ಕಲ್ಪ ಮೀಡಿಯಾ ಹೌಸ್ | ಚಳ್ಳಕೆರೆ |
ಧಾರವಾಡ ವಿಶ್ವವಿದ್ಯಾಲನಿಲಯದ ಪ್ರಸಾರಂಗದ ಸಹಾಯಕ ನಿರ್ದೇಶಕ ಎನ್. ಸಿದ್ಧಪ್ಪ ಇಂದು ಬೆಳೆಗೆರೆ ಬಿ. ಸೀತಾರಾಮಶಾಸ್ತ್ರಿ ಸಂಯುಕ್ತ ಪದವಿ ಪೂರ್ವ ಕಾಲೇಜು ಹಾಗೂ ದಿವಂಗತ ಕೃಷ್ಣಶಾಸ್ತ್ರಿ ಅವರ ಸಮಾಧಿಗೆ ಭೇಟಿ ನೀಡಿ, ಸಂಶೋಧನಾ ವಿ?ಯಕ್ಕೆ ಕನ್ನಡ ಸಾಹಿತ್ಯವನ್ನು ಗುರುತಿಸುವ ನಿಟ್ಟಿನಲ್ಲಿ ಸಂಶೋಧನೆ ಕಾರ್ಯಕೈಗೊಂಡಿದ್ದಾರೆ.
ಹೊಸಗನ್ನಡ ಸಾಹಿತ್ಯ ಚರಿತ್ರೆಯಲ್ಲಿ ಕವಯತ್ರಿ ಬೆಳೆಗೆರೆ ಜಾನಕಮ್ಮನವರ ಶ್ರೀಸಂಯೋಜ ಕುರಿತಂತೆ ಅವರ ಕಥ ಕವನಗಳಲ್ಲಿ ಮೂಡಿ ಬಂದಿರುವ ಸ್ತ್ರೀಪರ ವಿಚಾರಗಳ ಶಿಕ್ಷಣ ಮೊದಲಾದವುಗಳನ್ನು ಕನ್ನಡ ಸಾಹಿತ್ಯದಲ್ಲಿ ಗುರುತಿಸಿದ ಹೆಜ್ಜೆ ಗುರುತುಗಳನ್ನ ಹೊಸಗನ್ನಡ ಕಥನ ಕವನಗಳು ಹಾಗೂ ಬೆಳೆಗೆರೆ ಜಾನಕಮ್ಮ ನವರಲ್ಲಿ ಇದ್ದಂತಹ ಸ್ತ್ರೀ ಪರ ಕಾಳಜಿಯನ್ನು ಹಲವು ವಿಚಾರಗಳನ್ನು ಹೊರತಂದಿದ್ದ ಕವತ್ರಿಯ ಬಗ್ಗೆ ಅಧ್ಯಯನ ಮಾಡುವ ಉದ್ದೇಶ ಹೊಂದಿ ಇಂದು ಭೇಟಿ ನೀಡಿದ್ದು, ಬೆಳೆಗೆರೆ ಶಾಲೆ ಹಾಗೂ ಕೃ? ಶಾಸ್ತ್ರೀಜಿಯವರ ಕುಟೀರಕ್ಕೆ ಭೇಟಿ ನೀಡಿ, ಹತ್ತು ಹಲವಾರು ವಿ?ಯಗಳನ್ನು ಸಂಗ್ರಹಿಸಿದರು.
ಈ ಸಂದರ್ಭದಲ್ಲಿ ಬಿ. ಸೀತಾರಾಮಶಾಸ್ತ್ರಿ ಸಂಯುಕ್ತ ಪದವಿಪೂರ್ವ ಕಾಲೇಜು ಹಾಗೂ ಶಾರದಾ ಮಂದಿರ ವಿದ್ಯಾಸಂಸ್ಥೆಯ ಜಂಟಿ ಕಾರ್ಯದರ್ಶಿ ಶ್ರೀ ಪಾದಪೂಜಾ ಅವರು ಹಲವು ಮಾಹಿತಿಗಳನ್ನು ನೀಡಿದರು.
ಈ ಸಮಯದಲ್ಲಿ ಶಾಲಾ ಉಪನ್ಯಾಸಕರಾದ ಚನ್ನಕೇಶವ ಶಾಲಾ ಶಿಕ್ಷಕರ ಸುಹಾಸ್ ಸಾಮಾಜಿಕ ಕಾರ್ಯಕರ್ತರಾದ ಬಸಿರ್ಹತ್ ಸುರೇಶ್ ಇದ್ದರು.
ವರದಿ: ಸುರೇಶ್ ಬೆಳಗೆರೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post