ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಳ್ಳಕೆರೆ: ಉಪ್ಪಾರ ಅಭಿವೃದ್ಧಿ ನಿಗಮದಿಂದ ಸಮಾಜದ ಅಭಿವೃದ್ಧಿಗೆ ಸಾಕಷ್ಟು ಸೌಲಭ್ಯಗಳಿದ್ದು, ಅವುಗಳನ್ನು ಸಮುದಾಯ ಬಳಕೆ ಮಾಡಿಕೊಳ್ಳದೆ ಇರುವುದರಿಂದ ಅವುಗಳನ್ನು ಬೇರೆಯವರು ಪಡೆಯುತ್ತಿದ್ದಾರೆ ಎಂದು ಕರ್ನಾಟಕ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಕೆ.ಗಿರೀಶ್ ಉಪ್ಪಾರ ವಿಷಾದ ವ್ಯಕ್ತಪಡಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗದ ಅಧ್ಯಕ್ಷgದ ನಂತರ ಪ್ರಥಮ ಬಾರಿ ಭೇಟಿ ನೀಡಿ ಉಪ್ಪಾರ ಸಮುದಾಯದೊಂದಿಗೆ ಕುಂದುಕೊರೆತೆಗಳು ಹಾಗೂ ನಿಗಮದಲ್ಲಿ ದೊರೆಯುವ ಸೌಲಭ್ಯಗಳ ಬಗ್ಗೆ ಜಾಗೃತಿ ಮೂಡಿಸುವ ಮಾತನಾಡಿದರು.
ಯಾವ ಸಮುದಾಯದಲ್ಲಿ ಸಂಘಟನೆ ಕೊರತೆ ಇರುತ್ತದೆಯೋ, ಅಂತಹ ಸಮುದಾಯದಲ್ಲಿ ರಾಜಕೀಯ ಪ್ರಾತಿನಿದ್ಯತೆ ಹಾಗೂ ಸರಕಾರದ ಸೌಲಭ್ಯಗಳಿಂದ ವಂಚಿತರಾಗಿ ಹಿಂದುಳಿಯಲು ಸಾಧ್ಯವಾಗುತ್ತದೆ. ಆದ್ದರಿಂದ ನಮ್ಮ ಸಮುದಾಯ ಆರ್ಥಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಹಿಂದೆ ಬಿದ್ದಿದ್ದು ಇನ್ನು ಮುಂದೆಯಾದರೂ ಸಮುದಾಯದಲ್ಲಿ ಒಗ್ಗಟ್ಟಿನ ಬಲವನ್ನು ಸರಕಾರದ ಮುಂದೆ ಪ್ರದರ್ಶಿಸಬೇಕು ಎಂದು ಕರೆ ನೀಡಿದರು.
ನಾನು ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನ ವಹಿಸಿಕೊಂಡ ಮೇಲೆ ರಾಜ್ಯದಾದ್ಯಂತ ಸಮುದಾಯ ಸಂಘಟನೆ ಹಾಗೂ ಅಭಿವೃದ್ಧಿ ನಿಗದಲ್ಲಿ ದೊರೆಯುವ ಗಂಗಾಕಲ್ಯಾಣ, ನೇರ ಸಾಲಸೌಲಭ್ಯ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಅರ್ಹರಿಗೆ ತಲುಪಿಸುವ ಪ್ರಯತ್ನ ಮಾಡಿದ್ದೇನೆ ಎಂದರು.
ನಿಗಮದ ಎಲ್ಲಾ ಸೌಲಭ್ಯಗಳು ಹಾಗೂ ಫಲಾನುಭವಿಗಳ ಪಟ್ಟಿಯನ್ನು ತಂತ್ರಾಂಶದಲ್ಲಿ ಅಳವಡಿಸಲು ಮುಂದೆ ಬಂದಿದ್ದೇನೆ. ಉಪ್ಪಾರ ಸಮುದಾಯದವರು ಸಾಲ ಸೌಲಭ್ಯಗಳಿಗೆ ಅರ್ಜಿಗಳನ್ನು ಹಾಕಿ ಮನೆಯಲ್ಲಿ ಕೂರುತ್ತಾರೆ. ಆದ್ದರಿಂದ ಬೇರೆ ಸಮುದಾಯದವರು ಅಧಿಕಾರಿಗಳ ಹಾಗೂ ಪಟ್ಟ ಭದ್ರ ಹಿತಾಸಕ್ತಿಗಳಿಂದ ಅದರ ಲಾಭ ಪಡೆಯುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಲು ಮುಂದಾಗಿದ್ದು, ಸರಕಾರದ ಸವಲತ್ತುಗಳನ್ನು ಪಡೆಯ ಬೇಕಾರೆ, ಸಮಾಜ ಪಕ್ಷಭೇದ ಮರೆತು ಒಗ್ಗಟ್ಟಾಗಿ ಸರ್ಕಾರಿ ಸೌಲಭ್ಯವನ್ನು ಪಡೆಯಬೇಕು ಎಂದು ಹೇಳಿದರು.
ಉಪ್ಪಾರ ಸಮುದಾಯದ ವಿದ್ಯಾರ್ಥಿನಿಲಯದ ಕಟ್ಟಡ ಶಿಥಿಲವಾಗಿದ್ದು, ಕಟ್ಟಡದ ಅಭಿವೃದ್ಧಿಗೆ ಅನುದಾನ ಕೊಡಿಸಲಾಗುವುದು ಅಂದಾಜು ಮೊತ್ತದ ಕ್ರಿಯಾಯೋಜನೆ ರೂಪಿಸಿ ಕಳಿಸುವಂತೆ ತಿಳಿಸಿದರು.
ತಾಲೂಕು ಉಪ್ಪಾರ ಸಂಘದ ಅಧ್ಯಕ್ಷ ಯಲ್ಲಪ್ಪ, ನಾಗರಾಜು, ಪ್ರೊ.ಟಿ. ನಾಗರಾಜ್, ರಾಮಣ್ಣ, ಪರಮೇಶ್ವರಪ್ಪ, ಮಂಜುನಾಥ, ಎಲ್ಐಸಿ ರಂಗಸ್ವಾಮಿ ಮಾತನಾಡಿದರು.
ಸಭೆಯಲ್ಲಿ ನೂತನ ಗ್ರಾಪಂ ಅಧ್ಯಕ್ಷ ಪಾತಣ್ಣ, ಗೌರಮ್ಮ, ಹನುಮಕ್ಕ, ಮುಖಂಡರಾದ ಹನುಮಂತಪ್ಪ, ಎಸ್.ಟಿ. ತಿಪ್ಪೇಸ್ವಾಮಿ, ಹೆಚ್. ರಂಗನಾಥ, ಮುಸ್ಟೂರ ಲಿಂಗಪ್ಪ, ಅಚ್ಚುಳ್ಳಪ್ಪ, ಮಾರುತಿ, ರಾಮಕೃಷ್ಣಪ್ಪ, ಶಿಕ್ಷಕ ಮಂಜುನಾಥ ಸೇರಿದಂತೆ ಸಮುದಾಯದ ಮುಖಂಡರು ಭಾಗವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post