Wednesday, June 25, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home Special Articles

ರಾಯರ ಪವಾಡಗಳ ಸದೃಶತಾಣ ಚನ್ನಗಿರಿ: ಪುಣ್ಯವಿದ್ದರೆ ಮಾತ್ರ ಪಂಚಮ ಮಂತ್ರಾಲಯಕ್ಕೆ ಭೇಟಿ ನೀಡಲು ಸಾಧ್ಯ

August 25, 2019
in Special Articles
0 0
0
Share on facebookShare on TwitterWhatsapp
Read - 3 minutes

ಅದು ಮಲೆನಾಡಿನಿಂದ ಬಯಲುಸೀಮೆಗೆ ಸಂಪರ್ಕಿಸುವ ಪ್ರದೇಶ. ಅಡಿಕೆಯ ನಾಡು ಚನ್ನಗಿರಿ. ಇಂತಹ ಸ್ಥಳದಲ್ಲೇ ಕಲಿಯುಗ ಕಾಮಧೇನು ರಾಯರು ನೆಲೆಸಿದ್ದು ಪಂಚಮ ಮಂತ್ರಾಲಯ ಎಂದೇ ಖ್ಯಾತವಾಗಿದೆ. ಇಂತಹ ಕ್ಷೇತ್ರದ ಬಗ್ಗೆ ಕೊಂಚ ತಿಳಿದುಕೊಳ್ಳೋಣ ಬನ್ನಿ.

ಚನ್ನಗಿರಿ ಶ್ರೀರಾಘವೇಂದ್ರ ಸ್ವಾಮಿಗಳ ಬೃಂದಾವನ ಸ್ಥಾಪನೆಯ ಸಂಗತಿ ಅತ್ಯಂತ ಗಹನವಾಗಿದೆ. ಆಸ್ತಿಕರಿಗೆ ಮಹಿಮಾ ಪ್ರದಾಯಕ, ಪವಾಡ ಸದೃಶ ಭಾಸವಾಗುತ್ತದೆ.

ಕೋದಂಡರಾಮ ದೇವರು

ಚನ್ನಗಿರಿಯ ಶಾನುಭೋಗರಾದ ದೊಡ್ಡ ನರಸಪ್ಪ ಮತ್ತು ವೇದಮೂರ್ತಿಗಳಾದ ಸ್ವಾಮಿರಾಯಾಚಾರ್ಯರ ಗೆಳೆತನ ಮತ್ತು ಅಧ್ಯಾತ್ಮಿಕ ಮನಸ್ಸುಗಳ ಸಮ್ಮಿಲದ ದ್ಯೋತಕವಾಗಿದೆ. ಈರ್ವರಿಗೂ ಒಂದೇ ರಾತ್ರಿ ಸ್ವಪ್ನದಲ್ಲಿ ರಾಯರು ಚನ್ನಗಿರಿಯಲ್ಲಿ ಬೃಂದಾವನ ರೂಪದಲ್ಲಿ ಪೂಜೆ ಸ್ವೀಕರಿದಂತೆ ಅನುಭವವಾಯಿತು. ಮಾರನೆಯ ದಿನ ಈರ್ವರೂ ತಮ್ಮ ಅನುಭವವನ್ನು ಪರಸ್ಪರ ಹೇಳಿಕೊಂಡರು.


ಸ್ವಪ್ನದ ಸಾಮ್ಯತೆ ಅವರಿಗೆ ಚನ್ನಗಿರಿಯಲ್ಲಿ ಬೃಂದಾವನ ಸ್ಥಾಪನೆಗೆ ನಾಂದಿಯಾಯಿತು. ಅದರ ಫಲವಾಗಿ ಶಿಲೆಯಲ್ಲಿ ಬೃಂದಾವನ ಕೆತ್ತಲು ಶಿಲ್ಪಿಯನ್ನು ಕಂಡರು. ಸಮೀಪದ ಅಜ್ಜಿಹಳ್ಳಿಯ ಶಿಲ್ಪಿ ನಂಜಾಚಾರಿ ಮೊದಲಿಗೆ ತುಸು ಅಸಡ್ಡೆ ತೋರಿಸಿದನಂತೆ. ಅದರ ಫಲವಾಗಿ ಆತನ ಕಣ್ಣೆರಡೂ ಕಾಣಿಸದೇ ಕುರುಡನಾದ. ಶ್ರೀರಾಯರನ್ನು ಮೊರೆಹೋಗು ಎಂದು ಆಪ್ತರು ಸೂಚಿಸಿದರು. ಶ್ರೀರಾಯರನ್ನು ಬೇಡಿಕೊಂಡ. ಚನ್ನಗಿರಿಯಲ್ಲಿ ಬೃಂದಾವನ ಕೆತ್ತಿ ಕೊಡುವೆ ಎಂದು ಸಂಕಲ್ಪವೇನೋ ಮಾಡಿದ. ಆದರೆ ದೃಷ್ಟಿಯೇ ಇಲ್ಲದೆ ಶಿಲೆಯ ಕೆಲಸ ಮಾಡುವುದು ಹೇಗೆ? ಕೊನೆಗೆ ಶ್ರೀರಾಯರ ಮೊರೆ ಹೋದ.

ರಾಯರೇ ಅವನಿಗೆ ಅಭಯ ನೀಡಿ ಕೆತ್ತುವ ಸ್ಥಳ ಮಾತ್ರ ಕಾಣಿಸುತ್ತದೆ. ತಾವು ಅವನಿಗೆ ಹೇಗೆ ಉಳಿಯಾಡಿಸಬೇಕೆಂದು ಮಾರ್ಗದರ್ಶನ ನೀಡುವುದಾಗಿ ಸ್ವಪ್ನದಲ್ಲಿ ಹೇಳಿದರು. ಅದರಂತೆ ಬೃಂದಾವನದ ನಿರ್ಮಾಣ ಕಾರ್ಯ ಶುರುವಾಯಿತು.


ಕ್ರಮೇಣ ಶಿಲ್ಪಿ ನಂಜಾಚಾರಿ ಕೆತ್ತನೆ ಮುಗಿಸಿದ ನಂತರ ಅ್ವನಿಗೆ ಗುರುಗಳು ದೃಷ್ಟಿಭಾಗ್ಯ ನೀಡುತ್ತಾರೆ. ಸುಂದರವಾದ ಬೃಂದಾವನ ್ಕಂಡು ಅವನ ಶಿಲ್ಪಿತನ ಬೆರಗಾಗುವಂತೆ ಮಾಡುತ್ತದೆ.

ಚನ್ನಗಿರಿಯ ಭಕ್ತರೆಲ್ಲರೂ ಮಂತ್ರಾಲಯಕ್ಕೆ ಮೃತ್ತಿಕೆ ತರಲು ಪ್ರಯಾಣ ಮಾಡುತ್ತಾರೆ. ಮಂತ್ರಾಲಯದಲ್ಲಿ ಶ್ರೀವರದೇಂದ್ರ ತೀರ್ಥರು ಪೀಠಾಧಿಪತಿಗಳು. ಶ್ರೀರಾಯರ ಸ್ವಪ್ನ ವೃತ್ತಾಂತವನ್ನು ತಮ್ಮ ತಪೋ ಮಹಿಮೆಯಿಂದ ಅರಿಯುತ್ತಾರೆ.


ಎಲ್ಲಕ್ಕಿಂತ ಪ್ರಥಮ ಪ್ರಾಶಸ್ತ್ಯ ನೀಡಿ ಭಕ್ತ ವೃಂದವನ್ನು ಆದರಿಂದ ಬರಮಾಡಿಕೊಳ್ಳುತ್ತಾರೆ. ಶ್ರೀರಾಯರ ಬೃಂದಾವನದ ಮೃತ್ತಿಕೆಯನ್ನು ಆಶೀರ್ವಾದಪೂರ್ವಕವಾಗಿ ನೀಡುತ್ತಾರೆ.

ಭಕ್ತವೃಂದ ಶ್ರೀವರದೇಂದ್ರರಿಗೆ ಆಮಂತ್ರಣ ನೀಡಿ ಚನ್ನಗಿರಿಗೆ ಆಗಮಿಸಿ ಶ್ರೀರಾಯರ ಮೃತ್ತಿಕಾ ಬೃಂದಾವನ ಪ್ರತಿಸ್ಠಾಪನೆ ನೆರವೇರಿಸಲು ಪ್ರಾರ್ಥಿಸುತ್ತಾರೆ. ತಾ.6-2-1783 ರಂದು ಅಂದರೆ ಶುಭಕೃತ್ ಸಂವತ್ಸರದ ಮಾಘಮಾಸದ ಶುದ್ಧ ಪಂಚಮಿಯಂದು ಚನ್ನಗಿರಿಗೆ ಶ್ರೀವರದೇಂದ್ರರು ಆಗಮಿಸಿ ಪ್ರತಿಷ್ಠಾಪನೆ ನೆರವೇರಿಸುತ್ತಾರೆ.


ಹೀಗೆ ಚನ್ನಗಿರಿಯಲ್ಲಿ ಐದನೇ ಮೃತ್ತಿಕಾ ಬೃಂದಾವನ ಸ್ಥಾಪನೆಯಾಗುತ್ತದೆ. ಇಲ್ಲಿನ ಶ್ರೀರಾಯರ ಸೇವೆಗೆ ಎಲ್ಲ ಕಡೆಯಿಂದ ಭಕ್ತಾದಿಗಳು ಬರುತ್ತಾರೆ. ಭಕ್ತರು ಬೇಡಿಕೊಂಡಿದ್ದನ್ನು ಕರುಣಿಸಿದ ಉದಾಹರಣೆಗಳಿವೆ.

ಇಲ್ಲಿನ ಶಿಲ್ಪಿಯ ಕುಶಲತೆಯೆಂದರೆ ಅದು ಶ್ರೀರಾಯರೇ ತಮ್ಮ ಅಪೇಕ್ಷೆಯನುಸಾರ ಬೃಂದಾವನದ ನಾಲ್ಕೂ ಕಡೆ ಕೋದಂಡರಾಮ, ಯೋಗಾನಾರಸಿಂಹ, ಕಾಳಿಂಗಮರ್ದನ ಕೃಷ್ಣ ಮತ್ತು ವೇದವ್ಯಾಸರ ಮೂರ್ತಿಗಳನ್ನು ಕೆತ್ತಿರುವುದು. ಈ ಪ್ರಕಾರದ ಕೆತ್ತನೆ ಚನ್ನಗಿರಿಯ ಬೃಂದಾವನದಲ್ಲಿ ಮಾತ್ರ ನೋಡಲು ಸಾಧ್ಯ. ಶ್ರೀರಾಯರ ಶಿಲ್ಪಕಲಾ ವಿದ್ಯೆಗೆ ಇದು ಕನ್ನಡಿಯಿದ್ದಂತೆ.
ಇದೇ ಇಲ್ಲಿನ ವೈಶಿಷ್ಟ್ಯ!


ಚಿನ್ನದಂಥ ನನ್ನ ಚೆನ್ನ ಚನ್ನಗಿರಿಯ ಶ್ರೀರಾಘವೇಂದ್ರ ಎಂಬ ಕೀರ್ತನೆಯನ್ನು ಸೀತಾರಾಮ ವಿಠ್ಠಲರು ರಚಿಸಿ ಹಾಡಿರುವುದು ಮತ್ತೊಂದು ವಿಶೇಷ ಸಂಗತಿ.
ಪ್ರತೀವರ್ಷ ಮಾಘ ಶುದ್ಧ ಪಂಚಮಿ ಇಲ್ಲಿನ ಶಾನುಭೋಗ ಮನೆತನದವರು ವರ್ಧಂತಿಯನ್ನು ಶ್ರೀಶಾಮಣ್ಣ ಸೇವಾ ಟ್ರಸ್ಟ್‌ ವತಿಯಿಂದ ಅತ್ಯಂತ ಶ್ರದ್ಧಾಭಕ್ತಿಯಿಂದ ಆಚರಿಸಿಕೊಂಡು ಬರುತ್ತಿದ್ದಾರೆ.

ಈ ಮುಂಚೆ ಮುಜರಾಯಿಗೆ ಸೇರಿದ್ದು ಈಗ ಶ್ರೀರಾಘವೇಂದ್ರ ಸೇವಾ ಟ್ರಸ್ಟ್‌ ವತಿಯಿಂದ ಅಭಿವೃದ್ಧಿ ಚಟುವಟಿಕೆಗಳು ನಿರಂತರ ನಡೆಯುತ್ತಿವೆ.


ಇಂತಹ ಪಂಚಮ ಮಂತ್ರಾಲಯ ಚನ್ನಗಿರಿ ಶ್ರೀರಾಘವೇಂದ್ರಸ್ವಾಮಿಗಳ ಮಠದಲ್ಲಿ ಶ್ರೀರಾಯರ ಆರಾಧನಾ ವಿಶೇಷವಾಗಿ ಭಕ್ತರಿಂದ ಅಭಿಷೇಕ ಪೂಜಾದಿಗಳು ನಡೆದವು. ಆಗಸ್ಟ್‌ 18 ಭಾನುವಾರ ಶ್ರೀರಾಯರ ರಥೋತ್ಸವವು ವಿಜೃಂಭಣೆಯಿಂದ ನೆರವೇರಿತು.

ಶ್ರೀರಾಘವೇಂದ್ರ ಸ್ವಾಮಿ ಸೇವಾ ಟ್ರಸ್ಟಿನ ಅಧ್ಯಕ್ಷ ಶ್ರೀಕೃಷ್ಣ ಉಪಾಧ್ಯ ಅವರ ನೇತೃತ್ವದಲ್ಲಿ ನಾಲ್ಕುದಿನಗಳ ಆರಾಧನಾ ಮಹೋತ್ಸವ ಅತ್ಯಂತ ವೈಭವದಿಂದ ನಡೆಯಿತು.

ಲೇಖನ: ಡಾ.ಸುಧೀಂದ್ರ

Tags: ChannagiriFifth MantralayamKannada ArticleMantralayamSri Raghavendra Swamyಚನ್ನಗಿರಿಪಂಚಮ ಮಂತ್ರಾಲಯಬೃಂದಾವನಮಂತ್ರಾಲಯರಾಯರ ಪವಾಡಶ್ರೀರಾಘವೇಂದ್ರ ಸ್ವಾಮಿ
Previous Post

ಮತ್ತೊಂದು ‘ಅರುಣಾ’ಸ್ತ: ಕಾಡುತಿದೆ ಅನಾಥ ಭಾವ

Next Post

ಭದ್ರಾವತಿ ಕಲಾವಿದ ವರುಣ್‌ಗೆ ಒಲಿದ ಇಂಡಿಯನ್ ಬುಕ್ ಆಫ್ ರೆಕಾರ್ಡ್ ಗರಿ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಭದ್ರಾವತಿ ಕಲಾವಿದ ವರುಣ್‌ಗೆ ಒಲಿದ ಇಂಡಿಯನ್ ಬುಕ್ ಆಫ್ ರೆಕಾರ್ಡ್ ಗರಿ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಬಹುಮುಖ ಪ್ರತಿಭೆ ಲಕ್ಷ್ಮೀ ಭದ್ರಾವತಿ ಅವರಿಗೆ ರಂಗಭೂಮಿ ರತ್ನ ರಾಷ್ಟ್ರ ಪ್ರಶಸ್ತಿ

June 24, 2025

ಮಹತ್ವದ ನಿರ್ಧಾರ | ರೈಲು ಪ್ರಯಾಣ ದರ ಹೆಚ್ಚಳ | ಎಷ್ಟು ಏರಿಕೆ? ಎಲ್ಲ ಪ್ರಯಾಣಕ್ಕೂ ಅನ್ವಯವೇ?

June 24, 2025

HSVಯವರಿಗೆ ಭಾವ ನಮನ | ಸಾಹಿತ್ಯಾಸಕ್ತರ ಮನಗೆದ್ದ ಅದ್ಭುತ ಆಯೋಜನೆ

June 24, 2025

ಬೆಂಗಳೂರು-ಕಲಬುರಗಿ ವಂದೇ ಭಾರತ್ ರೈಲು ಕುರಿತಾಗಿ ಮಹತ್ವದ ಮಾಹಿತಿ ಇಲ್ಲಿದೆ

June 24, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಬಹುಮುಖ ಪ್ರತಿಭೆ ಲಕ್ಷ್ಮೀ ಭದ್ರಾವತಿ ಅವರಿಗೆ ರಂಗಭೂಮಿ ರತ್ನ ರಾಷ್ಟ್ರ ಪ್ರಶಸ್ತಿ

June 24, 2025

ಮಹತ್ವದ ನಿರ್ಧಾರ | ರೈಲು ಪ್ರಯಾಣ ದರ ಹೆಚ್ಚಳ | ಎಷ್ಟು ಏರಿಕೆ? ಎಲ್ಲ ಪ್ರಯಾಣಕ್ಕೂ ಅನ್ವಯವೇ?

June 24, 2025

HSVಯವರಿಗೆ ಭಾವ ನಮನ | ಸಾಹಿತ್ಯಾಸಕ್ತರ ಮನಗೆದ್ದ ಅದ್ಭುತ ಆಯೋಜನೆ

June 24, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!