ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
March 22 ಇಡೀ ದಿನ ಕೊರೋನ ಕರ್ಫ್ಯೂ. ಎಲ್ಲರಿಗೂ ಗೊತ್ತಿದೆ. ಆದರೂ ಸಿದ್ಧರಾಮಯ್ಯನವರಂತಹ ಬೇಜವಾಬ್ದಾರಿ ಮನುಷ್ಯರು ಇದಕ್ಕೆ ತಕರಾರಿನ ಮಾತನಾಡುತ್ತಾರೆ. ಒಬ್ಬ ಮಾಜಿ ಮುಖ್ಯಮಂತ್ರಿಯಾಗಿ, ಜನ ಪ್ರತಿನಿಧಿಯಾಗಿ, ವಿಪಕ್ಷ ನಾಯಕನಾಗಿ ಹೆಂಡ ಕುಡಿದವರಂತೆ ಮಾತನಾಡಿದ್ದು ಅಮಾನವೀಯವೇ. ತಮಾಷೆ ಹೆಗ್ಗಳಿಕೆಗಾಗಿ ಪ್ರಧಾನಮಂತ್ರಿಯವರು ಈ ನಿರ್ಬಂಧ ಹೇರಲು ಸಿದ್ದರಾಮಯ್ಯನಂತವರೇ? ಸ್ವಲ್ಪ ಯೋಚಿಸಿ.
My address to the nation. #IndiaFightsCorona https://t.co/w3nMRwksxJ
— Narendra Modi (@narendramodi) March 19, 2020
ಈವರೆಗೆ ಚೈನಾ ದೇಶವು ಹಸಿ ಹಸಿ ಹುಳಹುಪ್ಪಟೆ ತಿನ್ತಾವೆ ರೋಗ ಹರಡುತ್ತವೆ. ಇದರ ಫಲ ಜಗತ್ತಿಗೇ ಮಾರಕ. ಅಬೋಲ, ಸಾರ್ಸ್, ನಿಫಾ ಮುಂತಾದ ವೈರಲ್ ರೋಗವನ್ನು ಸೃಷ್ಟಿಸಿತು. ಮುಂದೆ ಇದೇ ವೈರಾಣು ಬಲಿಷ್ಟವಾಗಿ ಕೊರೋನ ಆಗಿ ಪರಿವರ್ತನೆಯಾಯ್ತು. ಬಾವಲಿಯಲ್ಲಿ ಅತ್ಯಧಿಕ ವೈರಾಣುಗಳಿರುತ್ತವೆ. ಅಂತದ್ದನ್ನೇ ಮುಕ್ಕುತ್ತಾ H1 N1, ನಿಫಾ ನಂತರ ಅದರ ಇನ್ನೊಂದು ರಾಕ್ಷಸ ಸ್ವರೂಪ ಕೊರೋನ.
ಕೊರೋನ ರೋಗವನ್ನು stage 1,2,3,4 ಎಂದು ವೈದ್ಯಲೋಕ ವಿಂಗಡಿಸಿದೆ. ಮೊದಲ ಹಂತ ವೈರಾಣು ಪ್ರವೇಶ. ಇತರ ವೈರಾಣುಗಳು ಕೇವಲ 2,3,4 ದಿನಗಳಲ್ಲಿ ರೋಗ ಗೋಚರಿಸುವಂತೆ ಮಾಡುತ್ತದೆ. ಅಲ್ಲದೆ symptoms ಕೂಡಾ ಗೋಚರಿಸುತ್ತದೆ. ತತಕ್ಷಣ ಔಷಧಿ ಚಿಕಿತ್ಸೆಯಿಂದ ಗುಣ ಮುಖವಾಗಲು ಸಾಧ್ಯತೆಗಳೂ ಇವೆಯಂತೆ. ಆದರೆ ಕೊರೋನ ಹಾಗಲ್ಲ. ಹದಿನಾಲ್ಕು ದಿನಗಳವರೆಗೆ ಯಾವುದೇ symptoms ಇಲ್ಲ. ನಂತರ ತತಕ್ಷಣ ರಾಕ್ಷಸ ರೂಪದಲ್ಲಿ ಪ್ರತ್ಯಕ್ಷ ಮತ್ತು ಆಹುತಿಯೇ. ಯಾವ ಔಷಧಿಯೂ ಬದುಕಿಸದು ಎಂದು ವೈದ್ಯಲೋಕ ಹೇಳುತ್ತದೆ.
ಈ ಮೊದಲು ಯಾರಲ್ಲಿ ವೈರಾಣು ಇದೆ ಎಂಬುದೂ ಪತ್ತೆ ಹಚ್ಚುವುದಕ್ಕಾಗಲ್ಲ. ಏನಾದರೂ symptoms ಇದ್ದರೆ ತಾನೆ ಪತ್ತೆಗೆ ಹೊರಡುವುದು. ಸಣ್ಣ ಜ್ವರ ಕಾಣಿಸಬಹುದಂತೆ. ಆಗ ಜನರು ಮಾಮೂಲಿ ಜ್ವರದ ಮಾತ್ರೆ ತೆಗೆದುಕೊಳ್ಳುತ್ತಾರೆ. ಕಡಿಮೆಯೂ ಆಗುತ್ತೆ. ವೈದ್ಯರ ಪರೀಕ್ಷಗೂ ಸಿಗಲಾರದು. ತಾಪ ಇಳಿದಿರುವ ಕಾರಣ ರೋಗ ಗೋಚರಿಸದು. ಆದರೆ ವೈರಾಣು ಮಾತ್ರ develop ಆಗುತ್ತನೇ ಇರುತ್ತದೆ. ಹದಿನಾಲ್ಕನೆಯ ದಿನ suddenly ಕಾಣುತ್ತದೆ ಮತ್ತು ರೋಗಿಯನ್ನು ಬಲಿ ಪಡೆಯುತ್ತದೆ.
ಇಂತಹ ತಜ್ಞ ವೈದ್ಯರ ಸಲಹೆಯಲ್ಲಿ ಪ್ರಧಾನಮಂತ್ರಿಯವರು ಈ ರೋಗ ನಿಯಂತ್ರಣಕ್ಕಾಗಿ ಸಂಪರ್ಕಗಳನ್ನು ಕಡಿತಗೊಳಿಸುವುದಕ್ಕಾಗಿ ನಿರ್ಬಂಧ (ಕೊರೋನ ಕರ್ಫ್ಯೂ) ತಂದರು. ಭಾರತದಲ್ಲಿ ಗೋಚರವಾಗಿ ಹದಿನೈದು ದಿನಗಳಾಯ್ತು. ಈಗ 2nd stageಗೆ ಬಂದಿದೆ. ಈಗ ಇದರ ನಿಯಂತ್ರಣ ಆಗದಿದ್ದರೆ 3nd stageಗೆ ಏನಾದರೂ ಕಾಲಿಟ್ಟರೆ ಮತ್ತೆ ಯಾವ ದೇವರ ಅನುಗ್ರಹವೂ ಫಲಿಸದು. ಆದರೆ ಮೋದಿಯವರ ಮೂಲಕ ನಮ್ಮ ದೇಶದಲ್ಲಿ ದೇವರು ಅನುಗ್ರಹ ರೂಪದಲ್ಲಿ ಈ ಕ್ರಮವನ್ನು ಕೈಗೊಳ್ಳಲು ಆದೇಶಿಸಿರಬೇಕು.
ಹೊರಗಿನಿಂದ ಬಂದಂತಹ ಇಸ್ಲಾಮಿಗರಲ್ಲಿ ಇದು ಕಾಣಿಸಿಕೊಂಡದ್ದು ಯಾಕೆಂದರೆ ಗೋಮಾಂಸ ಭಕ್ಷಣೆಯ ಫಲ. ಇದು ದೇಹದ ಧಾರಣಾ ಶಕ್ತಿಗೆ ಮಾರಕ. ಅಲ್ಲದೇ ಇಂತವರು ಮೊಂಡು ವಾದಕ್ಕಿಳಿಯುತ್ತಾರೆ. ನಮ್ಮ ಧರ್ಮ, ನಮ್ಮ ಧರ್ಮ ಎಂದು. ವೈದ್ಯಕೀಯ ಪರೀಕ್ಷೆಗೆ ಅಲ್ಲಾಹು ಹೇಳುವುದಿಲ್ಲ ಎಂಬ ಮೊಂಡುವಾದ. ಇದು ಕೆಲವು ಮೂರ್ಖ ಮನುಷ್ಯರ ವಾದವಲ್ಲದೆ. ಎಲ್ಲಾ ಮುಸ್ಲಿಮರು ಹೀಗೆ ಹೇಳಲ್ಲ. ಅದೇ ರೀತಿ ಹಿಂದುಗಳಲ್ಲೂ ಪರೀಕ್ಷೆ ಮಾಡಿಸಲು ಮುಜುಗರ ಮಾಡಿ ಗುಟ್ಟಾಗಿಡುತ್ತಾರೆ. ರೋಗ ಮತ್ತು ಭಯೋತ್ಪಾದನೆಗೆ ಧರ್ಮವಿಲ್ಲ. ಅದು ಎಲ್ಲರನ್ನೂ ಬಲಿತೆಗೆದುಕೊಳ್ಳಲೆಂದೇ ಇರುವುದು.
ಈ ಹಿಂದೆ ನಾನು ಅಶ್ವತ್ಥಾಮನ ನಾರಾಯಣಾಸ್ತ್ರದ ಪ್ರಯೋಗದ ವಿಚಾರವನ್ನು ಇದೇ ಕರೋನ ವ್ಯಾಧಿಗೆ ಬರೆದಿದ್ದೆ.
ಹಾಗಾಗಿ ಯಾವ ಸಿದ್ಧರಾಮನೂ ಹೇಳಲಿ. ನಮ್ಮ ನಮ್ಮ ರಕ್ಷಣೆ ನಮಗೆ. ಸಿದ್ದರಾಮನಂತವರು ಕಾರಲ್ಲೇ ಓಡಾಡುವವರು. ಜತೆಗೆ ತಜ್ಞ ವೈದ್ಯರೂ ಇರುತ್ತಾರೆ. ಅವರಿಗೆ ಭಯವಿಲ್ಲ. ಆದರೆ ಜನಸಾಮಾನ್ಯರು ಬಸ್ಸು, ರೈಲುಗಳಲ್ಲಿ ಓಡಾಡುವ ಮಂದಿ, ಪೇಟೆ ತಿರುಗುವ ಮಂದಿ ಮೋದಿಯವರು ತಿಳಿಸಿದ ನಿರ್ಬಂಧ ವಿಚಾರಕ್ಕೆ ಸ್ಪಂದಿಸಲೇಬೇಕು. ಇದು ಅವರವರ ವಿಚಾರ ಮಾತ್ರವಲ್ಲ. ಇಡೀ ದೇಶದ ಸ್ವಾಸ್ಥ್ಯದ ವಿಚಾರ. ಒಂದಲ್ಲ ಹತ್ತು ದಿನ ಬೇಕಾದರೂ ನಿರ್ಬಂಧಿಸಿದರೆ ನಾವು ತ್ಯಾಗ ಮಾಡಲೇಬೇಕು. ವ್ಯಾಪಾರ ವಹಿವಾಟು ಹಾಳಾಗುತ್ತದೆ ಎಂಬ ಕುಂಟು ನೆಪ ತೋರಿಸಿದಿರೋ ಇಡೀ ಜೀವನವೇ, ಇಡೀ ರಾಷ್ಟ್ರದ ಪ್ರಜೆಗಳ ಜೀವನವೇ ನರಕವಾದೀತು. ಇದೊಂದು ಎಚ್ಚರಿಕೆಯ ಲೇಖನ.
ಸಾವಿನ ಭಯವಲ್ಲ. ಸಾವಿಗೆ ಮುಂಚೆ ಇರುವ ವಿಚ್ಛೇಧನದ ಭಯ. ಮಕ್ಕಳು ತನ್ನ ತಂದೆಗೆ ಈ ರೋಗ ಬಂದಾಗ, ಅಪ್ಪ ಬಂದ್ರು. ಬಾಗಿಲೆಳೆದುಕೊಳ್ಳೀ, ಮಕ್ಕಳಿಗೆ ರೋಗ ತಗಲಿ ಮನೆಗೆ ಬಂದಾಗ, ಮಕ್ಕಳು ಬಂದ್ರೂ ಬಾಗಿಲೆಳೆದುಕೊಳ್ಳಿ ಎಂದು ಮಾತಾಪಿತೃಗಳು ಯಾವ ಹೃದಯದಿಂದ ಹೇಳಬೇಕು ಯೋಚಿಸಿ ಪ್ರಜೆಗಳೇ. ಹಾಗಾಗಿ ನಿರ್ಬಂಧ ಒಂದು ವಾರ ಆದರೂ ಆಡಳಿತಕ್ಕೆ ಸಹಕರಿಸಲು ತ್ಯಾಗ ಮಾಡೋಣ.
ಸರ್ವೇ ಜನಾಃ ಸುಖಿನೋ ಭವಂತು
Get in Touch With Us info@kalpa.news Whatsapp: 9481252093
Discussion about this post