Thursday, October 2, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ಅಂಕಣ ಸಚಿನ್ ಪಾರ್ಶ್ವನಾಥ್

ಚಿರಂಜೀವಿ ಆನಂದಿ | ಅಮೇರಿಕಾಗೆ ಕಾಲಿಟ್ಟ ಮೊದಲ ಹಿಂದೂ ಮಹಿಳೆ: ಆಕೆಯನ್ನು ನೆನೆಯುವುದೇ ಒಂದು ಪುಣ್ಯ

ಭಾರತದಲ್ಲಿ ನೂರ್ಕಾಲ ಜೀವಂತವಾಗಿ ಬೆಳಗಬೇಕಿದ್ದ ದೀವಿಗೆ ನಂದಿಹೋಗಿತ್ತು 

March 31, 2023
in ಸಚಿನ್ ಪಾರ್ಶ್ವನಾಥ್
0 0
0
Share on facebookShare on TwitterWhatsapp
Read - 3 minutes

ಕಲ್ಪ ಮೀಡಿಯಾ ಹೌಸ್  |  ವಿಶೇಷ ಲೇಖನ: ಸಚಿನ್ ಪಾರ್ಶ್ವನಾಥ್  |

ಹತ್ತೊಂಬತ್ತನೆಯ ಶತಮಾನದ ಉತ್ತರಾರ್ಧ. ಮಹಾರಾಷ್ಟ್ರದ ಕಲ್ಯಾಣ್ ನಲ್ಲಿ ಗಣಪತಿರಾವ್ ಅಮೃತೇಶ್ವರ್ ಜೋಶಿ ದಂಪತಿಗಳಿಗೆ ಮುದ್ದಾದ ಹೆಣ್ಣು ಮಗು ಯಮುನಾಳ ಜನನ. ಹೆಣ್ಣು ಅಂದಾಗೆಲ್ಲ ಒಂದು ಹೊರೆ ಎನ್ನುವ ಕಾಲ ಅದು. ಎಷ್ಟು ಬೇಗ ಆಗತ್ತಾದೋ ಅಷ್ಟು ಬೇಗ ಮದುವೆ ಮಾಡಿ ಸಾಗಿ ಹಾಕುವ ಧಾವಂತ. ಅದಕ್ಕೆ ಸರಿಯಾಗಿ ಒಂಬತ್ತು ತುಂಬಿದ್ದೇ ತಡ ಅದಾಗಲೇ ಪತ್ನಿ ಕಳೆದುಕೊಂಡ ಅಂಚೆ ಇಲಾಖೆಯ ತರುಣ ಗೋಪಾಲರಾಯ ಸಿಕ್ಕಿದ್ದ. ಅವನಿಗೋ ಅಜಮಾಸು ಮೂವತ್ತು. ಸದೈವವಶಾತ್ ಗೋಪಾಲನಿಗೆ ಅವಳೆಂದರೆ ಜೀವ. ಅದೇನೋ ಬಿಡಿಸಲಾಗದ ಬಂಧ. ಕಣ್ಣಲ್ಲಿ ಕಣ್ಣಿಟ್ಟು ಕಾದ. ತುಂಬಾ ನೋವು ಬಡಕಲು ಹುಡುಗಿಯ ಎದೆಯಲ್ಲಿ ಆನಂದ ತುಂಬಿದ. ಆ ಯಮುನಾಳ ಆನಂದಿ ಎಂದ. ಅಕ್ಷರ ಕಳಿಸಿದ, ತಿದ್ದಿದ, ಬರೆಸಿದ. ತುಂಬು ಪ್ರೀತಿಯ ಜೋಡಿಗೆ ಹೊಸ ಕಂದನ ಆಗಮನದ ಸಮಯ.

ಹದಿನಾಲ್ಕರ ಹರೆಯದ ಆನಂದಿಯ ಬಾಳಲ್ಲಿ ಪುಟ್ಟ ಗಂಡು ಮಗ ಬಂದ. ಆದರೇನು ಮಾಡುವುದು ಹುಟ್ಟು ಅನಾರೋಗ್ಯ ಪೀಡಿತ ಮಗು ಹುಟ್ಟಿದ ಕೆಲವೇ ದಿನಕ್ಕೆ ಮಣ್ಣಾಗಿ ಹೋಯಿತು; ಅವಳ ಖುಷಿಯು ಕೂಡ. ಕಷ್ಟದ ದಿನಗಳಲ್ಲಿ ಆನಂದಿ ಅಂತರ್ಮುಖಿಯಾದಳು. ಬದುಕಿನ ಅರ್ಥ ಹುಡುಕಿದಳು. ಗಟ್ಟಿ ಮನಸು ಮಾಡಿ ವೈದ್ಯೆಯಾಗುವ ಕನಸು ಕಂಡಳು. ಆ ಸಮಯವೋ ಸರಿಯಾದ ಒಂದು ಕಾಲೇಜು ಇರಲಿಲ್ಲ. ಛಲ ಬಿಡಲಿಲ್ಲ. ಇಂಗ್ಲಿಷ್ ಕಲಿತಳು. ಅಲ್ಲೆಲ್ಲೋ ಅಮೇರಿಕೆಯ ಅಂಗಳದಲ್ಲಿ ಒಂದು ಭರವಸೆಯ ರೇಖೆ ಕಂಡಿತು.
ಹೌದು ಕಾಲೇಜು ಇದೆ ಅಂತ ಗೊತ್ತಾಗಿದ್ದೇ ತಡ ಗೋಪಾಲರಾಯ ಒಂದು ಪತ್ರ ಬರೆದೇಬಿಟ್ಟರು. ತನ್ನೆಲ್ಲ ನೋವು, ಕನಸುಗಳ ಬರೆದು ಕಳಿಸಿದ ಮೇಲೆ ಉತ್ತರವೂ ಬಂತು. ತುಂಬಾ ಸರಳವಾಗಿತ್ತು ನೀವಿಬ್ಬರೂ ಕ್ರಿಶ್ಚಿಯನ್ ಧರ್ಮಕ್ಕೆ ಸೇರುವುದಾದರೆ ನಿಮ್ಮ ಜವಾಬ್ದಾರಿ ನಮ್ಮದೇ ಅಂತ! ಹೇಗೆ ಒಪ್ಪೀತು ಆ ಜೀವ? ಕನಸಿಗಾಗಿ ಬದುಕು ಮಾರುವುದೇ? ಛೇ, ಎಂತ ದುಷ್ಟ ಸಮಾಜ ಎನ್ನುವಾಗಲೇ ಅದು ಹೇಗೋ ಈ ಪತ್ರ ವ್ಯವಹಾರ ತಿಳಿದ ಅಮೇರಿಕನ್ ಮಹಿಳೆಯೊಬ್ಬರು ಆನಂದಿ ಇನ್ನು ನನ್ನ ಮನೆಮಗಳು ಕಳಿಸಿಕೊಡಿ, ಅವಳ ಜವಾಬ್ದಾರಿ ನನ್ನದೇ ಎಂದು ಒಂದು ಪತ್ರ ಬರೆದಿದ್ದರು. ಕನಸಿಗೆ ಒಂದು ಕಾಣದ ಆಸರೆ ದೊರಕಿತ್ತು. ಸ್ವರ್ಗಕ್ಕೆ ಮೂರೇ ಗೇಣು. ಆನಂದಿಗೆ ರೆಕ್ಕೆ ಬಂದಿರಲಿಕ್ಕೂ ಸಾಕು. ಉಹುಂ ಹಾಗೇ ಬಹಳ ದಿನ ಉಳಿಯಲಿಲ್ಲ. ಎಂದೂ ಕಾಣದ ಊರಿಗೆ, ಯಾರು ಗೊತ್ತಿರದ ಪರದೇಶಿಗಳ ನಾಡಿಗೆ ತಮ್ಮ ಮನೆಮಗಳು ಹೊರಟದ್ದು ಯಾಕೋ ಕೆಲವರಿಗೆ ಸರಿ ಕಾಣಲಿಲ್ಲ. ಆದರೆ ಅದೆಲ್ಲಿತ್ತೋ ಧೈರ್ಯ? ಅವರೆಲ್ಲರ ಎದುರು ನಿಂತ ಆನಂದಿ ಎಲ್ಲರಿಗೂ ಉತ್ತರ ನೀಡಿದಳು. ರಾಶಿ ಕನಸುಗಳ ಕಟ್ಟಿಕೊಂಡು ಪಶ್ಚಿಮದ ನಾಡಿನ ಅಮ್ಮನ ಮನೆಗೆ ಹೊರಟಿದ್ದಳು.
ಅದೇ ಚಂದದ ಪತ್ರ ಬರೆದ ಅಮೇರಿಕೆಯ ತಾಯಿ ತಿಯೊಡಿಸಿಯ ಆನಂದಿಯ ಅಪ್ಪಿದಳು. ಒಲುಮೆಯಿಂದ ಸಾಕಿ ಸಲಹಿದಳು. 1886 ಆನಂದಿಯ ವರ್ಷ. ಹೌದು, ಆ ವರ್ಷ ಅವಳು ಕನಸನ್ನು ಸಾಧಿಸಿದ್ದಳು. ಪೆನ್ಸಿಲ್ವೆನಿಯಾ ಕಾಲೇಜಿನಲ್ಲಿ ವೈದ್ಯಕೀಯ ಪದವಿ ಪಡೆದಳು. ಅವಳು ಭಾರತಕ್ಕೆ ಮರಳಿದ್ದು ಬರಿ ವೈದ್ಯೆಯಾಗಿಯಲ್ಲ. ಅವಳಂತಹ ಸಾವಿರಾರು ಮಹಿಳೆಯರಿಗೆ ಒಂದು ಧ್ಯೇಯವಾಗಿ. ಅಮೇರಿಕಾಗೆ ಕಾಲಿಟ್ಟ ಏಷ್ಯಾದ ಮೊದಲ ಮಹಿಳೆ, ಮೊದಲ ಹಿಂದೂ ಮಹಿಳೆ, ಅಷ್ಟೇ ಏಕೆ? ಪಾಶ್ಚಾತ್ಯ ವೈದ್ಯಕೀಯ ಪದವಿ ಪಡೆದ ಮೊಟ್ಟಮೊದಲ ಮಹಿಳಾ ವೈದ್ಯೆ ಎಂದೆಲ್ಲಾ ಕರೆಸಿಕೊಂಡ ಆನಂದಿ ವೈದ್ಯೆಯಾಗಿ ಭಾರತಕ್ಕೆ ಬಂದಳು. ಎಲ್ಲೆಲ್ಲೂ ಅಭಿನಂದನೆಯ ಮಹಾಪೂರ.

ಕೊಲ್ಲಾಪುರ ಸಂಸ್ಥಾನದ ರಾಜಾಶ್ರಯದಲ್ಲಿ ವೈದ್ಯೆಯಾಗಿ, ಮುಖ್ಯಸ್ಥೆಯಾಗಿ ಉನ್ನತ ಸೇವೆ ನೀಡುತ್ತಿರುವಾಗಲೇ ಕಾಲ ಮತ್ತೆ ಟೊಂಕ ಕಟ್ಟಿಕೊಂಡು ಎದುರು ಬಂದು ನಿಂತಿತ್ತು. ಕಷ್ಟಗಳ ಬಾನಿಗೆ ಏರಿ, ಸಮಾಜದ ತೊಡರುಗಳ ಜೀಕಿ, ಸಪ್ತ ಸಾಗರದ ಆಚೆಯಿಂದ ಯಶಸ್ಸು ದುಡಿದು ತನ್ನೊಳಗೆ ಬೆಳೆದಿದ್ದ ಕ್ಷಯ ರೋಗಕ್ಕೆ ಇನ್ನಿಲ್ಲದಂತೆ ದಣಿದಳು. ಯಾರಿಗೆ ಭವ್ಯ ಭಾರತದ ಶಿಲ್ಪಿ ಬಾಲಗಂಗಾಧರನಾಥ ತಿಲಕರು ಉಧೋ ಎಂದಿದ್ದರೋ, ಆ ತಾಯಿ ಔಷಧವಿಲ್ಲದೆ ಕ್ಷಯ ರೋಗಕ್ಕೆ ಶರಣಾದಳು. ಕಾಯಿಲೆಗಳು ಜಿದ್ದು ಕಟ್ಟಿಕೊಂಡು ನಿಂತಿದ್ದವೋ ಏನೋ? ಅಂದು ಫೆಬ್ರವರಿ 26, 1887 ಭಾರತದಲ್ಲಿ ನೂರ್ಕಾಲ ಜೀವಂತವಾಗಿ ಬೆಳಗಬೇಕಿದ್ದ ದೀವಿಗೆ ನಂದಿಹೋಗಿತ್ತು.

ಒಂಬತ್ತರ ಹರೆಯಕ್ಕೆ ಮದುವೆ, ಹದಿನಾಲ್ಕಕ್ಕೆ ಮಗು, ಇಪ್ಪತ್ತೆರಡರ ಹರೆಯಕ್ಕೆ ಎಂದೂ ಮರೆಯಲಾಗದಷ್ಟು ಯಶಸ್ಸಿನ ಕಥೆಯ, ನೆನಪುಗಳ ಗಂಟು ನೀಡಿ ಆನಂದಿ ಹೊರಟು ಹೋದಳು. ಪ್ರೀತಿಯ ಧಾರೆ ಎರೆವ ಗಂಡ, ಅವನ ಗಟ್ಟಿ ನೌಕರಿ, ಒಳ್ಳೆಯ ಮನೆ ಎಲ್ಲವನ್ನೂ ತೊರೆದು ಕನಸ ಭೇಟಿಯಾಗಿ, ಭಾರತವನ್ನು ಆರೈಸಲು ಬಂದ ಮಗಳು ಒಡಲಲಿ ಸಾವು ಕಟ್ಟಿಕೊಂಡು ಬಂದಳು. ಬದುಕಿದ್ದು ಕಾಲು ಶತಮಾನವೂ ಅಲ್ಲ. ಆದರೆ ಒಂದೂವರೆ ಶತಮಾನ ಕಳೆದರೂ ಆಕೆ ಚಿರಂಜೀವಿ. ಇಂದು ಮಾರ್ಚ್ 31, ಅವರ ಜನುಮದಿನ. ಅವರನ್ನು ನೆನೆಯುವುದು ಒಂದಿಷ್ಟು ಪುಣ್ಯ ಸಂಪಾದಿಸುವುದೇ ಸರಿ. ಈ ಲೇಖನ ಕ್ಷಣ ಹಣಗಳ ಲೆಕ್ಕ ಹಾಕದೇ ಅನೇಕರನ್ನು ಉಪಚರಿಸುವ ದೈವಸದೃಶ ಸುವೈದ್ಯರಿಗೆ ಅರ್ಪಣೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Kalahamsa Infotech private limited

Tags: Balagangadharnath TilakChiranjeevi AnandiKannada News WebsiteKolhapurLatest News KannadaMaharashtraPennsylvaniaSachin Parshwanathಕೊಲ್ಲಾಪುರ ಸಂಸ್ಥಾನಚಿರಂಜೀವಿ ಆನಂದಿಪೆನ್ಸಿಲ್ವೆನಿಯಾಬಾಲಗಂಗಾಧರನಾಥ ತಿಲಕರುಮಹಾರಾಷ್ಟ್ರ
Previous Post

ಜಿಲ್ಲಾಧಿಕಾರಿ ಹೈಅಲರ್ಟ್: ತಡರಾತ್ರಿವರೆಗೂ ಚುನಾವಣಾ ಚೆಕ್ ಪೋಸ್ಟ್ ಪರಿಶೀಲಿಸಿದ ಡಿಸಿ ಸೆಲ್ವಮಣಿ

Next Post

ಶಿವಮೊಗ್ಗ ಜಿಲ್ಲೆಯ ಐವರಿಗೆ ಪೊಲೀಸರಿಗೆ ಮಖ್ಯಮಂತ್ರಿಗಳ ಪದಕದ ಗೌರವ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಶಿವಮೊಗ್ಗ ಜಿಲ್ಲೆಯ ಐವರಿಗೆ ಪೊಲೀಸರಿಗೆ ಮಖ್ಯಮಂತ್ರಿಗಳ ಪದಕದ ಗೌರವ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ನವರಾತ್ರಿ | ಸಿದ್ಧಿದಾತ್ರಿ ಪೂಜೆ ವಿಶೇಷತೆಯೇನು?

October 1, 2025
Internet Image

ಕೇಂದ್ರ ಸರ್ಕಾರಿ ನೌಕರರಿಗೆ ದಸರಾ ಬಿಗ್ ಗಿಫ್ಟ್ ಕೊಟ್ಟ ಮೋದಿ ಸರ್ಕಾರ

October 1, 2025

ಭದ್ರಾವತಿ | 24 ವರ್ಷಗಳಿಂದ ಗೊಂಬೆ ಅಲಂಕಾರ ಮಾಡುವ ಈ ಮನೆಯಲ್ಲಿ ಈ ಬಾರಿಯೂ ವಿಶೇಷ

October 1, 2025

ಅ.2ರಂದು ಗಾಂಧಿ ಬಸಪ್ಪ ಕುಟುಂಬದಿಂದ ಗಾಂಧೀಜಯಂತಿ ಕಾರ್ಯಕ್ರಮ

October 1, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕಾನೂನು ಕಲ್ಪ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ನವರಾತ್ರಿ | ಸಿದ್ಧಿದಾತ್ರಿ ಪೂಜೆ ವಿಶೇಷತೆಯೇನು?

October 1, 2025
Internet Image

ಕೇಂದ್ರ ಸರ್ಕಾರಿ ನೌಕರರಿಗೆ ದಸರಾ ಬಿಗ್ ಗಿಫ್ಟ್ ಕೊಟ್ಟ ಮೋದಿ ಸರ್ಕಾರ

October 1, 2025

ಭದ್ರಾವತಿ | 24 ವರ್ಷಗಳಿಂದ ಗೊಂಬೆ ಅಲಂಕಾರ ಮಾಡುವ ಈ ಮನೆಯಲ್ಲಿ ಈ ಬಾರಿಯೂ ವಿಶೇಷ

October 1, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!