ಕಲ್ಪ ಮೀಡಿಯಾ ಹೌಸ್ | ಚಳ್ಳಕೆರೆ |
ಹಿರಿಯೂರು ತಾಲ್ಲೂಕು ಜವನಗೊಂಡನಹಳ್ಳಿ ಸಮೀಪ ಎನ್ಹೆಚ್ 48 ಸರ್ವಿಸ್ ರಸ್ತೆಯಿಂದ ಆನೆಸಿದ್ರಿ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ಅಕ್ರಮ ಗಾಂಜಾ #Ganja ಸಾಗಾಣಿಕೆ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಅಬಕಾರಿ ಜಂಟಿ ಆಯುಕ್ತರು ಹೊಸಪೇಟೆ ವಿಭಾಗ ಹಾಗೂ ಅಬಕಾರಿ ಉಪ ಆಯುಕ್ತರು ಚಿತ್ರದುರ್ಗ ಜಿಲ್ಲೆ ಇವರ ಮಾರ್ಗದರ್ಶನದಂತೆ, ಅಬಕಾರಿ ಉಪ ಅಧೀಕ್ಷಕರು, ಹಿರಿಯೂರು ಉಪ ವಿಭಾಗದ ನೇತೃತ್ವದಲ್ಲಿ ತಪಾಸಣೆ ನಡೆಸಲಾಯಿತು.
Also read: ದುಸ್ಥಿತಿಯತ್ತ ತೀರ್ಥಹಳ್ಳಿ ತೂಗುಸೇತುವೆ, ನಿಷೇಧವಿದ್ದರೂ ವಾಹನ ಸಂಚಾರ, ಅಪಾಯಕ್ಕೂ ಮುನ್ನ ಎಚ್ಚೆತ್ತುಕೊಳ್ಳಿ
ಆನೆಸಿದ್ರಿ ಗ್ರಾಮಕ್ಕೆ ಬರುತ್ತಿದ್ದ ಟಾಟಾ ಎಸಿ ವಾಹನದಲ್ಲಿ ಚಾಲಕನ ಪಕ್ಕದಲ್ಲಿ ಕುಳಿತಿದ್ದ ವ್ಯಕ್ತಿಯ ಸೀಟಿನ ಕೆಳಭಾಗದಲ್ಲಿ ಪ್ಲಾಸ್ಟಿಕ್ನಿಂದ ಸುತ್ತಿದ 3 ಪ್ಯಾಕೆಟ್ಗಳಲ್ಲಿ ಹದಭರಿತ ಘಾಟು ವಾಸನೆಯುಳ್ಳ ಒಣ ಗಾಂಜಾ ದಾಸ್ತಾನು ಮಾಡಿರುವುದು ಪತ್ತೆಯಾಗಿದ್ದು, 4ಕೆಜಿ 800ಗ್ರಾಂ ಒಣ ಗಾಂಜಾ ಇರುವುದು ದೃಢಪಟ್ಟಿರುತ್ತದ್ದು, ಒಟ್ಟು ಮೌಲ್ಯ 2,44,400ರೂ. ಎಂದು ಅಂದಾಜಿಸಲಾಗಿದೆ.
ಆನಂದಕುಮಾರ, ಶಾಂತ ನರಸಪ್ಪ, ವಿಶ್ವನಾಥ ಎಂಬ ಮೂವರು ಆರೋಪಿಗಳನ್ನು ಸ್ಥಳದಲ್ಲಿಯೇ ದಸ್ತಗಿರಿ ಮಾಡಿ ಪ್ರಕರಣ ದಾಖಲಿಸಲಾಗಿದೆ.
ವರದಿ: ಸುರೇಶ್ ಬೆಳಗೆರೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post