ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ರಾಯಚೂರು: ಕೊರೋನಾ ವೈರಸ್ ಹರಡದಂತೆ ಮುಂಜಾಗ್ರತೆ ವಹಿಸುವ ಸಲುವಾಗಿ ವಿದೇಶಗಳಲ್ಲಿರುವ ರಾಯರ ಭಕ್ತರು ಮಂತ್ರಾಲಯಕ್ಕೆ ಬಾರದೇ, ನಿಮ್ಮ ಮನೆಗಳಿಂದಲೇ ಪ್ರಾರ್ಥನೆ ಮಾಡಿ ಎಂದು ಪೀಠಾಧಿಪತಿ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ಸೂಚಿಸಿದ್ದಾರೆ.
ಈ ಕುರಿತಂತೆ ರಾಯಚೂರಿನಲ್ಲಿ ಮಾತನಾಡಿರುವ ಶ್ರೀಗಳು, ಕೊರೋನಾ ವೈರಸ್ ಎಲ್ಲೆಡೆ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಅದನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಎಲ್ಲರೂ ಕೈಜೋಡಿಸಬೇಕಿದೆ. ಈ ಹಿನ್ನೆಲೆಯಲ್ಲಿ ಸದ್ಯಕ್ಕೆ ವಿದೇಶದಲ್ಲಿರುವ ಭಕ್ತರು ಮಂತ್ರಾಲಯಕ್ಕೆ ಬರುವುದು ಬೇಡ. ಬದಲಾಗಿ, ನಿಮ್ಮ ಮನೆಗಳಿಂದಲೇ ಶ್ರೀರಾಯರ ಪ್ರಾರ್ಥನೆ ಮಾಡಿ. ಈ ಮೂಲಕ, ವೈರಸ್ ಹಡರುವಿಕೆಯನ್ನು ತಡೆಗಟ್ಟಲು ಎಲ್ಲರೂ ಸಹಕರಿಸಿ ಎಂದು ಸೂಚಿಸಿದ್ದಾರೆ.
Get in Touch With Us info@kalpa.news Whatsapp: 9481252093
Discussion about this post