ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ನಿನ್ನೆ ನಿಧನರಾದ ಖ್ಯಾತ ನಟ ಚಿರಂಜೀವ ಸರ್ಜಾಗೆ ಯಾವುದೇ ರೀತಿಯ ದುಶ್ಚಟಗಳು ಇರಲಿಲ್ಲ. ದಯಮಾಡಿ ಯಾವುದೇ ರೀತಿಯ ಗಾಳಿಸುದ್ದಿಯನ್ನು ನಂಬಬೇಡಿ ಎಂದು ಸರ್ಜಾ ಕುಟುಂಬದ ಆಪ್ತ, ಚಿತ್ರರಂಗದ ಗಣ್ಯರಾದ ಪ್ರಶಾಂತ್ ಸಂಬರ್ಗಿ ವಿನಂತಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿರು ಡ್ರಗ್ಸ್ ಸೇವಿಸುತ್ತಿದ್ದರು, ನಿದ್ರೆ ಮಾತ್ರೆ ತೆಗೆದುಕೊಳ್ಳುತ್ತಿದ್ದರು ಎಂದೆಲ್ಲಾ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹರಡಲಾಗುತ್ತಿದೆ. ಆದರೆ, ಚಿರುಗೆ ಯಾವುದೇ ರೀತಿಯ ದುಶ್ಚಟಗಳು ಇರಲಿಲ್ಲ. ಇಂತಹ ಯಾವುದೇ ಗಾಳಿ ಸುದ್ದಿಯನ್ನು ನಂಬಬೇಡಿ ಎಂದು ಮನವಿ ಮಾಡಿದ್ದಾರೆ.
ಅಸ್ವಸ್ಥಗೊಂಡ ಚಿರಂಜೀವಿಯನ್ನು ಮಧ್ಯಾಹ್ನ ಆಸ್ಪತ್ರೆಗೆ ಕರೆದುಕೊಂಡು ಬಂದು ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ನೀಡಲಾಯಿತು. ಆದರೆ, ಅವರ ಶರೀರ ಚಿಕಿತ್ಸೆಗೆ ಸ್ಪಂದಿಸುತ್ತಿರಲಿಲ್ಲ. ಮೂರು ಬಾರಿ ಸಿಪಿಆರ್ ಚಿಕಿತ್ಸೆ ನೀಡಿದರೂ ಸಹ ಯಾವುದೇ ಸ್ಪಂದನೆ ಇರಲಿಲ್ಲ. ಕೂಲಂಕಶವಾಗಿ ಪರೀಕ್ಷೆ ನಡೆಸಿದ ವೈದ್ಯರು ಚಿರಂಜೀವ ಸರ್ಜಾರ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ ಎಂದು 3.48ಕ್ಕೆ ಘೋಷಿಸಿದರು. ಆದರೆ, ಚಿರು ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ಇಲ್ಲದ ಸಲ್ಲದ ಸುಳ್ಳುಗಳನ್ನು ಹಬ್ಬಿಸಲಾಗುತ್ತಿದೆ. ಇದನ್ನು ನಂಬಬೇಡಿ ಎಂದರು.
Get In Touch With Us info@kalpa.news Whatsapp: 9481252093
Discussion about this post