ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಎರಡು ದಿನಗಳ ಹಿಂದೆ ಭದ್ರಾವತಿಯ ವಿಐಎಸ್ಎಲ್ ಕ್ವಾಟ್ರಸ್’ನಲ್ಲಿ ಸೆರೆಸಿಕ್ಕ ಚಿರತೆಯನ್ನು ಶೆಟ್ಟಿಹಳ್ಳಿ ಅಭಯಾರಣ್ಯದಲ್ಲಿ ಸುರಕ್ಷಿತವಾಗಿ ಬಿಡಲಾಯಿತು.
ಭದ್ರಾವತಿಯ ವಿಐಎಸ್ಎಲ್ ಕ್ವಾಟ್ರಸ್’ನಲ್ಲಿ ಸೆರೆಸಿಕ್ಕ ಚಿರತೆಯನ್ನು ಶೆಟ್ಟಿಹಳ್ಳಿ ಅಭಯಾರಣ್ಯದಲ್ಲಿ ಸುರಕ್ಷಿತವಾಗಿ ಬಿಡಲಾಯಿತು… pic.twitter.com/FWWetDZm9R
— Kalpa News (@KalpaNews) June 24, 2022
ವಿಐಎಸ್ಎಲ್ ಕ್ವಾಟ್ರಸ್’ನಲ್ಲಿ Bhadravathi VISL Quatras ಸೆರೆಸಿಕ್ಕ 5-6 ವರ್ಷದ ಚಿರತೆಯನ್ನು ಬೋನಿನಲ್ಲಿ ಬಂಧಿಸಿ ಇರಿಸಲಾಗಿತ್ತು. ತ್ಯಾವರೆಕೊಪ್ಪದ ಸಿಂಹಧಾಮದಲ್ಲಿ ಇರಿಸಲಾಗುತ್ತೆ ಎಂದು ಮೊದಲು ಹೇಳಲಾಗಿತ್ತು. ಆದರೆ, ಚಿರತೆಗೆ ಯಾವುದೇ ತೊಂದರೆಯಗದಂತೆ ಶೆಟ್ಟಿಹಳ್ಳಿ ಅರಣ್ಯದಲ್ಲಿ ಬಿಡಲಾಗಿದೆ.
ಬಿಡುವ ವೇಳೆಯಲ್ಲಿ ಚಿರತೆ ಆರೋಗ್ಯವಾಗಿತ್ತು ಎಂದು ವರದಿಯಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಚಿರತೆಯನ್ನು ಅರಣ್ಯಕ್ಕೆ ಬಿಡಲಾಯಿತು.
ಎರಡು ದಿನಗಳ ಹಿಂದೆ ಭದ್ರಾವತಿಯ ವಿಐಎಸ್ಎಲ್ ಕ್ವಾಟ್ರಸ್’ನ ಜನವಸತಿ ಪ್ರದೇಶದಲ್ಲಿ ಮುಂಜಾನೆಯೇ ಚಿರತೆ ಕಾಣಿಸಿಕೊಂಡಿತ್ತು. ಅರಣ್ಯ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿಗಳು ಸತತ ನಾಲ್ಕೂವರೆ ಗಂಟೆಗಳ ಕಾಲ ಕಾರ್ಯಚರಣೆ ನಡೆಸಿ ಸೆರೆ ಹಿಡಿಯಲಾಗಿತ್ತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post