ಕಲ್ಪ ಮೀಡಿಯಾ ಹೌಸ್
ಚಳ್ಳಕೆರೆ: ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು. ಇಂತಹ ಸಮಯದಲ್ಲಿ ನಗರದ ಪಾವಗಡ ರಸ್ತೆಯ ಅಕ್ಕಪಕ್ಕದಲ್ಲಿ ಕೋವಿಡ್ ನಿಯಮ ಮೀರಿ, ಸಾಮಾಜಿಕ ಅಂತರವೂ ಇಲ್ಲದೆ, ಜನರು ಜಾತ್ರೆಯಂತೆ ನಿಂತು ತರಕಾರಿ ಕಾಯಿಪಲ್ಯ ಖರೀದಿಯಲ್ಲಿ ತೋಡಗಿದ್ದರು. ಪಿಎಸ್ಐ ಮಂಜುನಾಥ ಅರ್ಜನ್ ಲಿಂಗಾರೆಡ್ಡಿ ಸ್ಥಳಕ್ಕೆ ಬಂದು ಗುಂಪನ್ನು ಚದುರಿಸಿದರು.
ಅಲ್ಲಿನ ತರಕಾರಿ ಅಂಗಡಿಯವರನ್ನು ಕುರಿತು ಮಾತನಾಡಿದ ಅವರ, ಕೋವಿಡ್ ವೇಗವಾಗಿ ಹರಡುತ್ತಿದೆ. ಇಂತಹ ಸಮಯದಲ್ಲಿ ಹೀಗೆ ಗುಂಪು ಗುಂಪಾಗಿ ಸೇರಬೇಡಿ. ಸಾಮಾಜಿಕ ಅಂತರ ಕಾಪಾಡಿಕೊಂಡು ಕಾಯಿಪಲ್ಯ ತರಕಾರಿ ಖರೀದಿ ಮಾಡಿ ಎಂದು ಹೇಳಿದರು.
ಅವರು ನೆಹರು ವೃತ್ತ ಸಮೀಪಕ್ಕೆ ಹೋಗುತ್ತಿದ್ದಂತೆ ಸಾರ್ವಜಕರು ಯತಾಸ್ಥಿಗೆ ತಲುಪಿದರು. ಮತ್ತೆ ವಾಪಾಸ್ ಆಗಮಿಸಿದ ಪಿಎಸ್ಐ ಮಂಜುನಾಥ, ಹೀಗೇ ಮುಂದುವರೆದರೆ ಮತ್ತೆ ಕೋವಿಡ್ ವ್ಯಾಪಕವಾಗಿ ಹರಡುವುದರ ಜೊತೆಗೆ ಸಾವು ನೋವುಗಳು ಸಂಭವಿಸುತ್ತದೆ. ಇದನ್ನರಿತು ಜಾಗೃತಿರಾಗಿ ನಿಗದಿಸಿರುವ ಸಮಯದೊಳಗೆ ನಿಯಮಪಾಲಿಸಿ ತರಕಾರಿ ಮಾರಿಕೊಳ್ಳಿ. ಇಲ್ಲವಾದರೆ ನಿಯಮ ಮೀರುವುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿ ಸೇರಿದ್ದ ಗುಂಪನ್ನು ಚದುರಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post