No Result
View All Result
KRCS Shikaripura Achieves 100% Result in CBSE Class X Board Exams
English Articles

KRCS Shikaripura Achieves 100% Result in CBSE Class X Board Exams

by ಕಲ್ಪ ನ್ಯೂಸ್
April 16, 2026
0

Kalpa Media House  |  Shikaripura | Kumadvathi Residential Central School (KRCS), Shikaripura, has achieved a 100% pass result in the...

Read moreDetails
ಬೆಂಗಳೂರು–ಬಂಗಾರಪೇಟೆ ಮೆಮು ರೈಲುಗಳಿಗೆ ತಾತ್ಕಾಲಿಕ ನಿಲುಗಡೆ

Cancellation of Ashokapuram – KSR Bengaluru MEMU trains

April 16, 2026
First VALORANT Campus Cup Champions Crowned

First VALORANT Campus Cup Champions Crowned

April 15, 2026
Welfare Impossible Without Dharma; Upholding Righteousness is Everyone’s Duty: Yadugiri Yatiraja Swamiji

Welfare Impossible Without Dharma; Upholding Righteousness is Everyone’s Duty: Yadugiri Yatiraja Swamiji

April 13, 2026
Berger Paints Responds to India’s Heat Challenge with ‘Garmi Gone, Thandak On’ Home Cooling Solutions Range

Berger Paints Responds to India’s Heat Challenge with ‘Garmi Gone, Thandak On’ Home Cooling Solutions Range

April 13, 2026
  • Advertise With Us
  • Grievances
  • About Us
  • Contact Us
Wednesday, April 29, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಮೋದಿಯ ಮೊಸರಂಥ ಭಾಷಣದಲ್ಲಿ ಕಲ್ಲು ಹುಡುಕುತ್ತಿರುವ ಬೃಹಸ್ಪತಿಗಳೆಲ್ಲ ಈ ಪಪ್ಪು ಸಂತಾನದ ಗೌರಿಬೀಜಗಳೇ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
March 20, 2020
in Special Articles
0
ಮೋದಿಯ ಮೊಸರಂಥ ಭಾಷಣದಲ್ಲಿ ಕಲ್ಲು ಹುಡುಕುತ್ತಿರುವ ಬೃಹಸ್ಪತಿಗಳೆಲ್ಲ ಈ ಪಪ್ಪು ಸಂತಾನದ ಗೌರಿಬೀಜಗಳೇ
Share on FacebookShare on TwitterShare on WhatsApp

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಒಬ್ಬ ರಾಷ್ಟ್ರನಾಯಕ ಹೇಗೆ ಮಾತಾಡಬೇಕೋ ಹಾಗೆ ಮಾತಾಡಿದ್ದಾರೆ ಪ್ರಧಾನಿ. ಒಬ್ಬ ತಂದೆ ತನ್ನ ಮಕ್ಕಳಿಗೆ ಹೇಳುವಂತೆ, ಪ್ರಾಯಕ್ಕೆ ಬಂದ ಮಗಳಿಗೆ ತಾಯಿ ತಿಳಿಹೇಳುವಂತೆ, ಮದುವೆಯಾಗಿ ಮಾವನ ಮನೆಗೆ ಹೊರಟ ಮದುಮಗಳು ಸೊಸೆಗೆ ಸೋದರಮಾವ ಸಂತೈಸುವಂತೆ, ಅಜ್ಜಿಯೊಂದು ಮನೆಮಂದಿಯನ್ನೆಲ್ಲ ಕೂರಿಸಿಕೊಂಡು ಬುದ್ಧಿಮಾತು ಹೇಳುವಂತೆ…

ಎಷ್ಟು ಕೋಟಿ ಸಹಾಯಧನ ಬಿಡುಗಡೆ ಮಾಡ್ತಾರೆ ಹೇಳ್ಬೇಕಿತ್ತು… ಎಷ್ಟು ಆಸ್ಪತ್ರೆ ಓಪನ್ನಿಡ್ತಾರೆ ಹೇಳ್ಬೇಕಿತ್ತು, ಯಾವಾಗ ವ್ಯಾಕ್ಸೀನು ಹಾಕಿಸ್ತಾರೆ ಹೇಳ್ಬೇಕಿತ್ತು… ಎಂದೆಲ್ಲ ಹೇಳಬೇಕಾದ್ದರ ಪಟ್ಟಿಗಳನ್ನು ಎಡಬಿಡಂಗಿಗಳು ತಂತಮ್ಮ ಜಾಲಕಟ್ಟೆಗಳಲ್ಲಿ ಪೋಸ್ಟಿಸಿಕೊಂಡು ಪ್ರಧಾನಿಗೆ ತುಳುಕ್ ಬುಳುಕ್ ವ್ಯಾಕ್ ಥೂ ಎಂದು ಉಗುಳುತ್ತಿರುವುದನ್ನು ನೋಡಿದರೆ ಈ ದುರಂತ ಸಮಯದಲ್ಲೂ ನಗೆ ಬರುತ್ತದೆ. ಪ್ರಧಾನಿ ಆ ಎಲ್ಲ ವಿಷಯಗಳ ಪ್ರಸ್ತಾಪ ಮಾಡಿಲ್ಲ ಎಂದ ಮಾತ್ರಕ್ಕೆ ಅವೆಲ್ಲ ಅವರಿಗೆ ಆದ್ಯತೆಯ ವಿಷಯಗಳಲ್ಲ ಎಂದು ಇವರಿಗೆ ಕಿವಿ ಕಚ್ಚಿ ಹೇಳಿದವರು ಯಾರು? ಪ್ರಧಾನಿ ತಾನು ಅಥವಾ ತನ್ನ ಸರಕಾರ ಮಾಡುತ್ತಿರುವ ಕೆಲಸಗಳನ್ನೆಲ್ಲ ಭಾಷಣದಲ್ಲಿ ಹೇಳಲೇಬೇಕಾ? ಯಾವ ವಿಷಯ ಹೇಳಬೇಕು, ಯಾವುದನ್ನು ಹೇಳದೆ ಮಾಡಿ ತೋರಿಸಬೇಕು ಎಂಬುದು ಸರಕಾರಕ್ಕೆ ಗೊತ್ತಿದೆ.

ಭಾರತ ಸರಕಾರ ಈ ಮಹಾಮಾರಿ ಸಾಂಕ್ರಾಮಿಕ ಕಾಯಿಲೆಯನ್ನು ಹದ್ದುಬಸ್ತಿನಲ್ಲಿ ಇಡಲು ಏನೆಲ್ಲ ಮಾಡುತ್ತಿದೆ ಎಂಬುದು ಗೊತ್ತಾಗಬೇಕಾದರೆ ವಿಶ್ವದ ನಾಯಕರು ಭಾರತದ ಬಗ್ಗೆ ಏನು ಹೇಳುತ್ತಿದ್ದಾರೆ ನೋಡಬೇಕು. ಈ ಕ್ಷಣದಲ್ಲಿ ಭಾರತ ನಮ್ಮ ನಾಯಕ; ಅದು ಹೇಳಿದಂತೆ ನಾವು ನಡೆಯುತ್ತೇವೆ ಎಂದು ಮುಕ್ಕಾಲು ಭಾಗ ಜಗತ್ತು ನಮ್ಮೊಂದಿಗೆ ನಿಂತಿದೆ ಎನ್ನುವುದೇ ಸಾಕು – ಈ ದೇಶದ, ದೇಶದ ನಾಯಕನ ತಾಕತ್ತು ಗೊತ್ತಾಗಲು. ಇನ್ನು ಇಷ್ಟೆಲ್ಲ ಕೆಲಸ ಮಾಡಿದ ವ್ಯಕ್ತಿಯನ್ನೂ ಬಯ್ಯುವವರು ಇರುತ್ತಾರಾ, ಇದ್ದರೆ ಅವರು ಹೇಗೆ ಬಟ್ಟೆ ಹರಿದುಕೊಂಡು ಬಯ್ದಾಡುತ್ತಾರೆ ಎಂಬುದನ್ನು ನೋಡಬೇಕಾದರೆ ರಾಹುಲ್ ಘಂಡಿಯ ಟ್ವೀಟುಗಳನ್ನು ನೋಡಿದರೆ ಸಾಕು! ಈಗ ಮೋದಿಯ ಮೊಸರಂಥ ಭಾಷಣದಲ್ಲಿ ಕಲ್ಲುಗುಂಡುಗಳನ್ನು ಹುಡುಕುತ್ತಿರುವ ಬೃಹಸ್ಪತಿಗಳೆಲ್ಲ ಈ ಪಪ್ಪು ಸಂತಾನದ ಗೌರಿಬೀಜಗಳೇ ಬಿಡಿ!

ನೀವು ಆತನನ್ನು ಪ್ರೀತಿಸಿ, ಇಲ್ಲವೇ ದ್ವೇಷಿಸಿ. ಆದರೆ ಖಂಡಿತ ಉಪೇಕ್ಷಿಸಲಾರಿರಿ. ಆ ವ್ಯಕ್ತಿಗೆ ಯಾವ ವೇದಿಕೆಯಲ್ಲಿ ಹೇಗೆ ಮಾತಾಡಬೇಕು ಎಂಬುದು ಚೆನ್ನಾಗಿ ಗೊತ್ತಿದೆ. ತಾನು ಯಾರನ್ನು ಉದ್ದೇಶಿಸಿ ಮಾತಾಡುತ್ತಿದ್ದೇನೆ, ಅವರಿಗೆ ಯಾವ ವಿಷಯವನ್ನು ಹೇಗೆ ಯಾವ ಹದದಲ್ಲಿ ಹೇಳಬೇಕು ಎಂಬುದು ಆತನಿಗೆ ಗೊತ್ತಿದೆ. ಸದ್ಯಕ್ಕೆ ಬೇಕಿರುವುದು ಗೊಂದಲಗಳಿಗೆ ಕಡಿವಾಣ. ಸುರಕ್ಷತೆಯ ಎಚ್ಚರ. ರೋಗಕ್ಕೆ ಪರಿಣಾಮಕಾರಿಯಾಗಿ ಬೇಲಿ ಹಾಕಿಡುವ ಕಲೆ.

ಹಾಗೆಯೇ ಮನುಷ್ಯ ಸಂಬಂಧಗಳ, ಬಾಂಧವ್ಯಗಳ ವೃದ್ಧಿ. ಗಾಯಕ್ಕೆ ಬರೆ ಹಾಕದೆ ಮದ್ದು ಹಚ್ಚುವ ಪ್ರೀತಿ. ಎಲ್ಲಕ್ಕಿಂತ ಮುಖ್ಯವಾಗಿ ತುರ್ತಾಗಿ ಬೇಕಿರುವುದು – ಜೀವನ ಪ್ರೀತಿ. ಜೊತೆ ಜೊತೆಗೇ ಸಾಮಾಜಿಕ ಜವಾಬ್ದಾರಿ. ನಾಗರಿಕ ಪ್ರಜ್ಞೆ. ಇವಿಷ್ಟು ಆದರೆ ದೇಶ ತಾನೇ ತಾನಾಗಿ ಹಳಿಗೆ ಬರುತ್ತದೆ ಎಂಬ ಆತ್ಮವಿಶ್ವಾಸವನ್ನು ರಾಷ್ಟ್ರನಾಯಕ ಮೊದಲು ತನ್ನಲ್ಲಿ ತುಂಬಿಕೊಂಡು, ನಂತರ ಅದನ್ನೇ ತನ್ನ ದೇಶವಾಸಿಗಳ ಎದೆಯೊಳಗೂ ಹಬ್ಬಬೇಕಾಗುತ್ತದೆ. ಪ್ರಧಾನಿ ಮಾಡಿದ್ದು ಅದನ್ನೇ.

ಕೆಂಡದ ದಾರಿಯಲ್ಲಿ ತಟವಟ ಕುಣಿಯದೆ ಸಂಯಮದಿಂದ ನಡೆಯುವುದೂ ಒಂದು ಕಲೆ. ಗುರಿ ಸ್ಪಷ್ಟವಿದ್ದಾಗ ಮಾತ್ರ ಕಾಲ ಕೆಳಗಿನ ಆ ಉರಿಯನ್ನೂ ತಾಳುವ ಸಂಯಮ ಬಂದೀತು. ಉರಿಯನ್ನು ಮೆಟ್ಟಿ ನಿಂತು ಸಾಧಕನಾಗುವುದೋ, ಸಾಧಕನನ್ನು ನೋಡುತ್ತ ಉರಿದು ಬೂದಿಯಾಗುವುದೋ – ಯಾವುದು ನಿಮ್ಮ ಆಯ್ಕೆ?


Get in Touch With Us info@kalpa.news Whatsapp: 9481252093

Tags: CoronavirusPandemicKannadaNewsWebsiteLatestNewsKannadaPM Narendra ModiRohith Chakratirthaಪ್ರಧಾನಿ ನರೇಂದ್ರ ಮೋದಿಭಾರತ ಸರಕಾರಮನುಷ್ಯ ಸಂಬಂಧರೋಹಿತ್ ಚಕ್ರತೀರ್ಥ
Share214Tweet123Send
Previous Post

ನಿರ್ಭಯಾ ಪ್ರಕರಣದ ದೋಷಿಗಳನ್ನು ಗಲ್ಲಿಗೇರಿಸಿದ ಹ್ಯಾಂಗ್’ಮನ್’ಗೆ 1 ಲಕ್ಷ ರೂ. ದೇಣಿಗೆ ನೀಡಿದ ನಟ ಜಗ್ಗೇಶ್

Next Post

ಶಿವಮೊಗ್ಗ: ಫುಡ್’ಕೋರ್ಟ್, ಬೀದಿಬದಿ ತಿಂಡಿ ಗಾಡಿ, ಫಾಸ್ಟ್‌’ಫುಡ್ ವ್ಯಾಪಾರ ತಾತ್ಕಾಲಿಕ ಸ್ಥಗಿತಕ್ಕೆ ಸೂಚನೆ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಶಿವಮೊಗ್ಗ: ಫುಡ್’ಕೋರ್ಟ್, ಬೀದಿಬದಿ ತಿಂಡಿ ಗಾಡಿ, ಫಾಸ್ಟ್‌'ಫುಡ್ ವ್ಯಾಪಾರ ತಾತ್ಕಾಲಿಕ ಸ್ಥಗಿತಕ್ಕೆ ಸೂಚನೆ

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

April 28, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

March 12, 2026
ಭೀಕರ ಅಪಘಾತ | ರಂಭಾಪುರಿ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ಸಾವು

ಭೀಕರ ಅಪಘಾತ | ರಂಭಾಪುರಿ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ಸಾವು

April 29, 2026
ಶ್ರೀ ರವಿಶಂಕರ್ ಗುರೂಜಿಯವರ 70ನೇ ಜನ್ಮೋತ್ಸವ | ಏ.14ರಿಂದ ಆರು ದಿನ ವಿಶೇಷ ಸುದರ್ಶನ ಕ್ರಿಯಾ ಶಿಬಿರ

ಶ್ರೀ ರವಿಶಂಕರ ಗುರೂಜಿ ಅವರ 70ನೇ ಜನ್ಮೋತ್ಸವ | ಮೇ 5ರಿಂದ `ಆನಂದೋತ್ಸವ’ ಕಾರ್ಯಕ್ರಮ

April 29, 2026
ಪ್ರಕೃತಿ ವಿಕೋಪದಿಂದ ಹಾನಿ, ವಿಶೇಷ ಪ್ರಕರಣವೆಂದು ಪರಿಗಣಿಸಿ ಪರಿಹಾರ ನೀಡಿ

ಪ್ರಕೃತಿ ವಿಕೋಪದಿಂದ ಹಾನಿ, ವಿಶೇಷ ಪ್ರಕರಣವೆಂದು ಪರಿಗಣಿಸಿ ಪರಿಹಾರ ನೀಡಿ

April 29, 2026
ಕ್ರೈಸ್ಟ್‌ಕಿಂಗ್ | ದ್ವಿತೀಯ ಪಿಯುಸಿ ಮರುಮೌಲ್ಯಮಾಪನ | ಪ್ರಜ್ವಲ್ ಶೆಟ್ಟಿ ರಾಜ್ಯಕ್ಕೆ ನಾಲ್ಕನೇ ರ್‍ಯಾಂಕ್ 

ಕ್ರೈಸ್ಟ್‌ಕಿಂಗ್ | ದ್ವಿತೀಯ ಪಿಯುಸಿ ಮರುಮೌಲ್ಯಮಾಪನ | ಪ್ರಜ್ವಲ್ ಶೆಟ್ಟಿ ರಾಜ್ಯಕ್ಕೆ ನಾಲ್ಕನೇ ರ್‍ಯಾಂಕ್ 

April 29, 2026
ಹುಲಿಕಲ್ ಘಾಟ್ ರಸ್ತೆ ತಡೆಗೋಡೆ ನಿರ್ಮಾಣ ಮಣ್ಣು ಕುಸಿತ ಪ್ರಕರಣ | ತಪ್ಪಿತಸ್ಥರ ವಿರುದ್ದ ಸೂಕ್ತ ಕ್ರಮ: ಎಸ್. ಮಧು ಬಂಗಾರಪ್ಪ

ಹುಲಿಕಲ್ ಘಾಟ್ ರಸ್ತೆ ತಡೆಗೋಡೆ ನಿರ್ಮಾಣ ಮಣ್ಣು ಕುಸಿತ ಪ್ರಕರಣ | ತಪ್ಪಿತಸ್ಥರ ವಿರುದ್ದ ಸೂಕ್ತ ಕ್ರಮ: ಎಸ್. ಮಧು ಬಂಗಾರಪ್ಪ

April 29, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL