ಚಳ್ಳಕೆರೆ: ಚಿತ್ರದುರ್ಗ ಲೋಕಸಭಾ ಅಭ್ಯರ್ಥಿಯಾದ ಎ. ನಾರಾಯಣಸ್ವಾಮಿ ಪರವಾಗಿ ಶಾಸಕಿ ಪೂರ್ಣಿಮಾ ಚಳ್ಳಕೆರೆ ತಾಲೂಕಿನ ಗೋಪನಹಳ್ಳಿ, ಹೊಟ್ಟಪ್ಪನಹಳ್ಳಿ ಇನ್ನು ಹಲವು ಗ್ರಾಮಗಳಿಗೆ ತೆರಳಿ ಭಾರತೀಯ ಜನತಾ ಪಕ್ಷದ ಪರವಾಗಿ ಮತಯಾಚನೆ ಮಾಡಿದರು.
ಈ ಸಂದರ್ಭದಲ್ಲಿ ಚಳ್ಳಕೆರೆ ಮಂಡಲ ಅಧ್ಯಕ್ಷ ಬಿ.ವಿ. ಸಿರಿಯಣ್ಣ ಹಾಗೂ ಮುಖಂಡರಾದ ಎಸ್. ಜಯರಾಂ, ಸಂಚಾಲಕ ಬೋರ್ ನಾಯಕ, ಜಿಲ್ಲಾ ಉಪಾಧ್ಯಕ್ಷ ಶಿವಪುತ್ರಪ್ಪ, ಮುಖಂಡರಾದ ವಿಜಯೇಂದ್ರ ಜೆ.ಕೆ. ಈರಣ್ಣ ಹಟ್ಟಿ ರುದ್ರಪ್ಪನವರ, ಎಸ್. ಮಂಜುನಾಥ್, ಯಲ್ಲಪ್ಪ ಕೇಶವರೆಡ್ಡಿ, ತಾಲೂಕು ಪಂಚಾಯಿತಿ ಸದಸ್ಯರಾದ ನವೀನ್, ಒಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ವೀರೇಶ್, ವೆಂಕಟೇಶ್, ಮಂಜುನಾಥ ರೆಡ್ಡಿ ಭಾಗವಹಿಸಿದ್ದರು.
Discussion about this post