No Result
View All Result
KRCS Shikaripura Achieves 100% Result in CBSE Class X Board Exams
English Articles

KRCS Shikaripura Achieves 100% Result in CBSE Class X Board Exams

by ಕಲ್ಪ ನ್ಯೂಸ್
April 16, 2026
0

Kalpa Media House  |  Shikaripura | Kumadvathi Residential Central School (KRCS), Shikaripura, has achieved a 100% pass result in the...

Read moreDetails
ಬೆಂಗಳೂರು–ಬಂಗಾರಪೇಟೆ ಮೆಮು ರೈಲುಗಳಿಗೆ ತಾತ್ಕಾಲಿಕ ನಿಲುಗಡೆ

Cancellation of Ashokapuram – KSR Bengaluru MEMU trains

April 16, 2026
First VALORANT Campus Cup Champions Crowned

First VALORANT Campus Cup Champions Crowned

April 15, 2026
Welfare Impossible Without Dharma; Upholding Righteousness is Everyone’s Duty: Yadugiri Yatiraja Swamiji

Welfare Impossible Without Dharma; Upholding Righteousness is Everyone’s Duty: Yadugiri Yatiraja Swamiji

April 13, 2026
Berger Paints Responds to India’s Heat Challenge with ‘Garmi Gone, Thandak On’ Home Cooling Solutions Range

Berger Paints Responds to India’s Heat Challenge with ‘Garmi Gone, Thandak On’ Home Cooling Solutions Range

April 13, 2026
  • Advertise With Us
  • Grievances
  • About Us
  • Contact Us
Wednesday, April 22, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಅಂಕಣ ಡಾ.ಗುರುರಾಜ ಪೋಶೆಟ್ಟಿಹಳ್ಳಿ

ದಶಾವತಾರ ಲೇಖನ ಸರಣಿ-1: ದಶವತಾರದೊಳಗಿನ ದ್ಯೋತಕವೇನು?

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
April 24, 2020
in ಡಾ.ಗುರುರಾಜ ಪೋಶೆಟ್ಟಿಹಳ್ಳಿ
0
ದಶಾವತಾರ ಲೇಖನ ಸರಣಿ-1: ದಶವತಾರದೊಳಗಿನ ದ್ಯೋತಕವೇನು?
Share on FacebookShare on TwitterShare on WhatsApp

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಹತ್ತು ಎಂಬುದು ಪೂರ್ಣದ್ಯೋತಕವಾಗಿದೆ. ಪೂರ್ಣಜ್ಞಾನ, ಪೂರ್ಣೈಶ್ವರ್ಯ, ಪೂರ್ಣಾನಂದ, ಪೂರ್ಣತೇಜ, ಪೂರ್ಣಶಕ್ತಿ, ಪೂರ್ಣಪ್ರಭ ಎಲ್ಲವೂ ಪರಮಾತ್ಮನಲ್ಲಿ ಮಾತ್ರ ಕಾಣಬಹುದು. ಸನಾತನನು ಅನಾದಿ ವೇದವೇದ್ಯನೆಂಬುದು ಭಾಗವತದ ವಚನವಾಗಿದೆ, ಸದಾ ವಂದ್ಯನಾಗಿರುವವನು, ವೇದಪ್ರತಿಪಾದ್ಯನು ಭಗವಂತ. ಅವನು ಪರಿಪೂರ್ಣ ಸರ್ವತ್ರ ವ್ಯಾಪ್ತನಿದ್ದಾನೆ.

ವಿಷ್ಣುವು ದಶಾವತಾರವೆತ್ತಿದ ಎಂಬ ಕತೆ ಇದೆ. ಹೀಗೆ ದಶಾವತಾರ ಎತ್ತಿದ್ದು ಧರ್ಮ ಸಂಸ್ಥಾಪನೆಗಾಗಿ ಎಂಬ ಗೀತೆಯ ಕಾವ್ಯಾತ್ಮಕ ವಿವರವೂ ಇದೆ. ಈ ದಶಾವತಾರಗಳು ಕತೆಗಾಗಿ ಹಲವರ ಗ್ರಹಿಕೆಗೆ ಬಂದರೂ ಸೂಕ್ಷ್ಮವಾಗಿ ಗಮನಿಸಿದರೆ ಇವು ಕತೆಗಳಷ್ಟೇ ಅಲ್ಲ ಎಂಬುದನ್ನು ಗಮನಿಸಬಹುದು. ಇದರ ಹಿಂದಿರಬಹುದಾದ ಸಂಕೇತಾರ್ಥಗಳನ್ನು ಇಲ್ಲಿ ಅವಲೋಕಿಸಲಾಗಿದೆ.

ದಶವತಾರದೊಳಗಿನ ತತ್ವಸಾರ
ಸನಾತನ ಧರ್ಮವು, ಮಾನವನ ಮೂಲ ಆಧಾರ ತತ್ವ. ಸನಾತನಧರ್ಮ ಹಾಗೂ ವೇದಗಳು ನಾಣ್ಯದ ಎರಡು ಮುಖಗಳಂತೆ. ಇವುಗಳು ಬದಲಾಗುತ್ತವೆಯೇ ಹೊರತು ಆದಿ ಅಂತ್ಯ ಇಲ್ಲದವುಗಳು. ಮಾನವನು ಅಧರ್ಮಕ್ಕೆ ಮೊರೆಹೋದಾಗ ಪರಮಾತ್ಮನು ಅವತರಿಸಿ ಅವುಗಳನ್ನು ಸರಿಪಡಿಸುತ್ತಾನೆ.

ಸನಾತನನು ಅನಾದಿ ವೇದವೇದ್ಯನೆಂಬುದು ಭಾಗವತದ ವಚನವಾಗಿದೆ, ಸದಾ ವಂದ್ಯನಾಗಿರುವವನು, ವೇದಪ್ರತಿಪಾದ್ಯನು ಭಗವಂತ. ಅವನು ಪರಿಪೂರ್ಣ ಸರ್ವತ್ರ ವ್ಯಾಪ್ತನಿದ್ದಾನೆ. ಜೀವನಾದರೂ ಪೂರ್ಣನೆಂದು ಕರೆಸಿಕೊಂಡರೂ ಜೀವನ ಪೂರ್ಣತ್ವವಾದರೂ ಅವನ ಯೋಗ್ಯತಾನುಸಾರವಾಗಿ ಮಾತ್ರ ಪೂರ್ಣ. ಆದ್ದರಿಂದ ಸನಾತನ ಧರ್ಮವು, ವೇದವು ಎರಡೂ ಒಂದರಿಂದ ಮತ್ತೊಂದು ಪ್ರತ್ಯೇಕವಾಗಿರುವುದಿಲ್ಲ ಮತ್ತು ಅಂತಹ ವೇದ ಸಂರಕ್ಷಿಸಲು ಸನಾತನ ಧರ್ಮವನ್ನು ಪುನರುಜ್ಜೀವನಗೊಳಿಸಲು ಪರಮಾತ್ಮನು ಮತ್ಸ್ಯಾವತಾರ ತಾಳಿ ವೇದವನ್ನು ಸಂರಕ್ಷಿಸುತ್ತಾನೆ.

ಹತ್ತು ಎಂಬುದು ಪೂರ್ಣದ್ಯೋತಕವಾಗಿದೆ. ಪೂರ್ಣಜ್ಞಾನ, ಪೂರ್ಣೈಶ್ವರ್ಯ, ಪೂರ್ಣಾನಂದ, ಪೂರ್ಣತೇಜ, ಪೂರ್ಣಶಕ್ತಿ, ಪೂರ್ಣಪ್ರಭ ಎಲ್ಲವೂ ಪರಮಾತ್ಮನಲ್ಲಿ ಮಾತ್ರ ಕಾಣಬಹುದು. ಇವುಗಳನ್ನು ಮಾನವರು ಅವರವರ ಯೋಗ್ಯತಾನುಸಾರ ಹೊಂದಬೇಕಾದಲ್ಲಿ ಏಕೈಕ ಮಾರ್ಗವೆಂದರೆ ನಾರಾಯಣ ಅಷ್ಟಾಕ್ಷರಮಂತ್ರ ಜಪ ಎಂದು ಆಗಿಂದ್ದಾಗೆ ನಮಗೆ ಜ್ಞಾಪಿಸುತ್ತಿದ್ದರು. ಓಂ ನಮೋ ನಾರಾಯಣಾಯ ಎಂಬ ಪದದಲ್ಲಿರುವ ಅಕ್ಷರಗಳನ್ನು ವಿಶ್ವ ತೈಜಸ, ಪ್ರಾಜ್ಞ, ತುರ್ಯ, ಆತ್ಮ, ಅಂತರಾತ್ಮ, ಪರಮಾತ್ಮ ಜ್ಞಾನಾತ್ಮ ಎಂದು ತಿಳಿಯಲಾಗಿದೆ. ಆ ಒಂದೊಂದು ನಾಮವನ್ನು ಸಂಖ್ಯಾಶಾಸ್ತ್ರದ ಪ್ರಕಾರ ವಿಶ್ಲೇಷಿಸಿದರೆ ಒಂದೊಂದು ನಾಮದ ಸಂಖ್ಯೆಯೂ 10 ರಿಂದ ಕೂಡಿರುತ್ತದೆ. ಇದರ ಮರ್ಮವೆಂದರೆ ಪರಮಾತ್ಮ ಸರ್ವದಾ ಪೂರ್ಣ, ಅವನ ಸಾಮೀಪ್ಯ ಸೇರಬೇಕಾದಲ್ಲಿ ನವವಿಧ ಭಕ್ತಿಯು ಬಹುಮುಖ್ಯ. ನವವಿಧ ಭಕ್ತಿಯಿಂದ ಪರಮಾತ್ಮನನ್ನು ಸ್ತುತಿಸಿದಲ್ಲಿ ಅವನ ಸಾಮೀಪ್ಯ ಸೇರಬಹುದು. ಅಂದರೆ ಪೂರ್ಣ ಎಂಬುದು ಸೊನ್ನೆ ಅದರ ಮುಂದೆ ಒಂದನ್ನು (1) ಸೇರಿಸಿದರೆ ಪರಿಪೂರ್ಣವಾಗುತ್ತದೆ. ಅಂದರೆ ಜೀವನು 0ಆದರೆ ಅವನ ಮುಂದೆ ಪರಮಾತ್ಮನು ಸಂಖ್ಯೆ 1ರಂತೆ ಬರಬೇಕು. ಈ 1ನ್ನು ಪಡೆಯಲು ಉಳಿದ 9 ಗುಣಗಳು ಬೇಕು ಅವೇ ನವವಿಧ ಭಕ್ತಿಗಳು ಆದ್ದರಿಂದ 10 ಇದ್ದರೆ ಮಾತ್ರ ಜೀವನು ಪರಿಪೂರ್ಣನಾಗುತ್ತಾನೆ.

ಹಿಂದೂ ತ್ರಿಮೂರ್ತಿಗಳಲ್ಲಿ ಎರಡನೆಯವನೇ ವಿಷ್ಣು ಅಥವಾ ಮಹಾವಿಷ್ಣು. ಕೇಂದ್ರಾಭಿಗಮನ ಶಕ್ತಿಯಾಗಿದ್ದು ಸತ್ವಗುಣದ ಪ್ರತೀಕವೂ ಆಗಿದ್ದಾನೆ. ಶಬ್ದ ನಿಷ್ಪತ್ತಿಯಿಂದ ವಿಷ್ಣು ಎಂಬುದಕ್ಕೆ ಅರ್ಥ ಎಲ್ಲವನ್ನೂ ವ್ಯಾಪಿಸಿಕೊಂಡವನು, ಎಲ್ಲದರಲ್ಲೂ ಅಂತರ್ಗತವಾಗಿರುವವನು ಎಂದು. ಹೀಗೆ ಜಗದ್ವ್ಯಾಪಿಯೂ ಜಗದಂತರ್ಗತವಾಗಿಯೂ ಇರುವ ಪರತತ್ವವೇ ವಿಷ್ಣು.

ವಿಷ್ಣುವಿನ ಕುರಿತ ಜನಪ್ರಿಯ ಚಿತ್ರಣ ಅವನು ಕ್ಷೀರಸಾಗರದ ಶೇಷಶಾಯಿಯಾಗಿ ಮಲಗಿರುತ್ತಾನೆ, ಅವನ ಕಾಲುಗಳನ್ನು ಲಕ್ಷ್ಮಿಯು ಒತ್ತುತ್ತಲಿದ್ದು, ನಾಭಿಯಿಂದ ಹುಟ್ಟಿರುವ ಕಮಲದಲ್ಲಿ ಬ್ರಹ್ಮನು ಕುಳಿತು ಸೃಷ್ಟಿಕಾರ್ಯವನ್ನು ನೆರವೇರಿಸುತ್ತಿರುತ್ತಾನೆ. ಇದು ಮೇಲ್ನೋಟಕ್ಕೆ ಕವಿಯ ಅತಿರಂಜಿತ ಕಲ್ಪನೆಯಂತೆ ಕಾಣುವ ಚಿತ್ರಣ. ಆದರೆ ಇದರ ಹಿಂದೆ ಅಪಾರ ಅರ್ಥಗಳಿವೆ ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಸಮುದ್ರ, ಜೀವರಾಶಿಯ ಜನನದ ಸಂಕೇತ, ಇದು ಹಾಲಿನ ಸಮುದ್ರ ಎಂಬುದು ಪರಿಶುದ್ಧತೆಯನ್ನು ಸಂಕೇತಿಸುತ್ತದೆ. ಇವನು ಮಲಗಿರುವ ಆದಿಶೇಷ ಲೋಕವನ್ನೆಲ್ಲ ಹೊತ್ತಿರುವವನು, ಇದು ಕಾಲವನ್ನು ಸಂಕೇತಿಸುತ್ತದೆ. ಲೋಕಗಳೆಲ್ಲವೂ ಕಾಲನಲ್ಲಿ ಜನಿಸಿ ಕಾಲನಲ್ಲಯೇ ಇರುತ್ತವೆ ಎಂಬ ಪರತತ್ವದ ಸಂಕೇತ ಇದು. ಸಾವಿರ ಹೆಡೆಗಳು ಆದಿಶೇಷನಿಗಿರುವುದು ಕಾಲ ಅಸಂಖ್ಯ ವಿಭಾಗಗಳ ಸಂಕೇತ. ಇದರ ಮೇಲೆ ಮಲಗಿರುವ ವಿಷ್ಣು ಸಹಜವಾಗಿಯೇ ಸೃಷ್ಟಿಯ ಚೇತನವನ್ನು ಪ್ರತಿನಿಧಿಸಿದ್ದಾನೆ, ಈ ಚೇತನ ಜೀವ ಅಥವಾ ಮಾನವನೇ ಆಗಬೇಕಿಲ್ಲ. ಅಸಂಖ್ಯಾತ ಆಕಾಶ ಗಂಗೆಯಲ್ಲಿ ತುಂಬಿ ಹೋಗಿರುವ ಬ್ರಹ್ಮಾಂಡವನ್ನು ಸೂಚಿಸುತ್ತಾನೆ, ಅವನ ನಾಭಿಯಲ್ಲಿ ಬ್ರಹ್ಮ ಯುಗಯುಗಗಳ ಸೃಷ್ಟಿ ಕಾರ್ಯವನ್ನು ಸಂಕೇತಿಸುತ್ತಾನೆ.

ಸರ್ಪವನ್ನು ಕಾಮದ, ಭೋಗದ ಸಂಕೇತವಾಗಿಯೂ ನೋಡಬಹುದು, ಇದು ಅಂತಿಮ ಮುಕ್ತಿ ಅಥವಾ ಮೋಕ್ಷವನ್ನು ಪಡೆಯುವವರೆಗೂ ಇದ್ದೇ ಇರುವಂತಹದು, ಅತೀಂದ್ರಿಯ ನೆಲೆಯಲ್ಲಿ ವಿಶ್ರಾಂತಿಯ ಬಳಿಕ ಮುಂದಿನ ಸೃಷ್ಟಿರಚನೆಗಾಗಿ ಭಗವಂತನಲ್ಲಿಯೇ ಉಳಿಯುವ ಬಯಕೆಯ ಪ್ರತೀಕವೂ ಇದಾಗಿರಬಹುದು. ವಿಷ್ಣುವಿನ ಕಾಲನ್ನು ಒತ್ತುತ್ತಿರುವ ಲಕ್ಷ್ಮೀ ಕೀರ್ತಿ, ಐಶ್ವರ್ಯ ಇತ್ಯಾದಿ ಲೌಕಿಕ ಸುಖಗಳ ಸಂಕೇತ, ಇದು ಚೇತನದ ಅಡಿಯಾಳಾಗಿದ್ದರೇ ಸರ್ವಜೀವ ವ್ಯಾಪಾರವೂ ಸುಗಮ ಎಂಬ ಅಂತರಾರ್ಥ ಇದರಲ್ಲಿದೆ.

(ನಾಳೆ: ದಶಾವತಾರಗಳ ಹಿಂದಿನ ಅಂತರಾರ್ಥ)


Get in Touch With Us info@kalpa.news Whatsapp: 9481252093

Tags: DashavataraDr Gururaj PoshettihalliKannadaNewsWebsiteLatestNewsKannadaಡಾ.ಗುರುರಾಜ ಪೋಶೆಟ್ಟಿಹಳ್ಳಿತ್ರಿಮೂರ್ತಿದಶಾವತಾರಸನಾತನ ಧರ್ಮಹಿಂದೂ
Share209Tweet123Send
Previous Post

ಕೊರೋನಾ ವೈರಸ್ ಮೊದಲ ಪರೀಕ್ಷೆ ಯುಪಿ ಖಾಸಗಿ ಲ್ಯಾಬ್’ನಲ್ಲಿ ನಡೆಯಲಿದೆ: ವೆಚ್ಚ ಎಷ್ಟು ಗೊತ್ತಾ?

Next Post

ಸಚಿವ ಬಿ.ಸಿ. ಪಾಟೀಲ್ ದಿಟ್ಟ ಕ್ರಮಕ್ಕೆ ಬೆಚ್ಚಬಿದ್ದ ಅಕ್ರಮ ದಾಸ್ತಾನುಗಾರರು: 6 ಕೋಟಿ ರೂ. ಮೌಲ್ಯದ ಬಿಡಿ ಬೀಜ ವಶ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಸಚಿವ ಬಿ.ಸಿ. ಪಾಟೀಲ್ ದಿಟ್ಟ ಕ್ರಮಕ್ಕೆ ಬೆಚ್ಚಬಿದ್ದ ಅಕ್ರಮ ದಾಸ್ತಾನುಗಾರರು: 6 ಕೋಟಿ ರೂ. ಮೌಲ್ಯದ ಬಿಡಿ ಬೀಜ ವಶ

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

March 12, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ರಾಜಕೀಯ ಸ್ವಾರ್ಥಕ್ಕಾಗಿ ಮಹಿಳಾ ಮೀಸಲಾತಿ ಮಸೂದೆ ಮಂಡನೆ: ಚರ್ಚೆಗೆ ಕಿಮ್ಮನೆ ರತ್ನಾಕರ್ ಪಂಥಾಹ್ವಾನ

ರಾಜಕೀಯ ಸ್ವಾರ್ಥಕ್ಕಾಗಿ ಮಹಿಳಾ ಮೀಸಲಾತಿ ಮಸೂದೆ ಮಂಡನೆ: ಚರ್ಚೆಗೆ ಕಿಮ್ಮನೆ ರತ್ನಾಕರ್ ಪಂಥಾಹ್ವಾನ

April 21, 2026
ಮಹಿಳಾ ಮೀಸಲಾತಿ ಮಸೂದೆಗೆ ವಿರೋಧ ಖಂಡಿಸಿ ಜೆಡಿಎಸ್ ಬೃಹತ್ ಪ್ರತಿಭಟನೆ

ಮಹಿಳಾ ಮೀಸಲಾತಿ ಮಸೂದೆಗೆ ವಿರೋಧ ಖಂಡಿಸಿ ಜೆಡಿಎಸ್ ಬೃಹತ್ ಪ್ರತಿಭಟನೆ

April 21, 2026
ಪಾರ್ವತಮ್ಮ ಬಡಾವಣೆಗೆ ಶಾಸಕ ಚನ್ನಬಸಪ್ಪ ಭೇಟಿ | ಯುಜಿಡಿ, ರಸ್ತೆ ಸಮಸ್ಯೆ ಪರಿಹಾರಕ್ಕೆ ಸೂಚನೆ

ಪಾರ್ವತಮ್ಮ ಬಡಾವಣೆಗೆ ಶಾಸಕ ಚನ್ನಬಸಪ್ಪ ಭೇಟಿ | ಯುಜಿಡಿ, ರಸ್ತೆ ಸಮಸ್ಯೆ ಪರಿಹಾರಕ್ಕೆ ಸೂಚನೆ

April 21, 2026
ಇಂಡಿಯನ್ ರೇಸಿಂಗ್ ಲೀಗ್’ನಲ್ಲಿ ಮೂರನೇ ಸ್ಥಾನ ಪಡೆದ ಕಿಚ್ಚ ಸುದೀಪ್ ತಂಡ!

ಇಂಡಿಯನ್ ರೇಸಿಂಗ್ ಲೀಗ್’ನಲ್ಲಿ ಮೂರನೇ ಸ್ಥಾನ ಪಡೆದ ಕಿಚ್ಚ ಸುದೀಪ್ ತಂಡ!

April 21, 2026
ಭಾರತೀಯ ಸನಾತನ ಧರ್ಮವನ್ನು ರಕ್ಷಿಸಿದವರು ಆದಿ ಶಂಕರಾಚಾರ್ಯರು: ಸುರೇಶ್ ಋಗ್ವೇದಿ

ಭಾರತೀಯ ಸನಾತನ ಧರ್ಮವನ್ನು ರಕ್ಷಿಸಿದವರು ಆದಿ ಶಂಕರಾಚಾರ್ಯರು: ಸುರೇಶ್ ಋಗ್ವೇದಿ

April 21, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL