ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ನವದೆಹಲಿ: ಒಂದು ದಿನದ ಊಟಕ್ಕೆ ಇಲ್ಲದವರು ಸೈನ್ಯ ಸೇರುತ್ತಾರೆ ಎಂದು ರಾಜ್ಯದ ಮಾಜಿ ಮುಖ್ಯಮಂತ್ರಿಯೊಬ್ಬರು ಭಾರತೀಯ ಸೈನಿಕರನ್ನು ಅವಮಾನ ಮಾಡಿದ್ದರು. ಅದರೆ, ಇಂದು ಅದೇ ಸೈನಿಕರು ದೇಶ ಸೇವೆಗಾಗಿ ಬರೋಬ್ಬರಿ 33 ಕೋಟಿ ರೂ.ಗಳ ದೇಣಿಗೆ ನೀಡಿದ್ದಾರೆ.
ಹೌದು.. ಪ್ರಪಂಚದೆಲ್ಲೆಡೆಯಂತೆ ಭಾರತದಲ್ಲೂ ಸಹ ಕೊರೋನಾ ವೈರಸ್ ವ್ಯಾಪಕವಾಗಿ 21 ದಿನಗಳ ಕಾಲ ಇಡಿಯ ದೇಶವನ್ನೇ ಲಾಕ್’ಡೌನ್ ಮಾಡಲಾಗಿದೆ. ಮಾರಕ ವೈರಸ್ ವಿರುದ್ಧ ಹೋರಾಡಲು ಲಕ್ಷ ಕೋಟಿ ಲೆಕ್ಕದಲ್ಲಿ ಹಣವನ್ನು ಕೇಂದ್ರ ಸರ್ಕಾರ ಮೀಸಲಿಟ್ಟಿದೆ. ಇಂತಹ ಸಂದರ್ಭದಲ್ಲಿ ದೇಶವನ್ನು ಕಾಯುವ ನಮ್ಮ ಸಿಆರ್’ಪಿಎಫ್ ಯೋಧರು ದೇಣಿಗೆ ನೀಡುವಲ್ಲಿಯೂ ಸಹ ದೇಶಪ್ರೇಮ ಮೆರೆದಿದ್ದಾರೆ.
ಕೊರೋನಾ ವೈರಸ್ ವಿರುದ್ಧ ಹೋರಾಟಕ್ಕಾಗಿ ಸಿಆರ್’ಪಿಎಫ್ ಯೋಧರು ಹಾಗೂ ಸಿಬ್ಬಂದಿಗಳು ತಮ್ಮ ಒಂದು ದಿನದ ವೇತನವನ್ನು ನೀಡಿದ್ದು, ಒಟ್ಟು ಬರೋಬ್ಬರಿ ಹತ್ತಿರ ಹತ್ತಿರ 34 ಕೋಟಿ ರೂ.ಗಳನ್ನು ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಗೆ ನೀಡಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಸಿಆರ್’ಪಿಎಫ್ ಡಿಜಿ ಎ.ಪಿ. ಮಹೇಶ್ವರಿ, 3 ಲಕ್ಷ ಯೋಧರನ್ನು ಹೊಂದಿರುವ ಸಿಆರ್’ಪಿಎಫ್ ದೇಶದಲ್ಲೇ ಅತಿ ದೊಡ್ಡ ಕೇಂದ್ರೀಯ ಪ್ಯಾರಾ ಮಿಲಿಟರಿ ಪಡೆಯಾಗಿದೆ. ಇವರೆಲ್ಲರ ಒಂದು ದಿನದ ವೇತನವನ್ನು ಕಡಿತಗೊಳಿಸಿ 33.81 ಕೋಟಿ ರೂ.ಗಳನ್ನು ದೇಶಕ್ಕಾಗಿ ನೀಡಲಾಗಿದೆ ಎಂದಿದ್ದಾರೆ.
ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಹಗಲಿರುಳು ಹೋರಾಡುತ್ತಿರುವ ಭಾರತೀಯ ಸೇನೆ ಹಾಗೂ ನಮ್ಮ ಸೈನಿಕರು ತಮ್ಮ ಒಂದು ದಿನ ವೇತನ ನೀಡುವ ಮೂಲಕವೂ ಸಹ ದೇಶಪ್ರೇಮ ಮೆರೆದಿದ್ದಾರೆ. ನಿಮ್ಮ ತ್ಯಾಗಕ್ಕೆ ನಮ್ಮದೊಂದು ಸಲಾಂ…
ಊಟಕ್ಕೆ ಗತಿಯಿಲ್ಲದವರು ಸೈನ್ಯಕ್ಕೆ ಸೇರುತ್ತಾರೆ ಎಂದು ದುರಹಂಕಾರದ ಮಾತನ್ನು ಕರ್ನಾಟಕದ ಮಾಜಿ ಮುಖ್ಯಮಂತ್ರಿಯೊಬ್ಬರು ಹಿಂದೆ ಹೇಳಿ, ರಾಜ್ಯ ಮಾತ್ರವಲ್ಲ ದೇಶದ ಜನರಿಂದ ಹೀನಾಮಾನ ಬೈಗುಳ ಕೇಳಿದ್ದರು. ಇಂತಹ ಮಹಾನುಭಾವರಾಗಲಿ ಅಥವಾ ಅವರ ಕುಟುಂಬಸ್ಥರಾಗಲಿ, ಅಥವಾ ಇವರೊಂದಿಗೆ ಅಕ್ರಮ ಮೈತ್ರಿ ಮಾಡಿಕೊಂಡಿದ್ದವರಾಗಲೀ ಈಕ್ಷಣದವರೆಗೂ ಕೊರೋನಾ ವಿರುದ್ಧದ ಹೋರಾಟಕ್ಕೆ ಕೊಟ್ಟಿದ್ದು ಮಾತ್ರ ಸೊನ್ನೆ…
Get in Touch With Us info@kalpa.news Whatsapp: 9481252093
Discussion about this post