ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಹಿಂಸಾಚಾರ ತಳೆದಿರುವ ಸಿಎಎ ವಿರೋಧಿ ಪ್ರತಿಭಟನೆಗೆ ಗುಪ್ತಚರ ಇಲಾಖೆಯ ಅಧಿಕಾರಿಯೊಬ್ಬರು ಬಲಿಯಾಗಿರುವ ಘಟನೆ ನಡೆದಿದೆ.
2017ರ ಬ್ಯಾಚ್’ನ ಗುಪ್ತಚರ ಇಲಾಖೆಯ ಅಧಿಕಾರಿ ಅಂಕಿತ್ ಶರ್ಮಾ ಗಲಭೆಯ ವೇಳೆ ಬಲಿಯಾಗಿದ್ದಾರೆ. ಮೂಲಗಳ ಮಾಹಿತಿಯಂತೆ ಪ್ರತಿಭಟನಾಕಾರರು ಶರ್ಮಾ ಅವರನ್ನು ಕೊಂದು, ಅವರ ಶವವನ್ನು ಚಾಂದ್ ಭಾಗ್ ಏರಿಯಾದ ಚರಂಡಿಯಲ್ಲಿ ಎಸೆದಿದ್ದಾರೆ.
Delhi: Body of Intelligence Bureau Officer Ankit Sharma found in North East district’s Chand Bagh area today. pic.twitter.com/WLDG0odk6P
— ANI (@ANI) February 26, 2020
ಶರ್ಮಾ ಕರ್ತವ್ಯ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದಾಗ ಚಂದ್ ಬಾಗ್ ಪ್ರದೇಶದಲ್ಲಿ ಹಿಂಸಾತ್ಮಕ ಜನಸಮೂಹವೊಂದು ಇವರನ್ನು ಅಡ್ಡಗಟ್ಟಿದ್ದು, ಇವರನ್ನು ಕೊಂದಿದ್ದಾರೆ. ಆನಂತರ ಅವನ ದೇಹವನ್ನು ಚರಂಡಿಗೆ ಎಸೆದಿದ್ದಾರೆ.
ಬುಲೆಟ್ ಗಾಯಗಳು ಇವರ ದೇಹದಲ್ಲಿ ಪತ್ತೆಯಾಗಿದ್ದು, ಮರಣೋತ್ತರ ಪರೀಕ್ಷೆಯಲ್ಲಿ ಇವರನ್ನು ಹೊಡೆದು, ಗುಂಡು ಹಾರಿಸಿ ಕೊಲ್ಲಲಾಗಿದೆ ಎಂದು ವರದಿಯಾಗಿದೆ.
Get in Touch With Us info@kalpa.news Whatsapp: 9481252093
Discussion about this post