ತಿರುವನಂತಪುರಂ: ಕೇರಳದಾದ್ಯಂತ ಸತತವಾಗಿ ಸುರಿಯುತ್ತಿರುವ ಕುಂಭದ್ರೋಣ ಮಳೆಗೆ ಇದುವರೆಗೂ 22 ಮಂದಿ ಬಲಿಯಾಗಿದ್ದು, ಇಡುಕ್ಕಿ ಜಿಲ್ಲೆಯೊಂದರಲ್ಲೇ 11 ಮಂದಿ ಮೃತಪಟ್ಟಿದ್ದಾರೆ.
ಇದಲ್ಲದೇ ಮಲಪುರಂ, ವಯನಾಡ್ ಹಾಗೂ ಕಣ್ಣುರುಗಳಲ್ಲೂ ಸಹ ಹಲವು ಮಂದಿ ಬಲಿಯಾಗಿದ್ದು, ಸಂಕಷ್ಟದಲ್ಲಿ ಸಿಲುಕಿರುವವರನ್ನು ರಕ್ಷಿಸುವ ಕಾರ್ಯ ಭರದಿಂದ ಸಾಗಿದೆ.
#Kerala: Southern Naval Command has sent 4 diving teams & 1 Sea King helicopter to Wayanad for evacuating stranded people. pic.twitter.com/ZZjbiOxxV0
— ANI (@ANI) August 9, 2018
ಸುಮಾರು 951 ಮಂದಿ ಮಳೆಯಿಂದಾಗಿ ಸಂತ್ರಸ್ತರಾಗಿದ್ದು, ಸಾವಿರಾರು ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗಿದೆ.
ಮಳೆ ಇನ್ನೂ ಸಹ ಭಾರೀ ಪ್ರಮಾಣದಲ್ಲಿ ಮುಂದುವರೆದಿದ್ದು, ಸಂಕಷ್ಟದಲ್ಲಿ ಸಿಲುಕಿರುವವ ರಕ್ಷಣೆಗಾಗಿ ತಂಡಗಳನ್ನು ನಿಯೋಜನೆ ಮಾಡಲಾಗಿದೆ. ಸೇನೆ, ನೌಕಾ ದಳ, ಕರಾವಳಿ ಭದ್ರತಾ ಪಡೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡಗಳನ್ನು ರಕ್ಷಣೆಗಾಗಿ ನಿಯೋಜನೆ ಮಾಡಲಾಗಿದ್ದು, ಕಾರ್ಯಾಚರಣೆ ನಡೆದಿದೆ.
Kerala state electricity board has issued third red alert in Idukki reservoir. The dam will be opened tomorrow morning to maintain the water level. At 4 pm today, the water level was 2399.56 ft.
— ANI (@ANI) August 9, 2018
Discussion about this post