No Result
View All Result
ಬೆಂಗಳೂರಿನಲ್ಲಿ ಆತ್ಮವಿಶ್ವಾಸದಿಂದ ಮೊದಲ ಮನೆ ಖರೀದಿಗೆ ಮುಂದಾಗುತ್ತಿರುವ ಜೆನ್ ಜೀ ತಲೆಮಾರು: ಕೋಟಕ್ ವರದಿ
English Articles

Kotak Mahindra to acquire Deutsche Bank’s retail banking

by kalpa News
July 1, 2026
0

Kalpa Media House  | Bengaluru | Kotak Mahindra Bank Ltd. (“KMBL” / “Kotak”) and Deutsche Bank AG (XETRA: DBKGn.DB /...

Read moreDetails
A.G. Srinivas assumes charge as Additional General Manager of SWR

A.G. Srinivas assumes charge as Additional General Manager of SWR

June 30, 2026
V. Somanna Dedicates ₹22.40 Crore Road Over Bridge at Yelekeri Gate

V. Somanna Dedicates ₹22.40 Crore Road Over Bridge at Yelekeri Gate

June 30, 2026
Mysore - Shivamogga - Talguppa Train

Cancellation, Regulation and Diversion of Trains

June 27, 2026
Surprise Inspection for Enhanced Passenger Safety

Surprise Inspection for Enhanced Passenger Safety

June 27, 2026
  • Advertise With Us
  • Grievances
  • About Us
  • Contact Us
Wednesday, July 1, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Army

ಡಿ.26 ಖಗ್ರಾಸ ಸೂರ್ಯಗ್ರಹಣ: ಯಾವ ರಾಶಿಗೆ ಅಶುಭ ಫಲ? ಭೂಮಿಗೆ ಕಾದಿದೆಯೇ ಗಂಡಾಂತರ?

271 ವರ್ಷದ ನಂತರ ಸಂಭವಿಸುತ್ತಿದೆ ಕಿಂಚಿನ್ಯೂನ ಗ್ರಹಣ

kalpa News by kalpa News
November 29, 2019
in Army
0
ಡಿ.26 ಖಗ್ರಾಸ ಸೂರ್ಯಗ್ರಹಣ: ಯಾವ ರಾಶಿಗೆ ಅಶುಭ ಫಲ? ಭೂಮಿಗೆ ಕಾದಿದೆಯೇ ಗಂಡಾಂತರ?
Share on FacebookShare on TwitterShare on WhatsApp

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಕಿಂಚಿನ್ಯೂನ ಖಗ್ರಾಸ ಸೂರ್ಯ ಗ್ರಹಣ
ತಾ: 26.12.2019
ಸಮಯ: ಉಡುಪಿ ಕಾಲಮಾನ ಆಧಾರಿತ
ಸ್ಪರ್ಷ- 8.4 AM
ಮಧ್ಯ- 9.25 AM
ಅಂತ್ಯ- 11.4 AM
ಗ್ರಾಸ ಮಾನ- 91\100

26.12.2019 ಗುರುವಾರ ಬೆಳಿಗ್ಗೆ 8.04 ಕ್ಕೆ ಸೂರ್ಯನಿಗೆ ಈ ಗ್ರಹಣ ಸ್ಪರ್ಷವಾಗುತ್ತದೆ. ಇದು ಕಿಂಚಿನ್ಯೂನ ಖಗ್ರಾಸ ಗ್ರಹಣ ಆಗುತ್ತದೆ. ಇದು ಸೂರ್ಯನಿಗೆ ಕೇತು ಗ್ರಹಣ. ಮೂಲಾ ನಕ್ಷತ್ರದಲ್ಲಿ ರವಿಗೆ ಈ ಕೇತು ಗ್ರಹಣವೂ, ಪೂರ್ವಾಷಾಡ ನಕ್ಷತ್ರದಲ್ಲಿದ್ದು, ಕೇತು(14°) ರವಿ(10°) ಚಂದ್ರರು(9°) ಮೂಲಾ ನಕ್ಷತ್ರದಲ್ಲಿಯೂ, ಶನಿಯು ಪೂರ್ವಾಷಾಡ ಅಂತ್ಯದಲ್ಲಿ(26°), ಗುರು ಮೂಲಾ ನಕ್ಷತ್ರ(11.5°) ಇರುವ ಕಾಲ ಇದಾಗಿದೆ. ಇದು ಪಂಚಗ್ರಹ ಯುತಿಯ ಯೋಗದ ದಿನವೂ ಆಗಿರುತ್ತದೆ.

Image Courtesy: NASA

ಧನು, ಮಕರ, ವೃಷಭ, ಕರ್ಕ ರಾಶಿಯವರಿಗೆ ಇದು ಅರಿಷ್ಟವಾಗುತ್ತದೆ. ಜನ್ಮ ರಾಶಿಯಿಂದ 2, 4, 5, 7, 8, 9, 12 ರಾಶಿಯಲ್ಲಿ ಗ್ರಹಣವಾದಾಗ ಅವರಿಗೂ ಅರಿಷ್ಟವಿದೆ ಎಂದು ಶಾಸ್ತ್ರ ವಚನವಿದೆ.

ಇನ್ನೊಂದೆಡೆ ಗ್ರಹಣಗಳು ಭೂಮಿಗೆ ಒಳ್ಳೆಯದಲ್ಲ. ಎಷ್ಟು ಹೊತ್ತು ರವಿ ಚಂದ್ರರ ಪ್ರಖರ ವಿಕಿರಣಗಳು ಭೂಮಿಗೆ ತಲುಪುವುದಿಲ್ಲವೋ ಅಷ್ಟು ಹೊತ್ತಿನ ರವಿಯ ಬಲವಾಗಲೀ, ಚಂದ್ರನ ಬಲವಾಗಲೀ(Charging) ಸಿಗುವುದಿಲ್ಲ. ಉದಾಹರಣೆಗೆ ನೀರು(H2O) ನೀರಾಗಿ ಇರಬೇಕಾದರೆ Hydrogen ಮತ್ತು Oxygenನಿರಂತರ ಸಂಘರ್ಷದಲ್ಲಿ ಇರಬೇಕಾಗುತ್ತದೆ. ಒಂದು ಕ್ಷಣ ಈ ಘರ್ಷಣೆ ನಿಂತರೆ ನೀರು ನೀರಾಗಿ ಇರಲು ಅಸಾಧ್ಯ. ಅದೇ ರೀತಿ ರವಿಚಂದ್ರರ ಕಿರಣಗಳು ಭೂಮಿಯ ಯಾವುದಾದರೂ ಒಂದು ಭಾಗಕ್ಕೆ ಪ್ರತೀ ಕ್ಷಣದಲ್ಲೂ ಸಂಪರ್ಕಿಸುತ್ತಿರಲೇ ಬೇಕು. ಸೂರ್ಯ ಗ್ರಹಣದಲ್ಲಿ ಚಂದ್ರನು ಮಧ್ಯೆ ಬಂದು ಅಷ್ಟು ಹೊತ್ತು ಭೂಮಿಗೆ ಸಂಪರ್ಕ ಇಲ್ಲದಂತಾಗುತ್ತದೆ. ಆದ್ದರಿಂದ ಇದು ಭೂಮಿಗೆ ಮಾರಕವೇ ಆಗುತ್ತದೆ. ಇದೊಂದು ಖಗೋಲ ಪ್ರಕ್ರಿಯೆ ಇರುವುದು ಸಹಜವೇ ಆದರೂ, ಪರಿಣಾಮವೂ ಹಾಗೆಯೇ ಇರುತ್ತದೆ. ಭೂಮಿ ಮತ್ತು ಭೂಮಿಯ ಮೇಲಿನ ಸಕಲ ಜೀವರಾಶಿಗೂ ಅನ್ವಯವೆ. ಚಂದ್ರ ಗ್ರಹಣದಲ್ಲಿ ಮನಸ್ಸಿನ ಮೇಲೆ ಪರಿಣಾಮ ಬೀರಿ ಸ್ಥಿತಿ ಹಾಳಾಗುತ್ತದೆ.

Image: Internet

ಸೂರ್ಯ ಗ್ರಹಣದಲ್ಲಿ ಸೂರ್ಯನು ತನು ಕಾರಕ ಆಗಿರುವುದರಿಂದ ಕಾಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಚರ್ಮವ್ಯಾಧಿಗಳು, ಶಿರೋಬೇನೆ(ತಲೆ ನೋವು) ಪಿತ್ಥ ಪ್ರಕೋಪ(ಲಿವರ್ ಸಮಸ್ಯೆ), ಬೆನ್ನು ನೋವು, ವಿಟಮಿನ್ B ಕೊರತೆ ಇತ್ಯಾದಿ ಸಮಸ್ಯೆಗಳು ಉಲ್ಬಣವಾಗಲು ಕಾರಣವಾಗುತ್ತದೆ.

ರವಿಯು ಆಡಳಿತದ ಗ್ರಹ ಆದುದರಿಂದ ಡೋಲಾಯಮಾನದಲ್ಲಿರುವ ಸರಕಾರಗಳು ಅತಂತ್ರವಾದೀತು. ಅಂದರೆ ಎಲ್ಲೆಲ್ಲಿ ಸಮ್ಮಿಶ್ರದ ಬಲದಲ್ಲಿ ಸರಕಾರ ಇರುತ್ತೋ ಅದೆಲ್ಲವೂ ಅತಂತ್ರವಾಗಬಹುದು. ಕೇಂದ್ರದ ಸ್ವಾಧೀನವಾದೀತು(ರಾಷ್ಟ್ರಪತಿ ಆಡಳಿತ).

ಭೂ ವಾತಾವರಣದ ವಿಚಾರದಲ್ಲಿ ಅಕಾಲಿಕ ಸುನಾಮಿ, ಚಂಡ ಮಾರುತ, ಭೂ ಕಂಪನಾದಿಗಳು, ಬರ ಇತ್ಯಾದಿ ಸಮಸ್ಯೆಗಳಾಗುತ್ತದೆ. ನೈರುತ್ಯ ಭಾಗದಿಂದ ಈಶಾನ್ಯ ಭಾಗದವರೆಗಿನ ಗ್ರಹಣ ಪೀಡಿತ ಮಾರ್ಗಗಳ ಪ್ರದೇಶಕ್ಕೆ ಹೆಚ್ಚು ಹಾನಿಗಳಿವೆ.

ನಾವೇನು ಪರಿಹಾರ ಮಾಡಬೇಕು
ಇದಕ್ಕೆ ಹೋಮ ಪರಿಹಾರವೂ ಇದೆ, ಧ್ಯಾನ ತಪೋ ಪರಿಹಾರಗಳೂ ಇವೆ.

ಆಹಾರ ವಿಚಾರ
25 ನೇ ತಾರೀಕು ಬುಧವಾರ ಸಂಜೆ ಎಂಟರ ನಂತರ ಭೋಜನ ನಿಷಿದ್ಧ. ಮರುದಿನ ಗ್ರಹಣ ಮೋಕ್ಷದ ನಂತರ ಸ್ನಾನ, ಪೂಜೆ, ಜಪ, ತಪಾನಂತರ ಲಘು ಆಹಾರ ಸೇವಿಸಬಹುದು.

Image Courtesy: Internet

ಇಂತಹ ಗ್ರಹಣವು 1748 ರಲ್ಲಿ ಬಂದಿತ್ತು. ಮುಂದೆ 2064 ಸಂಭವಿಸಲಿದೆ.

ಕೊನೆಯದಾಗಿ: ಗ್ರಹಣ ನಿಯಮಗಳಿಗೆ ವಿರುದ್ಧ ಮಾತನಾಡುವವರು ಅನೇಕ ಬುದ್ಧಿ ಹೀನ ಜನ ಇರಬಹುದು. ಇದು, ನಾವು Modernized ಜನ ಎಂದು ಹೆಮ್ಮೆಯೂ ಇರಬಹುದು. ಆದರೆ ಶಾಸ್ತ್ರಾನುಸಾರ ನಡೆಯುವುದು ನಮ್ಮ ಪರಂಪರಾ ನಿಯಮ.

ನಮ್ಮ ಪೂರ್ವಜರು ವೈಜ್ಞಾನಿಕವಾಗಿಯೇ ತಿಳಿದು ನಮಗೆ ಹೇಳಿದ್ದಾರೆ. ಈಗಿನ ಕೆಲ ಅಡ್ಡಮಂದಿಗೆ ಅಪಥ್ಯವಾದರೆ ನಾವೇನೂ ಅಡ್ಡ ಬರುವುದೂ ಇಲ್ಲ. ಆದರೆ ಯಾರು ಏನೇ ಅಡ್ಡ ಸಲಹೆ ಕೊಟ್ಟರೂ ನಮಗೆ ಶಾಸ್ತ್ರೋಲ್ಲಂಘನೆ ಮಾಡಿ ಸಮಸ್ಯೆ ಬಂದರೆ ಅವರಲ್ಲಿ ಯಾವ ಪರಿಹಾರವೂ ಇರದು. ಅವರೆಲ್ಲ ಎಣ್ಣೆ ಹಾಕಿಯೇ ಮಾತನಾಡುವವರು. ಎಣ್ಣೆ ಹಾಕಿದಾಗ ಕೆಳಮುಖವಾಗಿ ಹರಿಯುವ ನದಿಯೂ ಮೇಲ್ಮುಖವಾಗಿಯೇ ಕಾಣುತ್ತದೆ. ಅದನ್ನು ಅವರು ನೋಡಿ ಖುಷಿ ಪಡಲಿ. ನಮಗೆ ನಮ್ಮ ಪರಂಪರಾಗತ ಸಂಪ್ರದಾಯವೇ ಶ್ರೇಷ್ಠವೂ, ಸ್ವಾಸ್ಥ್ಯವೂ ಆಗಿರುತ್ತದೆ.

Get in Touch With Us info@kalpa.news Whatsapp: 9481252093

Tags: AstrologyAstronomyHomaKannada ArticleKinchinu's terrestrial eclipsePrakash AmmannayaRare PhenomenonSolar eclipseSolar SystemSurya Grahanಕಿಂಚಿನ್ಯೂನ ಖಗ್ರಾಸ ಸೂರ್ಯ ಗ್ರಹಣಖಗ್ರಾಸ ಸೂರ್ಯ ಗ್ರಹಣಜ್ಯೋತಿಷ್ಯಪ್ರಕಾಶ್ ಅಮ್ಮಣ್ಣಾಯಹೋಮ
Share252Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ತುಳುನಾಡ ಜನಪದ ಕ್ರೀಡೆ ಕಂಬಳದ ಓಟಗಾರ ಸರಳ ಸಜ್ಜನಿಕೆಯ ಕಾಂತಾವರ ಗುರುಪ್ರಸಾದ್ ಕೋಟ್ಯಾನ್

Next Post

ವಿಜಯನಗರ ಉಪಚುನಾವಣೆ: ಅನಂದ್ ಸಿಂಗ್ ಗೆಲುವು ನಿಶ್ಚಿತ

kalpa News

kalpa News

Next Post

ವಿಜಯನಗರ ಉಪಚುನಾವಣೆ: ಅನಂದ್ ಸಿಂಗ್ ಗೆಲುವು ನಿಶ್ಚಿತ

Leave a Reply Cancel reply

Your email address will not be published. Required fields are marked *

No Result
View All Result
ಬೆಂಗಳೂರಿನಲ್ಲಿ ಆತ್ಮವಿಶ್ವಾಸದಿಂದ ಮೊದಲ ಮನೆ ಖರೀದಿಗೆ ಮುಂದಾಗುತ್ತಿರುವ ಜೆನ್ ಜೀ ತಲೆಮಾರು: ಕೋಟಕ್ ವರದಿ
English Articles

Kotak Mahindra to acquire Deutsche Bank’s retail banking

by kalpa News
July 1, 2026
0

Kalpa Media House  | Bengaluru | Kotak Mahindra Bank Ltd. (“KMBL” / “Kotak”) and Deutsche Bank AG (XETRA: DBKGn.DB /...

Read moreDetails
A.G. Srinivas assumes charge as Additional General Manager of SWR

A.G. Srinivas assumes charge as Additional General Manager of SWR

June 30, 2026
V. Somanna Dedicates ₹22.40 Crore Road Over Bridge at Yelekeri Gate

V. Somanna Dedicates ₹22.40 Crore Road Over Bridge at Yelekeri Gate

June 30, 2026
Mysore - Shivamogga - Talguppa Train

Cancellation, Regulation and Diversion of Trains

June 27, 2026
Surprise Inspection for Enhanced Passenger Safety

Surprise Inspection for Enhanced Passenger Safety

June 27, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL