ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಳ್ಳಕೆರೆ: ಕಳ್ಳತನ ನಡೆದ ಕೇವಲ 12 ಗಂಟೆಯಲ್ಲಿ ಆರೋಪಿಯನ್ನು ಬಂದಿಸುವಲ್ಲಿ ಚಳ್ಳಕೆರೆ ಪೊಲೀಸರು ಯಶಸ್ವಿಯಾಗಿದ್ದಾರೆ.
ನಗರದ ಹೃದಯ ಭಾಗದಲ್ಲಿರುವ ಕೆಎಸ್’ಆರ್’ಟಿಸಿ ಬಸ್ ನಿಲ್ದಾಣದಲ್ಲಿರುವ ಅರಮನೆ ಹೋಟೆಲ್’ನ ಕ್ಯಾಶ್ ಕೌಂಟರ್ನಲ್ಲಿ ಇಟ್ಟಿದ್ದ ಸುಮಾರು 60 ಸಾವಿರ ರೂ. ನಗದನ್ನು ಕಳ್ಳತನ ಮಾಡಿದ ಆರೋಪಿ ನವೀನ್ ಎನ್ನುವವನನ್ನು ಪೊಲೀಸರು ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಕುರಿತಂತೆ ಪಿಎಸ್’ಐ ಮಂಜುನಾಥ್ ಮಾತನಾಡಿ, ಇದೇ ಆರೋಪಿ ನವೀನ್ ಅ.8ರಂದು ನಗರದಲ್ಲಿ ಮೊಬೈಲ್ ಕಳ್ಳತನ ಮಾಡಿದ ಪ್ರಕರಣದಲ್ಲಿ ಬಂದಿತನಾಗಿದ್ದನು. ಆದರೆ ಕೋರ್ಟ್ ಮೂಲಕ ಜಾಮೀನು ಪಡೆದು ಹೊರ ಬಂದಿದ್ದ. ಆದರೆ ಈಗ ಮತ್ತೆ ನಗದು ಕಳ್ಳತನ ಆರೋಪದಲ್ಲಿ ಪೊಲೀಸರ ಅತಿಥಿಯಾಗಿದ್ದಾನೆ ಎಂದಿದ್ದಾರೆ.
ಕಳ್ಳರನ್ನು ಮಟ್ಟ ಹಾಕಲು ತಮ್ಮದೇ ಆದ ರೀತಿಯಲ್ಲಿ ಯೋಜನೆ ರೂಪಿಸಿಕೊಂಡಿದ್ದೇವೆ. ನಗರದ 31 ವಾರ್ಡ್ಗಳಲ್ಲಿ ಸಾರ್ವಜನಿಕರ ಸಹಕಾರದಿಂದ ಪ್ರತಿ ವಾರ್ಡ್ಗಳಲ್ಲಿ ಸಿಸಿಟಿವಿ ಅಳವಡಿಕೆ ಹಾಗೂ ಅನುಮಾನಸ್ಪದ ವ್ಯಕ್ತಿಗಳ ಗುರುತಿಸುವಿಕೆ ಈಗೇ ಹಲವು ಕ್ರಮಗಳನ್ನು ಕೈಗೊಂಡಿದ್ದೇವೆ. ಲಾಕ್ಡೌನ್ನಿಂದ ಉದ್ಯೋಗ ಕಡಿಮೆಯಾಗಿದೆ. ಆದರೆ ಕಳ್ಳರ ಹಾವಳಿ ಹೆಚ್ಚಾಗುತ್ತದೆ. ಆದಕ್ಕೆ ನಗರದಲ್ಲಿ ಸೂಕ್ಷ್ಮ ಕಣ್ಣಾಗವಲು ಟೀಂ ಮಾಡಿ ಕಳ್ಳರ ಬೇಟೆಗೆ ಬಲೆ ಬೀಸಿದ್ದೇವೆ.
-ಶ್ರೀಧರ್, ಡಿವೈಎಸ್ಪಿ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post