No Result
View All Result
11-Year-Old Mysuru Girl Writes Children's Ramayana in Just 15 Days
English Articles

11-Year-Old Mysuru Girl Writes Children’s Ramayana in Just 15 Days

by kalpa News
July 27, 2026
1

Kalpa Media House  |  Mysuru  | In a remarkable literary achievement, an 11-year-old girl from Mysuru has written a 36-page...

Read moreDetails
Kotak | creating fresh opportunities for SMEs

Growth Is No Longer Just a Bengaluru Story: Kotak

July 24, 2026
Prayagraj - Yesvantpur Special Weekly Express Trains

Special Weekly Express Trains Between Prayagraj and Yesvantpur Announced

July 23, 2026
Nestlé India Reports Strong Q1 Growth

Nestlé India Reports Strong Q1 Growth; Sales Up 25.4%, Profit Jumps 47.9%

July 23, 2026
Thums Up Brings Back ThunderWheels Campaign

Thums Up Brings Back ThunderWheels Campaign

July 23, 2026
  • Advertise With Us
  • Grievances
  • About Us
  • Contact Us
Wednesday, July 29, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Small Bytes

ದಶಾವತಾರ ಲೇಖನ ಸರಣಿ-5: ರಾಮಾವತಾರ, ಕೃಷ್ಣಾವತಾರ

kalpa News by kalpa News
April 30, 2020
in Small Bytes, ಡಾ.ಗುರುರಾಜ ಪೋಶೆಟ್ಟಿಹಳ್ಳಿ
0
ದಶಾವತಾರ ಲೇಖನ ಸರಣಿ-5: ರಾಮಾವತಾರ, ಕೃಷ್ಣಾವತಾರ
Share on FacebookShare on TwitterShare on WhatsApp

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ರಾಮಾವತಾರ
ರಾಮಾಯಣದ ಕಥೆಯನ್ನು ತಾತ್ತ್ವಿಕ ದೃಷ್ಟಿಯಿಂದ ದರ್ಶಿಸಬೇಕು. ನಮ್ಮ ಹೃದಯ ಸಿಂಹಾಸನದಲ್ಲಿ ವಿರಾಜಮಾನನಾಗಿರುವವನೇ ಶ್ರೀರಾಮ. ಹತ್ತು ಇಂದ್ರಿಯಗಳನ್ನು ಹೊಂದಿರುವ ಈ ಶರೀರವೇ ಒಂದು ರಥ, ದಶರಥ. ಸತ್ತ್ವ, ರಜ ಮತ್ತು ತಮವೆಂಬ ಮೂರು ಗುಣಗಳೇ ಕ್ರಮವಾಗಿ ಕೌಸಲ್ಯೆ, ಸುಮಿತ್ರೆ ಹಾಗೂ ಕೈಕೇಯಿ ಅಥವಾ ವಿಭೀಷಣ, ರಾವಣ ಹಾಗೂ ಕುಂಭಕರ್ಣ. ಯಾವುದೇ ಯುದ್ಧಕ್ಕೆ ವಿರುದ್ಧವಾದದ್ದೇ ಉತ್ತರದಲ್ಲಿರುವ ಮತ್ತು ಎತ್ತರದಲ್ಲಿರುವ ಅಯೋಧ್ಯೆ. ಅಧೋಮುಖದಲ್ಲಿರುವುದೇ ಲಂಕೆ. ಸೀತೆಯೇ ಪ್ರಕೃತಿಮಾತೆ. ನಮ್ಮಲ್ಲಿ ಅಂತರ್ಗತವಾಗಿರುವ ರಾವಣತ್ವದಿಂದಾಗಿ ಪ್ರಕೃತಿ ಮಾತೆಯು ಅಪಹರಿಸಲ್ಪಟ್ಟಾಗ, ಅಧೋಮುಖವಾದ ಪ್ರಕೃತಿಯನ್ನು ಊರ್ಧ್ವಮುಖಕ್ಕೆ ಗಮನಿಸಿ ಮೇಲಕ್ಕೆ ತರುವುದೇ ರಾಮಾಯಣ ಕಥಾನಕ, ಸಾಧನಾ ಮಾರ್ಗ.

ಮೂಲಾಧಾರಾದಿ ಷಟ್ಚಕ್ರಗಳೇ ಆರು ಕಾಂಡಗಳು. ಏಳನೇ ಉತ್ತರಕಾಂಡವು ಸಹಸ್ರಾರವನ್ನು ಪ್ರತಿನಿಧಿಸುತ್ತದೆ. ಅದಕ್ಕೆ ಪ್ರಾಣಶಕ್ತಿಯೆಂಬ ಹನುಮಂತನನ್ನು ನೇಮಿಸಿ(ನಿಯಮಿಸಿ), ಸಂಸಾರ ಸಾಗರವನ್ನು ಉಲ್ಲಂಘನ ಮಾಡಿ (ಉತ್+ಲಂಘನ) ಮೊದಲೆರಡು ಗುಣಗಳನ್ನು ಸಂಹರಿಸಿ, ಮೂರನೇ ಸತ್ತ್ವಗುಣದ ವಿಭೀಷಣನ ಸಹಕಾರದಿಂದ, ಪ್ರಕೃತಿಯನ್ನು ಮೇಲಕ್ಕೆ ತರಬೇಕೆಂಬುದು ಸಾರಾಂಶ. ಜಾಂಬವಂತರೇ ಅಪಾನವಾಯು. ಅಂಗದನೇ ಅಂಗ-ಅಂಗಗಳನ್ನು ವ್ಯಾಪಿಸಿರುವ ವ್ಯಾನವಾಯು. ನೀಲನೆಂದರೆ ಉದಾವನವಾಯು. ನಳನೇ ಸಮಾನವಾಯು. ಸಕಲ ಸದ್ಗುಣ ಸಂಪನ್ನರಾಗಿ ಹೃದಯ ಸಿಂಹಾಸನದಲ್ಲಿ ವಿರಾಜಮಾನರಾಗುವುದೇ ಶ್ರೀರಾಮ ಸಾಮ್ರಾಜ್ಯ ಪಟ್ಟಾಭಿಷೇಕ.

ಶ್ರೀರಾಮನು ಆದರ್ಶ ಮರ್ಯಾದಾ ಪುರುಷೋತ್ತಮ, ಅವರ ಚರಿತೆಯಾದ ರಾಮಾಯಣ ಮಹಾಕಾವ್ಯವಾಗಿದೆ. ಇವನು ಜೀವನದ ಎಲ್ಲಾ ರಂಗದಲ್ಲೂ ಆದರ್ಶವನ್ನೇ ಮೆರೆದನು. ಇದು ಒಂದು ಯುಗ ಧರ್ಮದ ಸಂಕೇತವೂ ಹೌದು. ತಾವು ನಂಬಿದ ತತ್ವಗಳಿಗಾಗಿ ತ್ಯಾಗಮಾಡಬಲ್ಲ ಒಂದು ಜನಾಂಗದ ಮೌಲ್ಯವನ್ನು ಈ ಅವತಾರ ಪ್ರತಿನಿಧಿಸುತ್ತದೆ. ಚಾರಿತ್ರಿಕ ದೃಷ್ಟಿಯಿಂದ, ಇದು ಕ್ಷತ್ರಿಯ ಪಾರಮ್ಯವನ್ನು ಹೇಳುತ್ತದೆ. ರಾಮಾಯಣ ಒಂದು ಅರ್ಥದಲ್ಲಿ ಒಂದು ಕಾಲದ ರಾಜಕೀಯ ಚರಿತ್ರೆ ಕೂಡ ಹೌದು.

ಕೃಷ್ಣಾವತಾರ
ಶ್ರೀಕೃಷ್ಣನು ಭಗವಂತನ ಎಂಟನೇ ಅವತಾರ. ಇದು ಎಂಟು ವಸುಗಳ (ಸಂಪತ್ತು), ಎಂಟು ಸಿದ್ಧಿಗಳ, ಎಂಟು ಲಕ್ಷ್ಮೀ ಸ್ವರೂಪದ ಹಾಗೂ ಎಂಟು ಪ್ರಕೃತಿಯ ರೂಪದ ಸಂಕೇತ. ಆದ್ದರಿಂದಲೇ, ಅಷ್ಟಮಿಯಂದು ಅವತರಿಸಿದ್ದು. ಕೃಷ್ಣ ಎಂದರೆ ಕಪ್ಪು ದಕ್ಷಿಣಾಯನವೂ ಕಪ್ಪು. ಶ್ರಾವಣ ಮಾಸದ ಬಹುಳವೂ ಕಪ್ಪು.

ರಾತ್ರಿಯೂ ಕಪ್ಪು. ಕಾರಾಗೃಹದ ವಾತಾವರಣವೂ ಕಪ್ಪು. ಮಳೆಯ ಕಾಲ ಬೇರೆ! ಕಾರಿರುಳು. ಮೋಡದಿಂದ ಆಕಾಶವೂ ಕಪ್ಪು. ಅಂಥಾ ಮಧ್ಯರಾತ್ರಿಯಲ್ಲಿ ಪರಂಜ್ಯೋತಿಸ್ವರೂಪನಾದ ಪರಮಾತ್ಮನ ಅವತಾರ! ಹಾಗೆಯೇ ಈ ಜಗತ್ತೇ ಮಾಯೆಯಿಂದ ಅಂಧಕಾರಮಯವಾಗಿದೆ. ಮೇಲಾಗಿ, ಅಹಂಕಾರವೆಂಬ ಅಂಧಕಾರ ಬೇರೆ! ಅಜ್ಞಾನವೆಂಬ ತಿಮಿರವೂ ಸೇರಿದೆ. ಸೂರ್ಯನ ಬೆಳಕೇ ನಮಗೆ ಆತ್ಮಜ್ಞಾನಕ್ಕೆ ಮರೆಯಾಗಿದೆ! ಇಂಥಾ ಸಂಸಾರ ಸಾಗರದಲ್ಲಿರುವ ನಾವು ಕತ್ತಲೆಯಲ್ಲಿ ಕಾಡಿನಲ್ಲಿದ್ದಂತಾಗಿದೆ. ವಿಷಯಾಸಕ್ತಿಗಳಿಂದ ಕೂಡಿದ ಕುಂಡಲಿನೀ ಕಾಳಸರ್ಪವನ್ನು ಮರ್ದನ ಮಾಡುವ ಶ್ರೀಕೃಷ್ಣ ಅಹಂಕಾರವನ್ನು ತುಳಿಯುತ್ತಾನೆ. ಆತ್ಮ ಸಾಕ್ಷಾತ್ಕಾರವೆಂಬ ವಿಷ್ಣುಪದವನ್ನು ಹೊಂದುವಂತೆ ಮಾಡುತ್ತಾನೆ.

ರಾಮನು ಆದರ್ಶ ಪರನಾದರೆ, ಕೃಷ್ಣ ತಂತ್ರಗಾರ, ರಾಜಕೀಯ, ಚಾಣಾಕ್ಷ. ಜನರಲ್ಲಿ ಬೇರು ಬಿಟ್ಟಿದ್ದ ಮೌಲ್ಯಗಳು, ಆದರ್ಶಗಳು ಮಾಯವಾಗಿ ಕುಟಿಲತೆ ಬೆಳೆಯಲು ಆರಂಭವಾಗಿದ್ದ ದಿನಗಳಲ್ಲಿ ಚಾಣಾಕ್ಷತೆಯಿಂದ ಸತ್ಯ ಮಾರ್ಗವನ್ನು ಎತ್ತಿ ಹಿಡಿಯುವ ಆದರ್ಶದ ಕತೆಯಾಗಿ ಕೃಷ್ಣ ಚರಿತೆ ಕಾಣಿಸುತ್ತದೆ. ಕೃಷ್ಣ ಗೊಲ್ಲ. ಅವನು ಕ್ಷತ್ರಿಯನಲ್ಲ. ಆದರೂ ವಿಪ್ರ, ಕ್ಷತ್ರಿಯರಿಗೆಲ್ಲ ಪೂಜನೀಯನಾಗಿದ್ದನು. ಇದು ಆ ಕಾಲದ ವರ್ಣಸಂಕರವನ್ನೂ ಪ್ರತಿನಿಧಿಸುತ್ತದೆ. ಕೃಷ್ಣನ ಸಾರಥ್ಯದಲ್ಲಿ ನಡೆದ ಮಹಾಭಾರತದ ಕತೆ ಒಂದು ಪರಿವರ್ತನೆಯ ಸೂಚಕವೂ ಹೌದು.

Get in Touch With Us info@kalpa.news Whatsapp: 9481252093

Tags: DashavataraDr Gururaj PoshettihalliKannadaNewsWebsiteKrishnavataraRamavataraಕೃಷ್ಣಾವತಾರಡಾ.ಗುರುರಾಜ ಪೋಶೆಟ್ಟಿಹಳ್ಳಿರಾಮಾವತಾರ
Share201Tweet125Send
Aniruddha Vasishta S R

Aniruddha Vasishta S R

Editor-in-Chief

Previous Post

ಮಾಸ್ಕ್‌ ಇಲ್ಲದೇ ಓಡಾಡಿ, ಸಾರ್ವಜನಿಕ ಸ್ಥಳದಲ್ಲಿ ಉಗಿದದ್ದಕ್ಕೆ ಬಿತ್ತು ಫೈನ್! ಪಾಲಿಕೆಯಿಂದ ಕಠಿಣ ಕ್ರಮ

Next Post

ದಾವಣಗೆರೆಯಲ್ಲಿ ಮತ್ತೊಂದು ಕೊರೋನಾ ಸೋಂಕು ಪ್ರಕರಣ ದೃಢ: ಜಿಲ್ಲೆಯಲ್ಲಿ ಆತಂಕ

kalpa News

kalpa News

Next Post
ವದಂತಿಗಳಿಗೆ ಕಿವಿಗೊಡಬೇಡಿ, ಜಿಲ್ಲೆಯಲ್ಲಿ ಕರೋನ ವೈರಸ್ ಇಲ್ಲ: ಡಿಎಚ್’ಒ ಸ್ಪಷ್ಟನೆ

ದಾವಣಗೆರೆಯಲ್ಲಿ ಮತ್ತೊಂದು ಕೊರೋನಾ ಸೋಂಕು ಪ್ರಕರಣ ದೃಢ: ಜಿಲ್ಲೆಯಲ್ಲಿ ಆತಂಕ

Leave a Reply Cancel reply

Your email address will not be published. Required fields are marked *

No Result
View All Result
11-Year-Old Mysuru Girl Writes Children's Ramayana in Just 15 Days
English Articles

11-Year-Old Mysuru Girl Writes Children’s Ramayana in Just 15 Days

by kalpa News
July 27, 2026
1

Kalpa Media House  |  Mysuru  | In a remarkable literary achievement, an 11-year-old girl from Mysuru has written a 36-page...

Read moreDetails
Kotak | creating fresh opportunities for SMEs

Growth Is No Longer Just a Bengaluru Story: Kotak

July 24, 2026
Prayagraj - Yesvantpur Special Weekly Express Trains

Special Weekly Express Trains Between Prayagraj and Yesvantpur Announced

July 23, 2026
Nestlé India Reports Strong Q1 Growth

Nestlé India Reports Strong Q1 Growth; Sales Up 25.4%, Profit Jumps 47.9%

July 23, 2026
Thums Up Brings Back ThunderWheels Campaign

Thums Up Brings Back ThunderWheels Campaign

July 23, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL