ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಳ್ಳಕೆರೆ: ವಿಶಿಷ್ಟ ಆಚರಣೆ: ನಗರದೇವತೆ ಚಳ್ಳಕೆರೆಯಮ್ಮ ಜಾತ್ರೆ ಪ್ರಯುಕ್ತ ನಗರದಲ್ಲಿ ಸಿಡಿಕಂಬ ಹೇರುವ ಉತ್ಸವದ ವಿಶಿಷ್ಟ ಆಚರಣೆ ವಿಜೃಂಭಣೆಯಿಂದ ಜರುಗಿತು.
ಇಲ್ಲಿನ ನಗರ ದೇವತೆ ಚಳ್ಳಕೆರೆಯಮ್ಮನ ಮುಕ್ತಿ ಬಾವುಟ ಹಾರಾಜು ಮಾಡಿದ ನಂತರ ಸಿಡಿ ಬಂಡಿಯ ಉತ್ಸವದ ಆಚರಣೆ ವಿಜೃಂಭಣೆಯಿಂದ ನಡೆಯಿತು.
ಮಹಿಳೆಯುರು ದೀಪದ ಆರತಿ ಹಿಡಿದು ಸಿಡಿಕಂಬ ಹೇರುವ ಭಕ್ತರನ್ನು ಉರುಮೆ ವಾದ್ಯಗಳ ಮೂಲಕ ದೇವಿ ಗುಡಿಹತ್ತಿರ ಕರೆ ತಂದರು.
ಮುಕ್ತಿ ಬಾವುಟ 1 ಲಕ್ಷದ 101 ರೂಪಾಯಿಗೆ ಹಾರಾಜ್
ಗ್ರಂಥಿಕೆ ಅಂಗಡಿ ಮಾಲೀಕ ಹಳೆ ಟೌನ್’ನ ಶಂಕರಪ್ಪ ಮತ್ತು ಮಕ್ಕಳು 1.101 ಲಕ್ಷಕ್ಕೆ ದೇವಿಯ ಮುಕ್ತಿ ಬಾವುಟವನ್ನು ಹಾರಾಜಿನಲ್ಲಿ ಪಡೆದರು.
ವಿಶಿಷ್ಟ ಆಚರಣೆ
ನಗರ ದೇವತೆ ಚಳ್ಳಕೆರೆಯಮ್ಮ ಜಾತ್ರೆ ಪ್ರಯುಕ್ತ ಗುರುವಾರ ನಗರದಲ್ಲಿ ಸಿಡಿಕಂಬ ಏರುವ ಉತ್ಸವದ ವಿಶಿಷ್ಟ ಆಚರಣೆ ವಿಜೃಂಭಣೆಯಿಂದ ಜರುಗಿತು. ಸಿಡಿ ಹರಕೆ ಹೇರಲು ಒಂದೆರಡು ದಿನದಿಂದ ಉಪವಾಸ ಇದ್ದವರನ್ನು ಸ್ನಾನ ಮಾಡಿಸಿ ಮೈ ಕೈಗೆ ಗಂಧವನ್ನು ಬಳಿದು ಬಿಳಿವಸ್ತ್ರ ಹಾಗೂ ಹೂವಿನಿಂದ ಅಲಂಕರಿಸಿ ಹಿಡಿದುಕೊಳ್ಳಲು ಬಲಗೈ ಚಿಕ್ಕದೊಂದು ಬಾಕು, ಎಡ ಕೈಗೆ ನಿಂಬೆಹಣ್ಣು ಕೊಟ್ಟು ಆರಿತಿ ಹಾಗೂ ಉರುಮೆ ವಾದ್ಯ ನುಡಿಸುವ ಮೂಲಕ ಹರಕೆ ಹೊತ್ತ ಭಕ್ತರನ್ನು ದೇವಿ ಗುಡಿಯ ಹತ್ತಿರ ಸಿಡಿ ಕಂಬ ಹೇರಲು ಅವರನ್ನು ಕರೆತಂದರು.
ಮಹಿಳೆ ಮತ್ತು ಮಕ್ಕಳನ್ನು ಸಿಡಿ ಕಂಬಕ್ಕೆ ಕಟ್ಟಿ ಮೇಲಕ್ಕೇರಿಸುವಾಗ ಭಕ್ತರು ಗಲಬಿಲಿಗೊಂಡು ಗಾಬರಿಯಾಗಿ ಕೈ ಕಾಲುಗಳನ್ನು ಅತ್ತ ಇತ್ತ ಆಡಿಸುತ್ತಿದ್ದ ದೃಶ್ಯ ಸಿಡಿ ಉತ್ಸವ ನೋಡಲು ಬಂದವರ ಮನಸ್ಸು ಹಿಂಡುತ್ತಿತ್ತು. ಹಗ್ಗ ತುಂಡಾಗಿ ಮತ್ತು ಆಯಾ ತಪ್ಪಿ ಕೆಳಕ್ಕೆ ಪ್ರಾಣಾಪಾಯ ಆದರೆ ದೇವರ ಹರಕೆ ಎಂದು ಸದಾನ ಪಡಿಸಿಕೊಂಡರು.
ಜನಾಕರ್ಷಕಗೊಂಡ ಮೆರವಣಿಗೆ
ಹೂ ಮತ್ತು ಬೇವಿನ ಸೊಪ್ಪಿನಿಂದ ಅಲಂಕರಿಸಿದ ಸಿಡಿಕಂಬದ ಬಂಡಿಗೆ ಬಣ್ಣ ಬಣ್ಣದ ಕುಚ್ಚು, ಜೂಲು, ಗಗ್ರಿ, ಕೋಡು ಆಣಸು, ಗೆಜ್ಜೆ, ಗಂಟೆ ಸರಗಳಿಂದ ಅಲಂಕರಿಸಿದ 16 ಜೊತೆ ಜೊಡೆತ್ತುಗಳನ್ನು ಕಟ್ಟಿದ್ದರು.
ಮಹಿಳೆಯರು ಆರತಿ ಹಿಡಿದ್ದರು ಮತ್ತು ಕೀಲುಕುದುರೆ, ಸೋಮನಕುಣಿತ, ಜೋಗತಿಯರು ಹಾಗೂ ಪೋತರಾಜ ಕುಣಿತ, ಕೋಲಾಟ ಮತ್ತು ಡೋಲು, ಉರುಮೆ, ತಮಟೆ, ಕಹಳೆ, ಮುಂತಾದ ಜನಪದ ವಾದ್ಯಗಳ ಮೂಲಕ ಸಿಡಿ ಮರದ ಬಂಡಿಯ ಮೆರವಣಿಗೆ ನಡೆಯಿತು.
ಚಳ್ಳಕೆರಮ್ಮ ದೇವಿಯ ಗುಡಿಯಿಂದ ಹೊರಟ ಸಿಡಿ ಉತ್ಸವದ ಮೆರವಣಿಗೆ ಮಾರುಕಟ್ಟೆ ಬಳಿ ಹೋಗಿ ದೇವಿಯ ಗುಡಿಗೆ ಹಿಂದಿರುಗಿತು.
ಮುಸ್ಲಿಂ ಸಮುದಾಯದವರು ಉಚಿತ ಶುದ್ಧ ನೀರಿನ ಪ್ಯಾಕೇಟ್ನ್ನು ಜಾತ್ರೆಯಲ್ಲಿ ಭಕ್ತರಿಗೆ ವಿತರಿಸಿದರು. ಶಿವಮೊಗ್ಗ, ಬೆಂಗಳೂರು, ಶಾಸಕ ಟಿ. ರಘುಮೂರ್ತಿ. ನಗರ ಸಭೆ ಸದಸ್ಯರು. ತಾಲೂಕು ಪಂಚಾಯ್ತಿ ಸದಸ್ಯರು, ಡಿವೈಎಸ್ಪಿ ರೋಷನ್ ಜಮೀರ್, ವೃತ್ತ ನಿರೀಕ್ಷಕ ಇ. ಆನಂದ್, ಪಿಎಸ್ಐಗಳಾದ ಎಸ್.ಡಿ. ನೂರ ಅಹ್ಮದ್, ಗುಡಪ್ಪ, ಇದ್ದರು.
ಸಿಡಿ ಉತ್ಸವದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಯಿತು.
ಈ ಉತ್ಸವಕ್ಕೆ ಜನಾಕರ್ಷಕಗೊಂಡ ಮೆರವಣಿಗೆ
ಹೂ ಮತ್ತು ಬೇವಿನ ಸೊಪ್ಪಿನಿಂದ ಅಲಂಕರಿಸಿದ ಸಿಡಿಕಂಬದ ಬಂಡಿಗೆ ಬಣ್ಣ ಬಣ್ಣದ ಕುಚ್ಚು, ಜೂಲು, ಗಗ್ರಿ, ಕೋಡು ಆಣಸು, ಗೆಜ್ಜೆ, ಗಂಟೆ ಸರಗಳಿಂದ ಅಲಂಕರಿಸಿದ 16 ಜೊತೆ ಜೊಡೆತ್ತುಗಳನ್ನು ಕಟ್ಟಿದ್ದರು.
ಮೈಸೂರು, ದಾವಣಗೆರೆ, ಬಳ್ಳಾರಿ, ರಾಯದುರ್ಗ, ತುಮಕೂರು ಮುಂತಾದ ಭಾಗದಿಂದ ನೂರಾರು ಜನರು ಸಿಡಿ ಉತ್ಸವದಲ್ಲಿ ಭಾಗವಹಿಸಿದ್ದರು.
(ವರದಿ: ಸುರೇಶ್ ಬೆಳಗೆರೆ, ಚಳ್ಳಕೆರೆ)
Get in Touch With Us info@kalpa.news Whatsapp: 9481252093
Discussion about this post