ಕಲ್ಪ ಮೀಡಿಯಾ ಹೌಸ್ | ಧಾರವಾಡ |
ಅತ್ಯಂತ ವಿಷಕಾರಿ ಹಾವೊಂದು #Snake ಕಚ್ಚಿ ಶ್ರೀರಾಮನಗರ ನಗರದ ನಿವಾಸಿ ಚೇತನ್(27) ದುರ್ಮರಣಕ್ಕೀಡಾಗಿರುವ ಘಟನೆ ನಗರದಲ್ಲಿ ನಡೆದಿದೆ.
ಇಲ್ಲಿನ ತುಳಜಾ ಭವಾನಿ ದೇವಾಲಯದ ಬಳಿಯಲ್ಲಿ ಹಾವೊಂದು ಕಾಣಿಸಿಕೊಂಡಿತ್ತು. ಅದನ್ನು ಹಿಡಿಯುವ ಸಲುವಾಗಿ ಆಗಮಿಸಿದ ಚೇತನ್’ಗೆ ಅದೊಂದು ವಿಷಪೂರಿತ ಹಾವು ಎಂದು ತಿಳಿದಿದೆ. ಆದರೂ, ಹಿಡಿಯಲು ಮುಂದಾದಾಗ ಹಾವು ಆತನಿಗೆ ಕಚ್ಚಿದೆ.
ಹಾವು ಕಡಿತಕ್ಕೆ ಒಳಗಾದ ಆತನನ್ನು ತತಕ್ಷಣವೇ ಜಿಲ್ಲಾಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಆತ ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ.
Discussion about this post