Sunday, June 1, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ಆನಂದ ಕಂದ

ವಿಭಿನ್ನತೆ ತಾರತಮ್ಯವಲ್ಲ; ಏಕರೂಪತೆ ಏಕಾತ್ಮತೆಯಲ್ಲ

January 2, 2025
in ಆನಂದ ಕಂದ
0 0
0
Share on facebookShare on TwitterWhatsapp
Read - 3 minutes

ಕಲ್ಪ ಮೀಡಿಯಾ ಹೌಸ್  |  ಆನಂದಕಂದ ಲೇಖನ ಮಾಲಿಕೆ-20  |
ಜಗತ್ತಿನಲ್ಲಿರುವ ಎಲ್ಲ ದೇಶಗಳಿಗಿಂತ ಭಾರತ ದೇಶ ಬಹಳಷ್ಟು ರೀತಿಗಳಲ್ಲಿ ವಿಭಿನ್ನ. ಜನ, ಭಾಷೆ, ನಡೆ-ನುಡಿ, ಮಾಡುವ ಕೆಲಸ, ಬೆಳೆಯುವ ಬೆಳೆ, ತಿನ್ನುವ ಊಟ, ವಾತಾವರಣ ಹಾಗೂ ಆರ್ಥಿಕ ಪರಿಸ್ಥಿತಿ. ಇವೆಲ್ಲವೂ ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆ ಬೇರೆಯಾಗಿ ಕಂಡು ಬರುತ್ತದೆ. ಬಹಳಷ್ಟು ಪಾಶ್ಚಿಮಾತ್ಯ ದೇಶಗಳಲ್ಲಿ ಈ ವಿಭಿನ್ನತೆ ಕಾಣುವುದಿಲ್ಲ ಹಾಗೂ ಕಂಡರೂ, ಒಂದು ಸಮಾನ ಆಯಾಮ ಕಂಡುಕೊಂಡು ಅಳೆಯುವ ಮನೋಭಾವವಿದೆ. ಇದರ ಮೂಲ ಕಾರಣ, ಸಮಾನತೆಯಲ್ಲಿ ಏಕರೂಪತೆ ಕಾಣುವ ಸಾಮಾಜಿಕ ಒತ್ತಡ.

ಉದಾಹರಣೆಗೆ: ವಿದ್ಯಾಭ್ಯಾಸದ ಪಠ್ಯಕ್ರಮವನ್ನು ಮಕ್ಕಳ ವಯಸ್ಸಿಗೆ ಅನುಗುಣವಾಗಿ ಮಾಡುತ್ತಾರೆಯೇ ಹೊರತು ಅವರ ಕಲಿಕೆಯ ಗ್ರಹಿಕೆಗಲ್ಲ. (ಇಂದಿನ ದಿನಗಳಲ್ಲಿ ಭಾರತವೂ ಇದಕ್ಕೆ ಹೊರತಾಗಿಲ್ಲ) ಇದರಿಂದ ಎಲ್ಲ ಮಕ್ಕಳೂ ಎಲ್ಲವನ್ನೂ ಕಲಿಯಲೇ ಬೇಕಾಗುವಂತಹ ಪರಿಸ್ಥಿತಿ ಉದ್ಭವವಾಗುತ್ತದೆ. ಒಂದು ತರಗತಿಯಲ್ಲಿ 20 ಮಕ್ಕಳಿದ್ದರೆ, ಪ್ರತಿಯೊಂದು ಮಗುವಿಗೂ ಅದರದೇ ಆದ ಅಭಿರುಚಿ, ಕಲಿಕಾ ವೇಗ, ಗ್ರಹಿಕೆಯ ಸಾಮರ್ಥ್ಯವಿರುತ್ತದೆ. ಆದರೆ ಆ ರೀತಿ ಕಲಿಕೆಯ ಅನುಗುಣವಾಗಿ ಕಲಿಸಲು ಶಾಲೆಗಳಲ್ಲಿ ಬೇಕಾಗುವಂತಹ ಉಪಕರಣ, ಸಮಯ ಹಾಗೂ ಬೋಧಕರು ಇರುವುದಿಲ್ಲ.

ಕಲಿಕೆಯ ಉದ್ದೇಶವೇ ಜ್ಞಾನಾರ್ಜನೆ ಆಗಿರುವಾಗ, ಬರೀ ಮೇಲ್ನೋಟಕ್ಕೆ ಉತ್ತಮವಾಗಿ ಕಂಡುಬಂದು, ಆಳವಾದ ಚಿಂತನೆ ಹಾಗೂ ಜ್ಞಾನ ಇಲ್ಲವಾದರೆ ಏನು ಪ್ರಯೋಜನ? ಏಕರೂಪತೆ ಪ್ರಕೃತಿಯ ನಿಯಮವಲ್ಲ ಎನ್ನುವ ಮೂಲ ತತ್ವ ಇಲ್ಲಿ ಮರೆತಂತಾಗಿದೆ.ಈ ಪರಿಸ್ಥಿತಿ ನಮಗೆ ಒಂದು ಮೂಲ ಪ್ರಶ್ನೆಯ ಉತ್ತರ ಹುಡುಕುವಂತೆ ಮಾಡುತ್ತದೆ. ಭಾರತದಂತ ವಿಭನ್ನತೆಯಿಂದ ಕೂಡಿದ ದೇಶಕ್ಕೆ ಅವಶ್ಯಕವಿರುವುದು ಏಕರೂಪತೆಯೇ? ಅಥವಾ ಹಲವು ವಿಭಿನ್ನತೆಯನ್ನು ಗೌರವಿಸುವ ಏಕಾತ್ಮತೆಯೇ?

ಏಕಾತ್ಮತೆಯೆಂದರೆ ಮನುಷ್ಯನ ಅವಶ್ಯಕತೆ ಮೇರೆಗೆ ವಿವೇಚನೆ, ಬುದ್ಧಿ, ಅಂತಃಕರಣ ಹಾಗೂ ವ್ಯವಹಾರ ಜ್ಞಾನದಿಂದ ಕೊಡುವ ಪರಿಹಾರ/ಪರಿಷ್ಕಾರ. ಏಕರೂಪತೆ ಎಂದರೆ ಅವಶ್ಯಕತೆ, ಸಾಮರ್ಥ್ಯವನ್ನು ಗಮನಿಸದೇ ಎಲ್ಲರಿಗೂ ಸಾಮಾನ್ಯ ನಿಯಮವನ್ನು ಅನ್ವಯ ಮಾಡುವುದು.

ಏಕಾತ್ಮತೆಯನ್ನು ಉದಾಹರಣೆ ಸಹಿತವಾಗಿ ನಾವು ಗಮನಿಸುವುದಾದರೆ,ಹೇಗೆ ಪ್ರತಿಯೊಂದು ಜಾತಿಯ ಗಿಡಕ್ಕೆ , ಬೇರೆ ಬೇರೆ ಪ್ರಮಾಣದಲ್ಲಿ ಗೊಬ್ಬರ ನೀಡುತ್ತೇವೆಯೋ ಹಾಗೆ ಜನರಿಗೆ ಏನು ಬೇಕೋ ಅದನ್ನು ಎಷ್ಟು ಬೇಕೆಂಬ ನಿರ್ಣಯ ಮಾಡಿ ನೀಡಬೇಕಾಗುತ್ತದೆ.ಕೆಳಗಿನ ಕೆಲವು ಉದಾಹರಣೆಗಳನ್ನು ನೋಡಿದರೆ ನಮಗೆ ಇದರ ಅರ್ಥವಾಗುವುದು.

ನಾವು ಹಾಕುವ ಬಟ್ಟೆಗಳನ್ನು ನಮ್ಮ ಮೈಮಾಟಕ್ಕೆ ಅನುಗುಣವಾಗಿ ದರ್ಜಿಗೆ ಬಟ್ಟೆ ಕೊಟ್ಟು ಹೊಲಿಸಿದರೆ ಅದು ಸರಿಯಾಗಿ ಒಪ್ಪುತ್ತದೆ. ಅದೇ ನಾವು ಸಿದ್ಧ ಉಡುಪುಗಳನ್ನು ಕೊಂಡರೆ, ಆ ಬಟ್ಟೆ ನಮ್ಮ ಮೈಮಾಟಕ್ಕೆ ಒಗ್ಗದಿರಬಹುದು. ನಾವು ಚುನಾಯಿಸುವ ವ್ಯಕ್ತಿಗಳನ್ನು ಬರಿ ಮತದ ಆಧಾರವಲ್ಲದೆ ಅವರಿಗೆ ಮತ ನೀಡಿದ ಮತದಾರನ ಗುಣ, ಬುದ್ಧಿ, ಜ್ಞಾನದ ಆಧಾರದ ಮೇಲೆ ಚುನಾಯಿಸಿದಲ್ಲಿ ಒಳ್ಳೆಯ ಪ್ರಜಾ ಪ್ರತಿನಿಧಿ ದೊರೆಯುವ ಅವಕಾಶವಿದೆ.

ಈ ಯಾಂತ್ರಿಕ ಏಕರೂಪತೆಯಿಂದ, ಏಕಾತ್ಮತೆ ಸ್ವಾಭಾವಿಕತೆಗೆ ಹೋಗುವ ದಾರಿ ದೂರದ್ದು ಆದರೆ ಸಣ್ಣ ಪರಿವರ್ತನೆಗಳ ಹೆಜ್ಜೆಯ ಮೂಲಕ ಸಾಧಿಸಬಹುದು.
ಒಂದು ಸಣ್ಣ ಹೆಜ್ಜೆ ದೈನಂದಿನ ಜೀವನದಲ್ಲಿ ಮನುಷ್ಯನಿಗೆ ಬೇಕಾಗುವ ಆದಾಯ, ಹೆಮ್ಮೆ ಹಾಗೂ ಸಮ್ಮಾನವನ್ನು ತರಬಹುದು. ಉದಾಹರಣೆಗೆ: ಜನರು ದೊಡ್ಡ ಕಾರ್ಖಾನೆಯಿಂದ ಉತ್ಪನ್ನವಾದ ಸಿದ್ಧ ಉಡುಪುಗಳನ್ನು ತೊಡುವುದನ್ನು ನಿಲ್ಲಿಸಿ ದರ್ಜಿಯ ಬಳಿ ಹೋಲಿಸಿಕೊಂಡರೆ, ಸಿದ್ಧ ಉಡುಪುಗಳ ಕಾರ್ಖಾನೆ ಮುಚ್ಚಲ್ಪಡುವುದು. ದರ್ಜಿಗೆ ಕೆಲಸ ಹೆಚ್ಚುವುದು. ದರ್ಜಿಯು ಕಾರ್ಖಾನೆಗೆ ಕೆಲಸಕ್ಕೆ ಹೋಗುವ ಬದಲು ತನ್ನ ಊರಿನಿಂದ, ತನ್ನ ಮನೆಯಿಂದ, ತನ್ನ ಪರಿವಾರದೊಡನೆ ಸೇರಿ ಕೆಲಸ ಮಾಡುವನು. ಇದರಿಂದ ದರ್ಜಿ ಕಾರ್ಮಿಕನಿಂದ ಮಾಲೀಕನಾಗುವನು. ಅವನಿಗೆ ಆ ಕೆಲಸದಿಂದ ಹೆಮ್ಮೆ,ಗರ್ವ, ನೆಮ್ಮದಿ, ಮರ್ಯಾದೆ ಹಾಗೂ ಒಳ್ಳೆಯ ಆದಾಯ ಸಿಗುವುದು.ಅವನ ಹಳ್ಳಿ/ಊರು ಬೆಳೆಯುವುದು. ಜನರಿಗೆ ತಮಗೆ ಬೇಕಾದ ಬಟ್ಟೆ ದೊರಕುವುದು. ಇದರಿಂದ ಜನರು ತಮ್ಮ ಊರು ಬಿಟ್ಟು ಕೆಲಸಕ್ಕಾಗಿ ನಗರಗಳಿಗೆ ತೆರಳಿ, ನಗರಗಳ ಮೇಲಿನ ಒತ್ತಡ ಹೆಚ್ಚಿಸುವ ಕಾರ್ಯ ಕಡಿಮೆಯಾಗುವುದು. ಯಾಂತ್ರೀಕರಣದಿಂದ ಆಗುವ ಮಾಲಿನ್ಯ ತಡೆಯಬಹುದು. ಇದು ಒಂದು ಉದಾಹರಣೆಯಷ್ಟೇ.

ಈ ರೀತಿ ನಿರ್ಮಿತವಾದ ಸಮಾಜದಲ್ಲಿ, ಮೇಲ್ನೋಟಕ್ಕೆ ಕಂಡುಬರುವ ಅಸಮಾನತೆಗಳಿಗೆ ಮಹತ್ವವಿರುವುದಿಲ್ಲ. ಊರಿಗೆ ತಕ್ಕ ಸೌಲಭ್ಯ , ಊರಿನ ಪರಿಸರಕ್ಕೆ ಬೇಕಾದಂತ ಉದ್ಯಮಕ್ಕೆ ಮನ್ನಣೆ, ಕೆಲಸದ ಮನ್ನಣೆಗೆ ತಕ್ಕಂತಹ ಸಂಭಾವನೆ ಹಾಗೂ ಗುಣಮಾನ್ಯವಾದ ಮೌಲ್ಯಮಾಪನಗಳ ಮೇರೆಗೆ ಸಮೃದ್ಧ ಸಮಾಜವನ್ನು ಭಾರತದಲ್ಲಿ ನಿರ್ಮಿಸಬಹುದು. ವಿಭಿನ್ನತೆಗೆ ಮನ್ನಣೆ ಹಾಗೂ ಭಾರತಕ್ಕೆ ಸರಿಹೊಂದುವ ಸ್ವಾಭಾವಿಕವಾದ ಏಕಾತ್ಮತೆ ರೂಢಿಸಿಕೊಳ್ಳಬಹುದು.

ನಮ್ಮ ಜೀವನದಲ್ಲಿ ಏಕಾತ್ಮತೆಯನ್ನು ಒಪ್ಪಿಕೊಂಡು ಆ ರೀತಿಯ ವ್ಯವಹಾರಗಳನ್ನು ಅಳವಡಿಸಿಕೊಳ್ಳುವ ಮೂಲಕ ಏಕಾತ್ಮತೆ ಸ್ವಾಭಾವಿಕವಾದುದು ಎಂಬುದನ್ನು ಸಮಾಜಕ್ಕೆ ನಾವು ಮನವರಿಕೆ ಮಾಡಿಸಬಹುದಾಗಿದೆ. ವಿಭಿನ್ನತೆ ಸೃಷ್ಟಿಯ ನಿಯಮ ಅದನ್ನು ಮಾನವನು ತನ್ನ ಏಕರೂಪತೆಯ ಸೂತ್ರದಲ್ಲಿ ಕಟ್ಟಿ ಹಾಕಲಾರ. ಒಂದು ವೇಳೆ ಕಟ್ಟಿ ಹಾಕಿದರೂ ಅದು ಸೃಷ್ಟಿಗೆ ವಿರುದ್ಧವಾದ ಪ್ರವೃತ್ತಿಯಾಗುವುದೇ ವಿನ: ಏಕರೂಪತೆ ಎಂದೂ ಏಕಾತ್ಮತೆಯಾಗದು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Tags: AnandakandaDifferenceKannada News WebsiteLatest News KannadaWestern countryಆನಂದಕಂದಪಾಶ್ಚಿಮಾತ್ಯ ದೇಶವಿಭಿನ್ನತೆ
Previous Post

ರಸಗೊಬ್ಬರ ಖರೀದಿಸುವಾಗ ರೈತರು ಜಾಗ್ರತೆ ವಹಿಸಬೇಕು: ಡಾ. ಗಣಪತಿ ಸಲಹೆ

Next Post

ರಾಜ್ಯದ ಜನರ ಆರ್ಥಿಕ ಶಕ್ತಿ ಹೆಚ್ಚಿಸಲು ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಿ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ರಾಜ್ಯದ ಜನರ ಆರ್ಥಿಕ ಶಕ್ತಿ ಹೆಚ್ಚಿಸಲು ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಿ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಅಶೋಕಪುರಂ ರೈಲ್ವೆ ಕಾರ್ಯಾಗಾರ ಪರಿಶೀಲಿಸಿದ ನೈಋತ್ಯ ರೈಲ್ವೆ ಎಂಡಿ ಮುಕುಲ್ | ಟ್ರೈನ್ ಬಸ್’ಗೆ ಚಾಲನೆ

May 31, 2025

ಹೈದರಾಬಾದ್ – ಬೀದರ್ ನಡುವೆ ವಂದೇ ಭಾರತ್ ಆರಂಭಿಸಿ: ಕೇಂದ್ರ ಸಚಿವರಿಗೆ ಬಂಡೆಪ್ಪ ಖಾಶೆಂಪುರ ಮನವಿ

May 31, 2025
File Image

ಕೆ.ಎಸ್. ಈಶ್ವರಪ್ಪನವರ ಹುಟ್ಟುಹಬ್ಬ ಹಿನ್ನೆಲೆ: ಜೂ.1ರಂದು ವಿಶೇಷ ಕಾರ್ಯಕ್ರಮ

May 31, 2025

ಜೂನ್ 1ರಿಂದ 4 | ಮೈಸೂರು-ತಾಳಗುಪ್ಪ ಇಂಟರ್’ಸಿಟಿ ಸೇರಿ ಹಲವು ರೈಲುಗಳ ಬಗ್ಗೆ ಮಹತ್ವದ ಪ್ರಕಟಣೆ

May 31, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಅಶೋಕಪುರಂ ರೈಲ್ವೆ ಕಾರ್ಯಾಗಾರ ಪರಿಶೀಲಿಸಿದ ನೈಋತ್ಯ ರೈಲ್ವೆ ಎಂಡಿ ಮುಕುಲ್ | ಟ್ರೈನ್ ಬಸ್’ಗೆ ಚಾಲನೆ

May 31, 2025

ಹೈದರಾಬಾದ್ – ಬೀದರ್ ನಡುವೆ ವಂದೇ ಭಾರತ್ ಆರಂಭಿಸಿ: ಕೇಂದ್ರ ಸಚಿವರಿಗೆ ಬಂಡೆಪ್ಪ ಖಾಶೆಂಪುರ ಮನವಿ

May 31, 2025
File Image

ಕೆ.ಎಸ್. ಈಶ್ವರಪ್ಪನವರ ಹುಟ್ಟುಹಬ್ಬ ಹಿನ್ನೆಲೆ: ಜೂ.1ರಂದು ವಿಶೇಷ ಕಾರ್ಯಕ್ರಮ

May 31, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!