ಚಳ್ಳಕೆರೆ: ತಾಲೂಕಿನಾದ್ಯಂತ ಆಗಸ್ಟ್ 23ರಂದು ಶ್ರೀಕೃಷ್ಣ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲು ತೀರ್ಮಾನಿಸಲಾಗಿದ್ದು, ಗೊಲ್ಲ ಸಮುದಾಯದವರ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ತಾಲೂಕು ಯಾದವ ಸಂಘದ ಅಧ್ಯಕ್ಷ ಟಿ. ರವಿಕುಮಾರ್ ಮನವಿ ಮಾಡಿದ್ದಾರೆ.
ಪರಶುರಾಮಪುರ ಹೋಬಳಿಯ ವಿವಿಧ ಹಳ್ಳಿಗಳಿಗೆ ಚಳ್ಳಕೆರೆ ತಾಲೂಕು ಗೊಲ್ಲರ ಸಂಘದ ಪದಾಧಿಕಾರಿಗಳು ಹಾಗೂ ಪರಶುರಾಮಪುರ ಹೋಬಳಿಯ ವಿವಿಧ ಯಾದವ ಸಂಘದವರ ನೇತೃತ್ವದಲ್ಲಿ ಪಿಆರ್ ಪುರದ ವಿವಿಧ ಗೊಲ್ಲರಹಟ್ಟಿಗಳಿಗೆ ಬೇಟಿ ನೀಡಿ ಸಮುದಾಯದವರೊಂದಿಗೆ ಸಮಾಲೋಚಿಸಿ ಅವರು ಮಾತನಾಡಿದರು.
ಭಾರತ ದೇಶದ ಮಹಾಕಾವ್ಯಗಳಲ್ಲಿ ಶ್ರೀ ಕೃಷ್ಣನ ಆದರ್ಶಗಳು ಇಂದಿಗೂ ಪ್ರಸ್ತುತವಾಗಿವೆ. ದೇಶದಲ್ಲಿ ದೇಶೀ ಸಂಸ್ಕೃತಿ, ಗೋ ಸಾಕಾಣಿಕೆ, ಪಶುಪಾಲನಾ ಸಂಸ್ಕೃತಿಯನ್ನು ಜಗತ್ತಿಗೆ ಪರಿಚಯಿಸಿದ ಶ್ರೀಕೃಷ್ಣ ಮಹಾಭಾರತದ ಸೂತ್ರದಾರನೂ ಆಗಿದ್ದನು ಎಂದರು.
ಪರಶುರಾಮಪುರ, ದೊಡ್ಡಗೊಲ್ಲರಹಟ್ಟಿ, ಪಿ ಗೌರೀಪುರ, ಕ್ಯಾದಿಗುಂಟೆ, ಎಸ್. ದುರ್ಗ, ಪಿ ಓಬನಹಳ್ಳಿ, ಗೊಲ್ಲರಹಟ್ಟಿ, ಚಿಕ್ಕಚೆಲ್ಲೂರು, ಟಿಎನ್ಕೋಟೆ, ಗೋಸಿಕೆರೆ, ಸೂರನಹಳ್ಳಿ ಸೇರಿದಂತೆ ವಿವಿಧ ಗೊಲ್ಲರಹಟ್ಟಿಗಳಿಗೆ ಬೇಟಿ ನೀಡಿ ಜಯಂತ್ಯುತ್ಸವದ ಆಹ್ವಾನ ಪತ್ರಿಕೆಗಳನ್ನು ಸಮುದಾಯದವರಿಗೆ ವಿತರಿಸಿದರು.
ಆಗಸ್ಟ್ 23ರ ಶ್ರೀ ಕೃಷ್ಣ ಜಯಂತ್ಯುತ್ಸವದ ಮೆರವಣಿಗೆಯಲ್ಲಿ ತಾಲೂಕಿನ ವಿವಿದ ಹಳ್ಳಿಗಳ ಕೋಲಾಟದ ತಂಡಗಳು, ಭಜನೆ, ಛದ್ಮವೇಶಧಾರಿಗಳು ವಿವಿಧ ಜನಪದ ಕಲಾತಂಡಗಳು ಭಾಗವಹಿಸಲಿವೆ ಎಂದರು.
ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯ ಕೃಷ್ಣಪ್ಪ, ಮಂಜುನಾಥ, ಶಶಿಧರ್, ಚಿಕ್ಕಣ್ಣ ಇಂಡಸ್ ವ್ಯಾಲಿ, ಕಾಂತರಾಜು, ಶ್ರೀಧರ, ವೀರೇಶ್, ನವೀನ್, ಬೋರೇಶ, ಮಂಜು, ಸುರೇಶ, ತಿಮ್ಮಯ್ಯ, ಚಿತ್ತಯ್ಯ, ಸಣ್ಣ ಚಿತ್ತಪ್ಪ, ಮೂರ್ತಿ, ಈರಣ್ಣ, ನರಸಪ್ಪ, ವಿವಿಧ ಹಳ್ಳಿಗಳ ಗೊಲ್ಲರ ಸಂಘದವರು ಇದ್ದರು.
(ವರದಿ: ಸುರೇಶ್ ಬೆಳಗೆರೆ, ಚಳ್ಳಕೆರೆ)
Discussion about this post