Saturday, May 31, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home Small Bytes

ದಶಾವತಾರ ಲೇಖನ ಸರಣಿ-5: ರಾಮಾವತಾರ, ಕೃಷ್ಣಾವತಾರ

April 30, 2020
in Small Bytes, ಡಾ.ಗುರುರಾಜ ಪೋಶೆಟ್ಟಿಹಳ್ಳಿ
0 0
0
Share on facebookShare on TwitterWhatsapp
Read - < 1 minute

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ರಾಮಾವತಾರ
ರಾಮಾಯಣದ ಕಥೆಯನ್ನು ತಾತ್ತ್ವಿಕ ದೃಷ್ಟಿಯಿಂದ ದರ್ಶಿಸಬೇಕು. ನಮ್ಮ ಹೃದಯ ಸಿಂಹಾಸನದಲ್ಲಿ ವಿರಾಜಮಾನನಾಗಿರುವವನೇ ಶ್ರೀರಾಮ. ಹತ್ತು ಇಂದ್ರಿಯಗಳನ್ನು ಹೊಂದಿರುವ ಈ ಶರೀರವೇ ಒಂದು ರಥ, ದಶರಥ. ಸತ್ತ್ವ, ರಜ ಮತ್ತು ತಮವೆಂಬ ಮೂರು ಗುಣಗಳೇ ಕ್ರಮವಾಗಿ ಕೌಸಲ್ಯೆ, ಸುಮಿತ್ರೆ ಹಾಗೂ ಕೈಕೇಯಿ ಅಥವಾ ವಿಭೀಷಣ, ರಾವಣ ಹಾಗೂ ಕುಂಭಕರ್ಣ. ಯಾವುದೇ ಯುದ್ಧಕ್ಕೆ ವಿರುದ್ಧವಾದದ್ದೇ ಉತ್ತರದಲ್ಲಿರುವ ಮತ್ತು ಎತ್ತರದಲ್ಲಿರುವ ಅಯೋಧ್ಯೆ. ಅಧೋಮುಖದಲ್ಲಿರುವುದೇ ಲಂಕೆ. ಸೀತೆಯೇ ಪ್ರಕೃತಿಮಾತೆ. ನಮ್ಮಲ್ಲಿ ಅಂತರ್ಗತವಾಗಿರುವ ರಾವಣತ್ವದಿಂದಾಗಿ ಪ್ರಕೃತಿ ಮಾತೆಯು ಅಪಹರಿಸಲ್ಪಟ್ಟಾಗ, ಅಧೋಮುಖವಾದ ಪ್ರಕೃತಿಯನ್ನು ಊರ್ಧ್ವಮುಖಕ್ಕೆ ಗಮನಿಸಿ ಮೇಲಕ್ಕೆ ತರುವುದೇ ರಾಮಾಯಣ ಕಥಾನಕ, ಸಾಧನಾ ಮಾರ್ಗ.

ಮೂಲಾಧಾರಾದಿ ಷಟ್ಚಕ್ರಗಳೇ ಆರು ಕಾಂಡಗಳು. ಏಳನೇ ಉತ್ತರಕಾಂಡವು ಸಹಸ್ರಾರವನ್ನು ಪ್ರತಿನಿಧಿಸುತ್ತದೆ. ಅದಕ್ಕೆ ಪ್ರಾಣಶಕ್ತಿಯೆಂಬ ಹನುಮಂತನನ್ನು ನೇಮಿಸಿ(ನಿಯಮಿಸಿ), ಸಂಸಾರ ಸಾಗರವನ್ನು ಉಲ್ಲಂಘನ ಮಾಡಿ (ಉತ್+ಲಂಘನ) ಮೊದಲೆರಡು ಗುಣಗಳನ್ನು ಸಂಹರಿಸಿ, ಮೂರನೇ ಸತ್ತ್ವಗುಣದ ವಿಭೀಷಣನ ಸಹಕಾರದಿಂದ, ಪ್ರಕೃತಿಯನ್ನು ಮೇಲಕ್ಕೆ ತರಬೇಕೆಂಬುದು ಸಾರಾಂಶ. ಜಾಂಬವಂತರೇ ಅಪಾನವಾಯು. ಅಂಗದನೇ ಅಂಗ-ಅಂಗಗಳನ್ನು ವ್ಯಾಪಿಸಿರುವ ವ್ಯಾನವಾಯು. ನೀಲನೆಂದರೆ ಉದಾವನವಾಯು. ನಳನೇ ಸಮಾನವಾಯು. ಸಕಲ ಸದ್ಗುಣ ಸಂಪನ್ನರಾಗಿ ಹೃದಯ ಸಿಂಹಾಸನದಲ್ಲಿ ವಿರಾಜಮಾನರಾಗುವುದೇ ಶ್ರೀರಾಮ ಸಾಮ್ರಾಜ್ಯ ಪಟ್ಟಾಭಿಷೇಕ.

ಶ್ರೀರಾಮನು ಆದರ್ಶ ಮರ್ಯಾದಾ ಪುರುಷೋತ್ತಮ, ಅವರ ಚರಿತೆಯಾದ ರಾಮಾಯಣ ಮಹಾಕಾವ್ಯವಾಗಿದೆ. ಇವನು ಜೀವನದ ಎಲ್ಲಾ ರಂಗದಲ್ಲೂ ಆದರ್ಶವನ್ನೇ ಮೆರೆದನು. ಇದು ಒಂದು ಯುಗ ಧರ್ಮದ ಸಂಕೇತವೂ ಹೌದು. ತಾವು ನಂಬಿದ ತತ್ವಗಳಿಗಾಗಿ ತ್ಯಾಗಮಾಡಬಲ್ಲ ಒಂದು ಜನಾಂಗದ ಮೌಲ್ಯವನ್ನು ಈ ಅವತಾರ ಪ್ರತಿನಿಧಿಸುತ್ತದೆ. ಚಾರಿತ್ರಿಕ ದೃಷ್ಟಿಯಿಂದ, ಇದು ಕ್ಷತ್ರಿಯ ಪಾರಮ್ಯವನ್ನು ಹೇಳುತ್ತದೆ. ರಾಮಾಯಣ ಒಂದು ಅರ್ಥದಲ್ಲಿ ಒಂದು ಕಾಲದ ರಾಜಕೀಯ ಚರಿತ್ರೆ ಕೂಡ ಹೌದು.

ಕೃಷ್ಣಾವತಾರ
ಶ್ರೀಕೃಷ್ಣನು ಭಗವಂತನ ಎಂಟನೇ ಅವತಾರ. ಇದು ಎಂಟು ವಸುಗಳ (ಸಂಪತ್ತು), ಎಂಟು ಸಿದ್ಧಿಗಳ, ಎಂಟು ಲಕ್ಷ್ಮೀ ಸ್ವರೂಪದ ಹಾಗೂ ಎಂಟು ಪ್ರಕೃತಿಯ ರೂಪದ ಸಂಕೇತ. ಆದ್ದರಿಂದಲೇ, ಅಷ್ಟಮಿಯಂದು ಅವತರಿಸಿದ್ದು. ಕೃಷ್ಣ ಎಂದರೆ ಕಪ್ಪು ದಕ್ಷಿಣಾಯನವೂ ಕಪ್ಪು. ಶ್ರಾವಣ ಮಾಸದ ಬಹುಳವೂ ಕಪ್ಪು.

ರಾತ್ರಿಯೂ ಕಪ್ಪು. ಕಾರಾಗೃಹದ ವಾತಾವರಣವೂ ಕಪ್ಪು. ಮಳೆಯ ಕಾಲ ಬೇರೆ! ಕಾರಿರುಳು. ಮೋಡದಿಂದ ಆಕಾಶವೂ ಕಪ್ಪು. ಅಂಥಾ ಮಧ್ಯರಾತ್ರಿಯಲ್ಲಿ ಪರಂಜ್ಯೋತಿಸ್ವರೂಪನಾದ ಪರಮಾತ್ಮನ ಅವತಾರ! ಹಾಗೆಯೇ ಈ ಜಗತ್ತೇ ಮಾಯೆಯಿಂದ ಅಂಧಕಾರಮಯವಾಗಿದೆ. ಮೇಲಾಗಿ, ಅಹಂಕಾರವೆಂಬ ಅಂಧಕಾರ ಬೇರೆ! ಅಜ್ಞಾನವೆಂಬ ತಿಮಿರವೂ ಸೇರಿದೆ. ಸೂರ್ಯನ ಬೆಳಕೇ ನಮಗೆ ಆತ್ಮಜ್ಞಾನಕ್ಕೆ ಮರೆಯಾಗಿದೆ! ಇಂಥಾ ಸಂಸಾರ ಸಾಗರದಲ್ಲಿರುವ ನಾವು ಕತ್ತಲೆಯಲ್ಲಿ ಕಾಡಿನಲ್ಲಿದ್ದಂತಾಗಿದೆ. ವಿಷಯಾಸಕ್ತಿಗಳಿಂದ ಕೂಡಿದ ಕುಂಡಲಿನೀ ಕಾಳಸರ್ಪವನ್ನು ಮರ್ದನ ಮಾಡುವ ಶ್ರೀಕೃಷ್ಣ ಅಹಂಕಾರವನ್ನು ತುಳಿಯುತ್ತಾನೆ. ಆತ್ಮ ಸಾಕ್ಷಾತ್ಕಾರವೆಂಬ ವಿಷ್ಣುಪದವನ್ನು ಹೊಂದುವಂತೆ ಮಾಡುತ್ತಾನೆ.

ರಾಮನು ಆದರ್ಶ ಪರನಾದರೆ, ಕೃಷ್ಣ ತಂತ್ರಗಾರ, ರಾಜಕೀಯ, ಚಾಣಾಕ್ಷ. ಜನರಲ್ಲಿ ಬೇರು ಬಿಟ್ಟಿದ್ದ ಮೌಲ್ಯಗಳು, ಆದರ್ಶಗಳು ಮಾಯವಾಗಿ ಕುಟಿಲತೆ ಬೆಳೆಯಲು ಆರಂಭವಾಗಿದ್ದ ದಿನಗಳಲ್ಲಿ ಚಾಣಾಕ್ಷತೆಯಿಂದ ಸತ್ಯ ಮಾರ್ಗವನ್ನು ಎತ್ತಿ ಹಿಡಿಯುವ ಆದರ್ಶದ ಕತೆಯಾಗಿ ಕೃಷ್ಣ ಚರಿತೆ ಕಾಣಿಸುತ್ತದೆ. ಕೃಷ್ಣ ಗೊಲ್ಲ. ಅವನು ಕ್ಷತ್ರಿಯನಲ್ಲ. ಆದರೂ ವಿಪ್ರ, ಕ್ಷತ್ರಿಯರಿಗೆಲ್ಲ ಪೂಜನೀಯನಾಗಿದ್ದನು. ಇದು ಆ ಕಾಲದ ವರ್ಣಸಂಕರವನ್ನೂ ಪ್ರತಿನಿಧಿಸುತ್ತದೆ. ಕೃಷ್ಣನ ಸಾರಥ್ಯದಲ್ಲಿ ನಡೆದ ಮಹಾಭಾರತದ ಕತೆ ಒಂದು ಪರಿವರ್ತನೆಯ ಸೂಚಕವೂ ಹೌದು.

Get in Touch With Us info@kalpa.news Whatsapp: 9481252093

Tags: DashavataraDr Gururaj PoshettihalliKannadaNewsWebsiteKrishnavataraRamavataraಕೃಷ್ಣಾವತಾರಡಾ.ಗುರುರಾಜ ಪೋಶೆಟ್ಟಿಹಳ್ಳಿರಾಮಾವತಾರ
Previous Post

ಮಾಸ್ಕ್‌ ಇಲ್ಲದೇ ಓಡಾಡಿ, ಸಾರ್ವಜನಿಕ ಸ್ಥಳದಲ್ಲಿ ಉಗಿದದ್ದಕ್ಕೆ ಬಿತ್ತು ಫೈನ್! ಪಾಲಿಕೆಯಿಂದ ಕಠಿಣ ಕ್ರಮ

Next Post

ದಾವಣಗೆರೆಯಲ್ಲಿ ಮತ್ತೊಂದು ಕೊರೋನಾ ಸೋಂಕು ಪ್ರಕರಣ ದೃಢ: ಜಿಲ್ಲೆಯಲ್ಲಿ ಆತಂಕ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ದಾವಣಗೆರೆಯಲ್ಲಿ ಮತ್ತೊಂದು ಕೊರೋನಾ ಸೋಂಕು ಪ್ರಕರಣ ದೃಢ: ಜಿಲ್ಲೆಯಲ್ಲಿ ಆತಂಕ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಅಶೋಕಪುರಂ ರೈಲ್ವೆ ಕಾರ್ಯಾಗಾರ ಪರಿಶೀಲಿಸಿದ ನೈಋತ್ಯ ರೈಲ್ವೆ ಎಂಡಿ ಮುಕುಲ್ | ಟ್ರೈನ್ ಬಸ್’ಗೆ ಚಾಲನೆ

May 31, 2025

ಹೈದರಾಬಾದ್ – ಬೀದರ್ ನಡುವೆ ವಂದೇ ಭಾರತ್ ಆರಂಭಿಸಿ: ಕೇಂದ್ರ ಸಚಿವರಿಗೆ ಬಂಡೆಪ್ಪ ಖಾಶೆಂಪುರ ಮನವಿ

May 31, 2025
File Image

ಕೆ.ಎಸ್. ಈಶ್ವರಪ್ಪನವರ ಹುಟ್ಟುಹಬ್ಬ ಹಿನ್ನೆಲೆ: ಜೂ.1ರಂದು ವಿಶೇಷ ಕಾರ್ಯಕ್ರಮ

May 31, 2025

ಜೂನ್ 1ರಿಂದ 4 | ಮೈಸೂರು-ತಾಳಗುಪ್ಪ ಇಂಟರ್’ಸಿಟಿ ಸೇರಿ ಹಲವು ರೈಲುಗಳ ಬಗ್ಗೆ ಮಹತ್ವದ ಪ್ರಕಟಣೆ

May 31, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಅಶೋಕಪುರಂ ರೈಲ್ವೆ ಕಾರ್ಯಾಗಾರ ಪರಿಶೀಲಿಸಿದ ನೈಋತ್ಯ ರೈಲ್ವೆ ಎಂಡಿ ಮುಕುಲ್ | ಟ್ರೈನ್ ಬಸ್’ಗೆ ಚಾಲನೆ

May 31, 2025

ಹೈದರಾಬಾದ್ – ಬೀದರ್ ನಡುವೆ ವಂದೇ ಭಾರತ್ ಆರಂಭಿಸಿ: ಕೇಂದ್ರ ಸಚಿವರಿಗೆ ಬಂಡೆಪ್ಪ ಖಾಶೆಂಪುರ ಮನವಿ

May 31, 2025
File Image

ಕೆ.ಎಸ್. ಈಶ್ವರಪ್ಪನವರ ಹುಟ್ಟುಹಬ್ಬ ಹಿನ್ನೆಲೆ: ಜೂ.1ರಂದು ವಿಶೇಷ ಕಾರ್ಯಕ್ರಮ

May 31, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!