಂಗಳೂರಿನ ಪೊಲೀಸರು ಕಣೋ. ನಿನ್ನ ಮಾವನನ್ನು ಹುಡುಕಿಕೊಂಡು ಬಂದಿದ್ದಾರೆ.’ ಎಂದ ಅಪ್ಪ. ತತಕ್ಷಣ ಆ ಹುಡುಗ ‘ಮಾವ ಇಲ್ಲೆಲ್ಲಿ ಇರುತ್ತಾನೆ? ಆತ ಚಂಗನಶೇರಿಯಲ್ಲಿ ರಬ್ಬರ್ ತೋಟ ಖರೀದಿಸಲು ಹೋಗಿಲ್ವಾ; ಎಂದು ಬಿಟ್ಟ. ನನಗಾದ ಸಂತೋಷ ಅಷ್ಟಿಷ್ಟಲ್ಲ. ಹೊರಗಡೆ ಓಡಿ ಬಂದವನೇ ದೊಡ್ಡದೊಂದು ಕ್ಯಾಡ್‌ಬರೀಸ್ ಚಾಕೊಲೇಟ್ ಖರೀದಿಸಿ ತಂದು ಆತನ ಕೈಗಿಟ್ಟ. ನಾವು ಚಂಗನಶೇರಿಯತ್ತ ದೌಡಾಯಿಸಿದೆವು. ಅಲ್ಲಿಯ ರಬ್ಬರ್ ಎಸ್ಟೇಟನ್ನು ಒಂದಿಂಚೂ ಬಿಡದೆ ಹುಡುಕಿದೆವು. ಎಷ್ಟೇ ಪ್ರಯಾಸ ಪಟ್ಟರೂ ಹಂತಕರು ಕಣ್ಣಿಗೆ ಬೀಳದೆ, ನಿಸ್ಸಹಾಯಕರಾಗಿ ಬೆಂಗಳೂರಿಗೆ ವಾಪಸಾಗುವ ಯೋಚನೆ ಮಾಡುತ್ತ ಅಲ್ಲಿಯ ಬಸ್ ನಿಲ್ದಾಣದಲ್ಲಿ ಕುಳಿತಿದ್ದಾಗಲೇ ಪವಾಡಸದೃಶ್ಯ ಘಟನೆ ನಡೆದಿದ್ದು!

ಆಗತಾನೇ ಒಂದು ಬಸ್ ಬಂದು ನಿಂತಿತ್ತು. ಏನೋ ಯೋಚನೆ ಮಾಡುತ್ತ ಕುಳಿತಿದ್ದ ಪಳನಿ ಇದ್ದಕ್ಕಿದಂತೆ ಎದ್ದು ನಿಂತ. ‘ಸಾರ್ ಆ ಬಸ್‌ನಿಂದ ಇಳಿದವನೊಬ್ಬ ಹಂತಕರಲ್ಲಿ ಒಬ್ಬನಾದ ಶಶಿ ಪಿಳ್ಳೈ ಥರಾ ಕಾಣ್ತಾನೆ’ ಎಂದ. ರೇಷ್ಮೆ ಜುಬ್ಬಾ, ಶಲ್ಯ ಧರಿಸಿದ್ದ ಆ ಶಂಕಿತ ವ್ಯಕ್ತಿ ಬೀಡಾ ಅಂಗಡಿಗೆ ಹೋಗಿ ಸಿಗರೇಟು ಹಚ್ಚಿ ಹೊಗೆಯ ಸುರುಳಿ ಬಿಡತೊಡಗಿದ. ಪಳನಿಯನ್ನು ನಾವು ಹಿಂಬಾಲಿಸಿದೆವು. ‘ನೀನು ಶಶಿ ಪಿಳ್ಳೈ ಅಲ್ವಾ?’ ಎಂದ ಪಳನಿ. ‘ಅರೆ ಪಳನಿ ಮೇಸ್ತ್ರಿ… ನೀನ್ ಇವಡೆ ಎಂದ್’ ಎಂದಾತ ಮಲಯಾಳದಲ್ಲಿ ಪ್ರತಿಕ್ರಿಯಿಸಿದ. ತತಕ್ಷಣ ಪಳನಿ ‘ಹಿಡ್ಕೊಳ್ಳಿ ಸಾರ್… ಇದೇ ಬಡ್ಡೀ ಮಗ ಸಾರ್ ಕೊಲೆಗಾರ,’ ಎಂದು ಅಬ್ಬರಿಸಿದ. ನಾವೆಲ್ಲ ಆತನ ಮೇಲೆ ಎಗರಿ ಹಿಡಿದುಕೊಂಡೆವು. ಅಷ್ಟರಲ್ಲಿ ಇನ್‌ಸ್ಪೆಕ್ಟರ್ ಸುರೇಂದ್ರ ನಾಯಕ್ ಅವರ ಸ್ಥಳೀಯ ಠಾಣೆಗೆ ಹೋಗಿ ಕೂತಿದ್ದರು. ನಾನು ಶಶಿಯನ್ನು ಎಳೆದುಕೊಂಡು ಅವರ ಮುಂದೆ ನಿಲ್ಲಿಸಿದೆ. ಅವರು ಅವಕ್ಕಾಗಿ ಬಿಟ್ಟರು.  ಆದರೆ ಶಶಿ ತಾನು ಅಮಾಯಕ ಎಂದ. ಕರಾಟೆಪಟುವಾಗಿದ್ದ ನಾಯಕ್ ಕಾಲಿನಿಂದ ಒಂದು ಕಿಕ್ ಕೊಟ್ಟರು. ಶಶಿ ಎಗರಿ ಗೋಡೆ ಮೇಲೆ ಹೋಗಿ ಬಿದ್ದ. ತತಕ್ಷಣ ಸ್ಥಳೀಯ ಇನ್‌ಸ್ಪೆಕ್ಟರ್ ತಡೆದು, ಇಲ್ಲಿ ಹಾಗೆಲ್ಲ ಹೊಡೆಯುವ ಹಾಗಿಲ್ಲ ಎಂದು ನಮಗೆ ಗದರಿದರು. ಶಶಿಯನ್ನು ಅವರು ಹತ್ತಿರ ಕೂರಿಸಿಕೊಂಡು ಜೋರು ಮಾತಿನಿಂದಲೇ ಬಾಯಿ ಬಿಡಿಸಿದರು.

ತಾವು ನಡೆಸಿದ ದರೋಡೆ ಸಂಚನ್ನು ಎಳೆಎಳೆಯಾಗಿ ಬಿಡಿಸಿ, ಇತರ ಆರೋಪಿಗಳನ್ನೂ ತೋರಿಸಿದ. ಆದರೆ ಸ್ವಲ್ಪ ನಗ-ನಗದಿನೊಂದಿಗೆ ರಾಜನ್ ಇವರಿಂದ ಬೇರೆಯಾಗಿದ್ದ. ನಾವು ಮತ್ತತೆ ರಾಜನ್ ಹಿಂದೆ ಬಿದ್ದೆವು. ಕೋಕೊಕೋಲಾದ ಜಾಹೀರಾತು ಫಲಕವೊಂದರ ಕೆಳಗೆ ಬಣ್ಣದ ಪ್ಲೇಟ್ ಮತ್ತು ಬ್ರಷ್ ಮುದ್ರೆಯ ಜತೆಗೆ ‘ರಾಜನ್’ ಎಂದು ಚಿಕ್ಕದಾಗಿ ಬೈಲೈನ್ ಹಾಕಿದ್ದು ಎಲ್ಲೋ ಒಂದು ಕಡೆ ಕಣ್ಣಿಗೆ ಬಿತ್ತು. ನಾವು ಆ ಸುಳಿವನ್ನೇ ಫಾಲೋಮಾಡಿದಾಗ ಆತ ದೊಡ್ಡದೊಡ್ಡ ಕಂಪನಿಗಳ ಸೈನ್‌ಬೋರ್ಡ್ ತಯಾರಿಯಲ್ಲಿ ಬ್ಯುಸಿಯಾಗಿರುವುದು ಗೊತ್ತಾಯಿತು. ಬಳಿಕ ಆತನನ್ನು ಸುಲಭವಾಗಿ ಬಲೆಗೆ ಕೆಡವಿದೆವು. ಶೇಷಾದ್ರಿಪುರಂ ಎಸ್‌ಐ ಲವಕುಮಾರ್ ಸಹಕಾರದೊಂದಿಗೆ ನಾವು ಆರೋಪಪಟ್ಟಿ ಸಿದ್ಧಪಡಿಸಿದೆವು.

ಉಸಿರುಗಟ್ಟಿಸಲು ಬಳಸಿದ ಪಂಚೆ, ಮೃತನ ಮುಷ್ಟಿಯಲ್ಲಿದ್ದ ಆರೋಪಿಯ ತಲೆಕೂದಲು ಮತ್ತು ಬದುಕುಳಿದವರು ಆರೋಪಿಗಳ ಗುರುತು ಹಚ್ಚುವ ಕವಾಯಿತಿನಿಂದ (Identification Parade) ಆರೋಪಿಗಳನ್ನು ಗುರುತಿಸಿದ್ದು ನಿರ್ಣಾಯಕ ಸಾಕ್ಷಿಯಾದವು. ಸೆಷನ್‌ಸ್ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿತು. ಆರೋಪಿಗಳು ಹೈಕೋರ್ಟ್‌ಗೆ ಹೋದರು. ಹೈಕೋರ್ಟ್ ಜೀವಾವಧಿ ಬದಲು ಗಲ್ಲುಶಿಕ್ಷೆ ವಿಧಿಸಿತು! ಬಳಿಕ ಸುಪ್ರೀಂಕೋರ್ಟ್ ಜೀವಾವಧಿ ಶಿಕ್ಷೆ ಕಾಯಂಗೊಳಿಸಿತು. ಇದಾದ ಎಷ್ಟೋ ವರ್ಷಗಳ ಬಳಿಕ ನಾನೊಮ್ಮೆ ತಪಾಸಣೆಗಾಗಿ ಸೆಂಟ್ರಲ್ ಜೈಲ್‌ಗೆ ಹೋಗಿದ್ದೆ. ಬಂದೀಖಾನೆಯ ಗೋಡೆಗಳೆಲ್ಲ ಆಕರ್ಷಕ ವರ್ಣಚಿತ್ರಗಳಿಂದ ಕಂಗೊಳಿಸುತ್ತಿದ್ದವು. ಇಷ್ಟು ಸೊಗಸಾದ ಚಿತ್ರ ಬರೆದ ಕಲಾವಿದಯಾರಿರಬಹುದು ಎಂಬ ಕುತೂಹಲವಾಯಿತು. ನೋಡಿದರೆ… ಚಿತ್ರದ ಕೆಳಗೆ ಸಣ್ಣ ಅಕ್ಷರದಲ್ಲಿ ‘ರಾಜನ್’ ಎಂದಿತ್ತು. ಜತೆಗೆ ಬಣ್ಣದ ಪ್ಲೇಟ್ ಮತ್ತು ಬ್ರಷ್ ಸಂಕೇತ!

ಸತತ ಪ್ರಯತ್ನಕ್ಕೆ, ಪರಿಶ್ರಮಕ್ಕೆ, ಕರ್ತವ್ಯನಿಷ್ಠೆಗೆ ಫಲ ಇದ್ದೇ ಇದೆ ಎನ್ನುವುದಕ್ಕೆ ಈ ಪ್ರಕರಣವೇ ಸಾಕ್ಷಿ. ಬೆಂಗಳೂರಿನಲ್ಲಿ ನಡೆದ ಜೋಡಿ ಕೊಲೆ ಆರೋಪಿಗಳನ್ನು ಹಿಡಿಯಲು ನಾವು ಕೇರಳದ ಮೂಲೆಮೂಲೆಯಲ್ಲಿ ಕೂಲಿಗಳ ವೇಷದಲ್ಲಿ ಸುತ್ತ ಬೇಕಾಯಿತು.

Tags: Bangalore PoliceBullet SavariTiger BB Ashok Kumar
Previous Post

ಉತ್ತರ ಕೊರಿಯಾ ಎಂಬ ನರಕ-22: ಮಿಲಿಟರಿ

Next Post

ಉತ್ತರ ಕೊರಿಯಾ ಎಂಬ ನರಕ-23: ಮಿಲಿಟರಿ-2

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಉತ್ತರ ಕೊರಿಯಾ ಎಂಬ ನರಕ-23: ಮಿಲಿಟರಿ-2

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/https://kalahamsa.in/services/https://kalahamsa.in/services/

Recent News

ಇನ್ಮುಂದೆ ಕನ್ನಡದಲ್ಲೇ ದೊರೆಯಲಿದೆ ಮೆಡಿಕಲ್, ಇಂಜಿನಿಯರಿಂಗ್ ಶಿಕ್ಷಣ: ಪ್ರಧಾನಿ ಮೋದಿ

March 25, 2023

ಸೇನಾ ಹೆಲಿಕಾಪ್ಟರ್’ನಲ್ಲಿ ಶಿವಮೊಗ್ಗಕ್ಕೆ ಆಗಮಿಸಿ ವಿಶೇಷ ವಿಮಾನದಲ್ಲಿ ದೆಹಲಿಗೆ ತೆರಳಿದ ಪ್ರಧಾನಿ ಮೋದಿ

March 25, 2023

ಕಾಂಗ್ರೆಸ್ ಮೊದಲ ಪಟ್ಟಿ: ಡಿ.ಕೆ. ರವಿ ಪತ್ನಿ ಸೇರಿ ಆರು ಮಹಿಳೆಯರಿಗೆ ಟಿಕೇಟ್

March 25, 2023

ಕೌಂಟರ್’ನಲ್ಲಿ ಟಿಕೇಟ್ ಖರೀದಿಸಿ ಮೆಟ್ರೋದಲ್ಲಿ ಪ್ರಯಾಣಿಸಿದ ಪ್ರಧಾನಿ ಮೋದಿ: ಟಿಕೇಟ್ ನೀಡಿದ್ದು ಯಾರು?

March 25, 2023
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಇನ್ಮುಂದೆ ಕನ್ನಡದಲ್ಲೇ ದೊರೆಯಲಿದೆ ಮೆಡಿಕಲ್, ಇಂಜಿನಿಯರಿಂಗ್ ಶಿಕ್ಷಣ: ಪ್ರಧಾನಿ ಮೋದಿ

March 25, 2023

ಸೇನಾ ಹೆಲಿಕಾಪ್ಟರ್’ನಲ್ಲಿ ಶಿವಮೊಗ್ಗಕ್ಕೆ ಆಗಮಿಸಿ ವಿಶೇಷ ವಿಮಾನದಲ್ಲಿ ದೆಹಲಿಗೆ ತೆರಳಿದ ಪ್ರಧಾನಿ ಮೋದಿ

March 25, 2023

ಕಾಂಗ್ರೆಸ್ ಮೊದಲ ಪಟ್ಟಿ: ಡಿ.ಕೆ. ರವಿ ಪತ್ನಿ ಸೇರಿ ಆರು ಮಹಿಳೆಯರಿಗೆ ಟಿಕೇಟ್

March 25, 2023
  • About
  • Advertise
  • Privacy & Policy
  • Contact

© 2022 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಪ್ರಕಾಶ್ ಅಮ್ಮಣ್ಣಾಯ
    • ವಿನಯ್ ಶಿವಮೊಗ್ಗ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2022 Kalpa News - All Rights Reserved | Powered by Kalahamsa Infotech Pvt. ltd.

Login to your account below

Forgotten Password?

Fill the forms bellow to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!