No Result
View All Result
ಸಾಂಕ್ರಾಮಿಕವಲ್ಲದ ಕಾಯಿಲೆಗಳ ಬಗ್ಗೆ ಎಚ್ಚರ ಅವಶ್ಯ : ಡಾ. ಸುಶ್ರುತ ಗೌಡ
English Articles

Post-COVID Surge: Lifestyle Diseases Now Striking People in Their 40s, Warns Neurologist  Dr. Sushrutha Gowda

by ಕಲ್ಪ ನ್ಯೂಸ್
March 9, 2026
0

Kalpa Media House  |  Mysuru | Non-communicable diseases that were earlier seen mostly after the age of 60 are now...

Read moreDetails
Yamaha Introduces XSR155 in ‘Metallic Black’ shade

Yamaha Introduces XSR155 in ‘Metallic Black’ shade

March 9, 2026
ಎಲ್ಲವನ್ನೂ ಎದುರಿಸಿ ಕೃಷ್ಣನ ಬಾಳಿಗೆ ಬೆಳಕಾಗ್ತಾಳಾ ರುಕ್ಕು?

A tale of love, revenge and destiny: Krishna Rukku to premiere on March 9 on Zee Kannada and ZEE5 Kannada

March 5, 2026

Record Budget: Chief Minister Must Fulfill Hometown Demands, Urges Dr. Shushrutha Gowda

March 2, 2026
Hotel Management Students Participate in Tree Census

Hotel Management Students Participate in Tree Census

March 2, 2026
  • Advertise With Us
  • Grievances
  • About Us
  • Contact Us
Tuesday, March 10, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಆನಂದ ಕಂದ

ವಿಭಿನ್ನತೆ ತಾರತಮ್ಯವಲ್ಲ; ಏಕರೂಪತೆ ಏಕಾತ್ಮತೆಯಲ್ಲ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
January 2, 2025
in ಆನಂದ ಕಂದ
0
ವಿಭಿನ್ನತೆ ತಾರತಮ್ಯವಲ್ಲ; ಏಕರೂಪತೆ ಏಕಾತ್ಮತೆಯಲ್ಲ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಆನಂದಕಂದ ಲೇಖನ ಮಾಲಿಕೆ-20  |
ಜಗತ್ತಿನಲ್ಲಿರುವ ಎಲ್ಲ ದೇಶಗಳಿಗಿಂತ ಭಾರತ ದೇಶ ಬಹಳಷ್ಟು ರೀತಿಗಳಲ್ಲಿ ವಿಭಿನ್ನ. ಜನ, ಭಾಷೆ, ನಡೆ-ನುಡಿ, ಮಾಡುವ ಕೆಲಸ, ಬೆಳೆಯುವ ಬೆಳೆ, ತಿನ್ನುವ ಊಟ, ವಾತಾವರಣ ಹಾಗೂ ಆರ್ಥಿಕ ಪರಿಸ್ಥಿತಿ. ಇವೆಲ್ಲವೂ ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆ ಬೇರೆಯಾಗಿ ಕಂಡು ಬರುತ್ತದೆ. ಬಹಳಷ್ಟು ಪಾಶ್ಚಿಮಾತ್ಯ ದೇಶಗಳಲ್ಲಿ ಈ ವಿಭಿನ್ನತೆ ಕಾಣುವುದಿಲ್ಲ ಹಾಗೂ ಕಂಡರೂ, ಒಂದು ಸಮಾನ ಆಯಾಮ ಕಂಡುಕೊಂಡು ಅಳೆಯುವ ಮನೋಭಾವವಿದೆ. ಇದರ ಮೂಲ ಕಾರಣ, ಸಮಾನತೆಯಲ್ಲಿ ಏಕರೂಪತೆ ಕಾಣುವ ಸಾಮಾಜಿಕ ಒತ್ತಡ.

ಉದಾಹರಣೆಗೆ: ವಿದ್ಯಾಭ್ಯಾಸದ ಪಠ್ಯಕ್ರಮವನ್ನು ಮಕ್ಕಳ ವಯಸ್ಸಿಗೆ ಅನುಗುಣವಾಗಿ ಮಾಡುತ್ತಾರೆಯೇ ಹೊರತು ಅವರ ಕಲಿಕೆಯ ಗ್ರಹಿಕೆಗಲ್ಲ. (ಇಂದಿನ ದಿನಗಳಲ್ಲಿ ಭಾರತವೂ ಇದಕ್ಕೆ ಹೊರತಾಗಿಲ್ಲ) ಇದರಿಂದ ಎಲ್ಲ ಮಕ್ಕಳೂ ಎಲ್ಲವನ್ನೂ ಕಲಿಯಲೇ ಬೇಕಾಗುವಂತಹ ಪರಿಸ್ಥಿತಿ ಉದ್ಭವವಾಗುತ್ತದೆ. ಒಂದು ತರಗತಿಯಲ್ಲಿ 20 ಮಕ್ಕಳಿದ್ದರೆ, ಪ್ರತಿಯೊಂದು ಮಗುವಿಗೂ ಅದರದೇ ಆದ ಅಭಿರುಚಿ, ಕಲಿಕಾ ವೇಗ, ಗ್ರಹಿಕೆಯ ಸಾಮರ್ಥ್ಯವಿರುತ್ತದೆ. ಆದರೆ ಆ ರೀತಿ ಕಲಿಕೆಯ ಅನುಗುಣವಾಗಿ ಕಲಿಸಲು ಶಾಲೆಗಳಲ್ಲಿ ಬೇಕಾಗುವಂತಹ ಉಪಕರಣ, ಸಮಯ ಹಾಗೂ ಬೋಧಕರು ಇರುವುದಿಲ್ಲ.

ಕಲಿಕೆಯ ಉದ್ದೇಶವೇ ಜ್ಞಾನಾರ್ಜನೆ ಆಗಿರುವಾಗ, ಬರೀ ಮೇಲ್ನೋಟಕ್ಕೆ ಉತ್ತಮವಾಗಿ ಕಂಡುಬಂದು, ಆಳವಾದ ಚಿಂತನೆ ಹಾಗೂ ಜ್ಞಾನ ಇಲ್ಲವಾದರೆ ಏನು ಪ್ರಯೋಜನ? ಏಕರೂಪತೆ ಪ್ರಕೃತಿಯ ನಿಯಮವಲ್ಲ ಎನ್ನುವ ಮೂಲ ತತ್ವ ಇಲ್ಲಿ ಮರೆತಂತಾಗಿದೆ.ಈ ಪರಿಸ್ಥಿತಿ ನಮಗೆ ಒಂದು ಮೂಲ ಪ್ರಶ್ನೆಯ ಉತ್ತರ ಹುಡುಕುವಂತೆ ಮಾಡುತ್ತದೆ. ಭಾರತದಂತ ವಿಭನ್ನತೆಯಿಂದ ಕೂಡಿದ ದೇಶಕ್ಕೆ ಅವಶ್ಯಕವಿರುವುದು ಏಕರೂಪತೆಯೇ? ಅಥವಾ ಹಲವು ವಿಭಿನ್ನತೆಯನ್ನು ಗೌರವಿಸುವ ಏಕಾತ್ಮತೆಯೇ?

ಏಕಾತ್ಮತೆಯೆಂದರೆ ಮನುಷ್ಯನ ಅವಶ್ಯಕತೆ ಮೇರೆಗೆ ವಿವೇಚನೆ, ಬುದ್ಧಿ, ಅಂತಃಕರಣ ಹಾಗೂ ವ್ಯವಹಾರ ಜ್ಞಾನದಿಂದ ಕೊಡುವ ಪರಿಹಾರ/ಪರಿಷ್ಕಾರ. ಏಕರೂಪತೆ ಎಂದರೆ ಅವಶ್ಯಕತೆ, ಸಾಮರ್ಥ್ಯವನ್ನು ಗಮನಿಸದೇ ಎಲ್ಲರಿಗೂ ಸಾಮಾನ್ಯ ನಿಯಮವನ್ನು ಅನ್ವಯ ಮಾಡುವುದು.

ಏಕಾತ್ಮತೆಯನ್ನು ಉದಾಹರಣೆ ಸಹಿತವಾಗಿ ನಾವು ಗಮನಿಸುವುದಾದರೆ,ಹೇಗೆ ಪ್ರತಿಯೊಂದು ಜಾತಿಯ ಗಿಡಕ್ಕೆ , ಬೇರೆ ಬೇರೆ ಪ್ರಮಾಣದಲ್ಲಿ ಗೊಬ್ಬರ ನೀಡುತ್ತೇವೆಯೋ ಹಾಗೆ ಜನರಿಗೆ ಏನು ಬೇಕೋ ಅದನ್ನು ಎಷ್ಟು ಬೇಕೆಂಬ ನಿರ್ಣಯ ಮಾಡಿ ನೀಡಬೇಕಾಗುತ್ತದೆ.ಕೆಳಗಿನ ಕೆಲವು ಉದಾಹರಣೆಗಳನ್ನು ನೋಡಿದರೆ ನಮಗೆ ಇದರ ಅರ್ಥವಾಗುವುದು.

ನಾವು ಹಾಕುವ ಬಟ್ಟೆಗಳನ್ನು ನಮ್ಮ ಮೈಮಾಟಕ್ಕೆ ಅನುಗುಣವಾಗಿ ದರ್ಜಿಗೆ ಬಟ್ಟೆ ಕೊಟ್ಟು ಹೊಲಿಸಿದರೆ ಅದು ಸರಿಯಾಗಿ ಒಪ್ಪುತ್ತದೆ. ಅದೇ ನಾವು ಸಿದ್ಧ ಉಡುಪುಗಳನ್ನು ಕೊಂಡರೆ, ಆ ಬಟ್ಟೆ ನಮ್ಮ ಮೈಮಾಟಕ್ಕೆ ಒಗ್ಗದಿರಬಹುದು. ನಾವು ಚುನಾಯಿಸುವ ವ್ಯಕ್ತಿಗಳನ್ನು ಬರಿ ಮತದ ಆಧಾರವಲ್ಲದೆ ಅವರಿಗೆ ಮತ ನೀಡಿದ ಮತದಾರನ ಗುಣ, ಬುದ್ಧಿ, ಜ್ಞಾನದ ಆಧಾರದ ಮೇಲೆ ಚುನಾಯಿಸಿದಲ್ಲಿ ಒಳ್ಳೆಯ ಪ್ರಜಾ ಪ್ರತಿನಿಧಿ ದೊರೆಯುವ ಅವಕಾಶವಿದೆ.

ಈ ಯಾಂತ್ರಿಕ ಏಕರೂಪತೆಯಿಂದ, ಏಕಾತ್ಮತೆ ಸ್ವಾಭಾವಿಕತೆಗೆ ಹೋಗುವ ದಾರಿ ದೂರದ್ದು ಆದರೆ ಸಣ್ಣ ಪರಿವರ್ತನೆಗಳ ಹೆಜ್ಜೆಯ ಮೂಲಕ ಸಾಧಿಸಬಹುದು.
ಒಂದು ಸಣ್ಣ ಹೆಜ್ಜೆ ದೈನಂದಿನ ಜೀವನದಲ್ಲಿ ಮನುಷ್ಯನಿಗೆ ಬೇಕಾಗುವ ಆದಾಯ, ಹೆಮ್ಮೆ ಹಾಗೂ ಸಮ್ಮಾನವನ್ನು ತರಬಹುದು. ಉದಾಹರಣೆಗೆ: ಜನರು ದೊಡ್ಡ ಕಾರ್ಖಾನೆಯಿಂದ ಉತ್ಪನ್ನವಾದ ಸಿದ್ಧ ಉಡುಪುಗಳನ್ನು ತೊಡುವುದನ್ನು ನಿಲ್ಲಿಸಿ ದರ್ಜಿಯ ಬಳಿ ಹೋಲಿಸಿಕೊಂಡರೆ, ಸಿದ್ಧ ಉಡುಪುಗಳ ಕಾರ್ಖಾನೆ ಮುಚ್ಚಲ್ಪಡುವುದು. ದರ್ಜಿಗೆ ಕೆಲಸ ಹೆಚ್ಚುವುದು. ದರ್ಜಿಯು ಕಾರ್ಖಾನೆಗೆ ಕೆಲಸಕ್ಕೆ ಹೋಗುವ ಬದಲು ತನ್ನ ಊರಿನಿಂದ, ತನ್ನ ಮನೆಯಿಂದ, ತನ್ನ ಪರಿವಾರದೊಡನೆ ಸೇರಿ ಕೆಲಸ ಮಾಡುವನು. ಇದರಿಂದ ದರ್ಜಿ ಕಾರ್ಮಿಕನಿಂದ ಮಾಲೀಕನಾಗುವನು. ಅವನಿಗೆ ಆ ಕೆಲಸದಿಂದ ಹೆಮ್ಮೆ,ಗರ್ವ, ನೆಮ್ಮದಿ, ಮರ್ಯಾದೆ ಹಾಗೂ ಒಳ್ಳೆಯ ಆದಾಯ ಸಿಗುವುದು.ಅವನ ಹಳ್ಳಿ/ಊರು ಬೆಳೆಯುವುದು. ಜನರಿಗೆ ತಮಗೆ ಬೇಕಾದ ಬಟ್ಟೆ ದೊರಕುವುದು. ಇದರಿಂದ ಜನರು ತಮ್ಮ ಊರು ಬಿಟ್ಟು ಕೆಲಸಕ್ಕಾಗಿ ನಗರಗಳಿಗೆ ತೆರಳಿ, ನಗರಗಳ ಮೇಲಿನ ಒತ್ತಡ ಹೆಚ್ಚಿಸುವ ಕಾರ್ಯ ಕಡಿಮೆಯಾಗುವುದು. ಯಾಂತ್ರೀಕರಣದಿಂದ ಆಗುವ ಮಾಲಿನ್ಯ ತಡೆಯಬಹುದು. ಇದು ಒಂದು ಉದಾಹರಣೆಯಷ್ಟೇ.

ಈ ರೀತಿ ನಿರ್ಮಿತವಾದ ಸಮಾಜದಲ್ಲಿ, ಮೇಲ್ನೋಟಕ್ಕೆ ಕಂಡುಬರುವ ಅಸಮಾನತೆಗಳಿಗೆ ಮಹತ್ವವಿರುವುದಿಲ್ಲ. ಊರಿಗೆ ತಕ್ಕ ಸೌಲಭ್ಯ , ಊರಿನ ಪರಿಸರಕ್ಕೆ ಬೇಕಾದಂತ ಉದ್ಯಮಕ್ಕೆ ಮನ್ನಣೆ, ಕೆಲಸದ ಮನ್ನಣೆಗೆ ತಕ್ಕಂತಹ ಸಂಭಾವನೆ ಹಾಗೂ ಗುಣಮಾನ್ಯವಾದ ಮೌಲ್ಯಮಾಪನಗಳ ಮೇರೆಗೆ ಸಮೃದ್ಧ ಸಮಾಜವನ್ನು ಭಾರತದಲ್ಲಿ ನಿರ್ಮಿಸಬಹುದು. ವಿಭಿನ್ನತೆಗೆ ಮನ್ನಣೆ ಹಾಗೂ ಭಾರತಕ್ಕೆ ಸರಿಹೊಂದುವ ಸ್ವಾಭಾವಿಕವಾದ ಏಕಾತ್ಮತೆ ರೂಢಿಸಿಕೊಳ್ಳಬಹುದು.

ನಮ್ಮ ಜೀವನದಲ್ಲಿ ಏಕಾತ್ಮತೆಯನ್ನು ಒಪ್ಪಿಕೊಂಡು ಆ ರೀತಿಯ ವ್ಯವಹಾರಗಳನ್ನು ಅಳವಡಿಸಿಕೊಳ್ಳುವ ಮೂಲಕ ಏಕಾತ್ಮತೆ ಸ್ವಾಭಾವಿಕವಾದುದು ಎಂಬುದನ್ನು ಸಮಾಜಕ್ಕೆ ನಾವು ಮನವರಿಕೆ ಮಾಡಿಸಬಹುದಾಗಿದೆ. ವಿಭಿನ್ನತೆ ಸೃಷ್ಟಿಯ ನಿಯಮ ಅದನ್ನು ಮಾನವನು ತನ್ನ ಏಕರೂಪತೆಯ ಸೂತ್ರದಲ್ಲಿ ಕಟ್ಟಿ ಹಾಕಲಾರ. ಒಂದು ವೇಳೆ ಕಟ್ಟಿ ಹಾಕಿದರೂ ಅದು ಸೃಷ್ಟಿಗೆ ವಿರುದ್ಧವಾದ ಪ್ರವೃತ್ತಿಯಾಗುವುದೇ ವಿನ: ಏಕರೂಪತೆ ಎಂದೂ ಏಕಾತ್ಮತೆಯಾಗದು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Tags: AnandakandaDifferenceKannada News WebsiteLatest News KannadaWestern countryಆನಂದಕಂದಪಾಶ್ಚಿಮಾತ್ಯ ದೇಶವಿಭಿನ್ನತೆ
Share196Tweet123Send
Previous Post

ರಸಗೊಬ್ಬರ ಖರೀದಿಸುವಾಗ ರೈತರು ಜಾಗ್ರತೆ ವಹಿಸಬೇಕು: ಡಾ. ಗಣಪತಿ ಸಲಹೆ

Next Post

ರಾಜ್ಯದ ಜನರ ಆರ್ಥಿಕ ಶಕ್ತಿ ಹೆಚ್ಚಿಸಲು ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಿ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಕೇಂದ್ರ ಸರ್ಕಾರದ ವಿರುದ್ಧ ಫೆ.7ರಂದು ಪ್ರತಿಭಟನೆ: ಮುಖ್ಯಮಂತ್ರಿ ಸಿದ್ಧರಾಮಯ್ಯ

ರಾಜ್ಯದ ಜನರ ಆರ್ಥಿಕ ಶಕ್ತಿ ಹೆಚ್ಚಿಸಲು ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಿ

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

February 12, 2026
ಪೊಂಗಲ್ ಹಬ್ಬದ ಪ್ರಯುಕ್ತ ಕೊಟ್ಟಾಯಂ – ಬೆಂಗಳೂರು ಕ್ಯಾಂಟೋನ್ಮೆಂಟ್ ನಡುವೆ ವಿಶೇಷ ರೈಲು ಸಂಚಾರ

ಈ ಎಲ್ಲಾ ದಿನಗಳು ಮೈಸೂರು-ಶಿವಮೊಗ್ಗ ಎಕ್ಸ್’ಪ್ರೆಸ್, ಅರಸೀಕೆರೆ ರೈಲುಗಳ ಬಿಗ್ ಅಪ್ಡೇಟ್

February 6, 2026
ಅಶಕ್ತರಿಗೆ ಕಾನೂನಿನ ನೆರವು ಸಿಗಬೇಕು: ನ್ಯಾ.ಎಂ.ಎಸ್. ಸಂತೋಷ್

ಅಶಕ್ತರಿಗೆ ಕಾನೂನಿನ ನೆರವು ಸಿಗಬೇಕು: ನ್ಯಾ.ಎಂ.ಎಸ್. ಸಂತೋಷ್

March 10, 2026
ಯುವ ಸಂಸತ್ ಸ್ಪರ್ಧೆ | 10 ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ

ಯುವ ಸಂಸತ್ ಸ್ಪರ್ಧೆ | 10 ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ

March 10, 2026
ಮುಸಲ್ಮಾನ ಗೂಂಡಾಗಳಿಗೆ ಕಾಂಗ್ರೆಸ್ ಸರ್ಕಾರ ಬೆಂಬಲ ನೀಡುತ್ತಿರುವುದೇ ಗಲಭೆಗೆ ಕಾರಣ | ಈಶ್ವರಪ್ಪ ಕಿಡಿ

ರಾಜ್ಯ ಸರ್ಕಾರದ ಬಜೆಟ್ | ಚಿಂದಿ ಬಟ್ಟೆ ಸೇರಿಸಿ ಕೌದಿ ಹೊಲೆದ ಹಾಗೆ ಆಗಿದೆ: ಈಶ್ವರಪ್ಪ ಲೇವಡಿ

March 10, 2026
ಅರ್ಥಗರ್ಭಿತ ಮಹಿಳಾ ದಿನಾಚರಣೆ: ಎಸ್‌ಪಿ ನಿಖಿಲ್ ಸಂತಸ

ಅರ್ಥಗರ್ಭಿತ ಮಹಿಳಾ ದಿನಾಚರಣೆ: ಎಸ್‌ಪಿ ನಿಖಿಲ್ ಸಂತಸ

March 10, 2026
ಪಿಇಎಸ್ ಐಎಎಮ್‌ಎಸ್ ಪದವಿ ಕಾಲೇಜಿನ ರಾಸೇಯೋ ವಿಶೇಷ ಶಿಬಿರ | ಉಚಿತ ಆರೋಗ್ಯ ತಪಾಸಣೆ ಸಂಪನ್ನ

ಪಿಇಎಸ್ ಐಎಎಮ್‌ಎಸ್ ಪದವಿ ಕಾಲೇಜಿನ ರಾಸೇಯೋ ವಿಶೇಷ ಶಿಬಿರ | ಉಚಿತ ಆರೋಗ್ಯ ತಪಾಸಣೆ ಸಂಪನ್ನ

March 10, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL