No Result
View All Result
ಸಾಂಕ್ರಾಮಿಕವಲ್ಲದ ಕಾಯಿಲೆಗಳ ಬಗ್ಗೆ ಎಚ್ಚರ ಅವಶ್ಯ : ಡಾ. ಸುಶ್ರುತ ಗೌಡ
English Articles

Post-COVID Surge: Lifestyle Diseases Now Striking People in Their 40s, Warns Neurologist  Dr. Sushrutha Gowda

by ಕಲ್ಪ ನ್ಯೂಸ್
March 9, 2026
0

Kalpa Media House  |  Mysuru | Non-communicable diseases that were earlier seen mostly after the age of 60 are now...

Read moreDetails
Yamaha Introduces XSR155 in ‘Metallic Black’ shade

Yamaha Introduces XSR155 in ‘Metallic Black’ shade

March 9, 2026
ಎಲ್ಲವನ್ನೂ ಎದುರಿಸಿ ಕೃಷ್ಣನ ಬಾಳಿಗೆ ಬೆಳಕಾಗ್ತಾಳಾ ರುಕ್ಕು?

A tale of love, revenge and destiny: Krishna Rukku to premiere on March 9 on Zee Kannada and ZEE5 Kannada

March 5, 2026

Record Budget: Chief Minister Must Fulfill Hometown Demands, Urges Dr. Shushrutha Gowda

March 2, 2026
Hotel Management Students Participate in Tree Census

Hotel Management Students Participate in Tree Census

March 2, 2026
  • Advertise With Us
  • Grievances
  • About Us
  • Contact Us
Tuesday, March 10, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಏನು ಕಿನ್ನರಿ ಮಣಿ ಎಂದೇ ಮನೆ ಮಾತಾಗಿರುವ ಬಾಲನಟಿ ಮೈಸೂರಿನ ದಿಶಾ ರಾಮ್

ಕನ್ನಡ, ಹಿಂದಿ ಧಾರವಾಹಿಗಳಲ್ಲಿ ಮಿಂಚುತ್ತಿರುವ ಸಾಂಸ್ಕೃತಿಕ ನಗರಿಯ ಬಾಲೆ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
March 2, 2021
in Special Articles
0
ಏನು ಕಿನ್ನರಿ ಮಣಿ ಎಂದೇ ಮನೆ ಮಾತಾಗಿರುವ ಬಾಲನಟಿ ಮೈಸೂರಿನ ದಿಶಾ ರಾಮ್
Share on FacebookShare on TwitterShare on WhatsApp

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಸಾಂಸ್ಕೃತಿಕ ನಗರಿ ಮೈಸೂರು; ಪುರಾಣ ಹಾಗೂ ಇತಿಹಾಸ ಪ್ರಸಿದ್ಧ ನಾಡು. ಶಿವೆಯು ಚಾಮುಂಡಿ ಅವತಾರ ತಾಳಿ ಮಹಿಷಾಸುರನನ್ನು ವಧಿಸಿ ನೆಲೆನಿಂತ ಪವಿತ್ರ ನೆಲೆವೀಡು. ಗಂಗ, ಚೋಳ, ಚಾಲುಕ್ಯ, ಹೊಯ್ಸಳ, ವಿಜಯನಗರ ಹಾಗೂ ಯದುವಂಶದ ಅರಸರು ಆಳಿದ ಬೀಡು. ದಿವ್ಯ ಮಂದಿರಗಳು, ಭವ್ಯ ಅರಮನೆಗಳು ಸೊಗಸಾದ ಉದ್ಯಾನವನಗಳು ವಿಶಾಲವಾದ ರಾಜಮಾರ್ಗಗಳು ಹಾಗೂ ಅನೇಕ ಮಹಾವಿದ್ಯಾಲಯಗಳಿಂದ ಕೂಡಿದ ಐತಿಹಾಸಿಕ ನಗರ.

ಮೈಸೂರು ಕರ್ನಾಟಕ ರಾಜ್ಯದ ಸಾಂಸ್ಕೃತಿಕ ರಾಜಧಾನಿ. ಜಗತ್ಪ್ರಸಿದ್ಧವಾದ ದಸರಾ ಮೈಸೂರಿನ ಸಾಂಸ್ಕೃತಿಕ ಪ್ರತೀಕ. ಸರ್.ಎಂ. ವಿಶ್ವೇಶ್ವರಯ್ಯ ನಿರ್ಮಿತ ಕೃಷ್ಣರಾಜ ಸಾಗರ, ಜಗತ್ಪ್ರಸಿದ್ಧ ಅರಮನೆಗಳು ಮೈಸೂರಿನ ಮಹತ್ವವನ್ನು ಹೆಚ್ಚಿಸಿದರೆ; ಮೈಸೂರು ಮಸಾಲ ದೋಸೆ, ಮೈಸೂರು ಪಾಕ್, ಮೈಸೂರು ಗಂಧದ ಎಣ್ಣೆ, ಸಾಬೂನು, ಮೈಸೂರು ರೇಷ್ಮೆ ಇತ್ಯಾದಿಗಳು ಮೈಸೂರನ್ನು ಜನರು ನಿತ್ಯ ನೆನೆಯುವಂತೆ ಮಾಡುತ್ತವೆ. ಅರಸೊತ್ತಿಗೆಯ ಕಾಲದಿಂದಲೂ ವಿಶ್ವವಿಖ್ಯಾತರಾದ ಕಲಾವಿದರನ್ನು ನಾಡಿಗೆ ನೀಡಿದ ಕೀರ್ತಿ ಮೈಸೂರಿಗೆ ಸಲ್ಲುತ್ತದೆ. ಜಾನಪದ, ಚಿತ್ರಕಲೆ, ಸಂಗೀತ, ನೃತ್ಯ, ನಾಟಕ, ಚಲನಚಿತ್ರ ಕಲಾವಿದರ ಹಾಗೂ ಕವಿಗಳ ತವರೂರು ಮೈಸೂರು. ಇಂಥ ಸಾಂಸ್ಕೃತಿಕ ನಗರದ ಪುಟ್ಟ ಬಾಲೆಯೊಬ್ಬಳು ನಟನಾ ಕ್ಷೇತ್ರದಲ್ಲಿ ಇಟ್ಟ ದಿಟ್ಟ ಹೆಜ್ಜೆಗಳಿಂದ ನಾಡಿಗೆ ನಾಡೇ ಸಂಭ್ರಮಿಸುತ್ತಿದೆ. ಅವಳೇ ಕಿನ್ನರಿ ಮಣಿ ಎಂದೇ ಖ್ಯಾತಳಾದ ದಿಶಾ ರಾಮ್. ಶ್ರೀಮತಿ ಶ್ವೇತಾ ಹಾಗೂ ಶ್ರೀರಾಮ್ ದಂಪತಿಗಳ ಹನ್ನೊಂದರ ಹರೆಯದ ಬಾಲೆ.
ಕೌಟಿಲ್ಯ ವಿದ್ಯಾಲಯದಲ್ಲಿ ಮೂರನೆ ತರಗತಿ ತನಕ ಓದಿರುವ ಇವಳು ಈಗ ಪ್ರಸ್ತುತ ಸೈಂಟ್ ಜೋಸೆಫ್ ಸೆಂಟ್ರಲ್ ಸ್ಕೂಲ್ ವಿಜಯನಗರ ಮೈಸೂರು ಇಲ್ಲಿನ ಐದನೆಯ ತರಗತಿಯ ಪ್ರತಿಭಾವಂತ ವಿದ್ಯಾರ್ಥಿನಿ.

ಪಟಪಟನೆ ಅರಳು ಹುರಿದಂತೆ ಮಾತನಾಡುವ, ಮಿನುಗುವ ಕಂಗಳ, ವೀಕ್ಷಕರು ಮೂಗಿನ ಮೇಲೆ ಬೆರಳಿಡುವಂತಹ ಸಹಜ ನಟನೆ. ವಯೋಮಾನಕ್ಕೆ ಮೀರಿದ ಕ್ಷಮತೆ. ಮುದ್ದು ಮುಖ, ಸದಾ ಹಸನ್ಮುಖಿ. ಎಳೆತನಕ್ಕೆ ಬೇಕಾದ ತುಂಟತನ. ಕನ್ನಡ ಕಿರುತೆರೆಯ ಹೆಸರಾಂತ ನಟಿಯರ ಸಾಲಿನಲ್ಲಿ ಗುರುತಿಸಲ್ಪಡುವ ದಿಶಾ ರಾಮ್ ನಟನೆಗೆ ಕಾಲಿಟ್ಟದ್ದು ನಾಲ್ಕುವರೆ ವರ್ಷದ ಪುಟ್ಟಾಣಿಯಾಗಿದ್ದಾಗಲೇ.
ತಾಯಿ ಕಂಡ ಕನಸನ್ನು ನನಸು ಮಾಡುತ್ತಿರುವ ದಿಶಾ ಮೈಸೂರಿನಿಂದ ಬೆಂಗಳೂರಿಗೆ ಬಂದು ಕಿನ್ನರಿ ಪ್ರವೇಶ ಪ್ರಕ್ರಿಯೆಯಲ್ಲಿ ಆಯ್ಕೆಯಾದವರು. ಸುಮಾರು ಮುನ್ನೂರು ಮಕ್ಕಳು ಕಿನ್ನರಿ ಪಾತ್ರಕ್ಕಾಗಿ ಸ್ಪರ್ಧೆಯಲ್ಲಿದ್ದರು. ಇವರ ಬೆರಗುಗೊಳಿಸುವ ಚುರುಕು ಹಾಗೂ ಮುಗ್ದತೆ ನಿರ್ದೇಶಕರನ್ನು ಚಕಿತಗೊಳಿಸಿ ಆಯ್ಕೆಗೊಂಡವರು. ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕಿನ್ನರಿ ಧಾರಾವಾಹಿಯ ಬಾಲ್ಯದ ಮಣಿ ಪಾತ್ರವನ್ನು ಸಮರ್ಥವಾಗಿ ಅಭಿನಯಿಸಿದ ಕೀರ್ತಿ ದಿಶಾ ಅವರದ್ದು. ಧಾರಾವಾಹಿ ವೀಕ್ಷಕರ ಮೆಚ್ಚಿನ ಪಾತ್ರವಾಗುವಂತೆ ಮಣಿ ಪಾತ್ರಕ್ಕೆ ಜೀವಕಳೆಯಿತ್ತು ಅಭಿನಯಿಸಿದ್ದು ದಿಶಾ ಅವರ ಹೆಚ್ಚುಗಾರಿಕೆಯೇ ಆಗಿತ್ತು. ಮುಂದೆ ದಿಶಾ ಅವರು ಹೋದಲ್ಲಿ ಬಂದಲ್ಲಿ ಮಣಿ ಎಂದೆ ಕರೆಯಲ್ಪಡುತ್ತಿದ್ದರು.

ದಿಶಾ ರಾಮ್ ಅವರು ಕಿನ್ನರಿ, ನಾ ನಿನ್ನ ಬಿಡಲಾರೆ, ಮನ್ ಮೆ ಹೈ ವಿಶ್ವಾಸ್ (ಹಿಂದಿ) ಸೋನಿ ವಾಹಿನಿಯ ಕ್ರೈಮ್ ಪೆಟ್ರೋಲ್ (ಹಿಂದಿ) ಧಾರಾವಾಹಿಗಳ ಬಹುಮುಖ್ಯವಾದ ಭೂಮಿಕೆಗಳಲ್ಲಿ ತನ್ನ ನಟನಾ ಕೌಶಲ್ಯದಿಂದ ಮಿಂಚಿದವರು. ಬಿಗ್ ಬಾಸ್ ಸೀಸನ್ ನಾಲ್ಕರಲ್ಲಿ ಒಂದು ದಿನದ ಅತಿಥಿಯಾಗಿ ಭಾಗವಹಿಸಿದ್ದಾರೆ. ಮಜಾ ಟಾಕೀಸ್, ಸೂಪರ್ ಟಾಕ್ ಟೈಮ್, ಜಬರ್ದಸ್ತ್‌ ಕಾಮಿಡಿ, ತಕಧಿಮಿತ ಮುಂತಾದ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದಾರೆ.

ಎಸ್. ಕೃಷ್ಣ ನಿರ್ದೇಶನದ ಕಿಚ್ಚ ಸುದೀಪ್ ಅವರು ನಾಯಕ ನಟರಾಗಿದ್ದ ಹೆಬ್ಬುಲಿ ಚಲನಚಿತ್ರದಲ್ಲಿ ಬಹಳ ಮಹತ್ವದ ಪಾತ್ರವನ್ನು ಸಮರ್ಥವಾಗಿ ಅಭಿನಯಿಸಿದ್ದಾರೆ. ಹ್ಯಾಪಿ ಬರ್ತ್‌ಡೇ, ಕಡಲು, ಚಿತ್ರಾಲಿ ಮುಂತಾದ ಚಿತ್ರಗಳಲ್ಲಿ ತನ್ನ ಅಭಿನಯದ ಮೂಲಕ ಮಿಂಚಿದ್ದಾರೆ. ಭರತನಾಟ್ಯ, ಪಾಶ್ಚಾತ್ಯ ನೃತ್ಯ, ಸ್ಕೇಟಿಂಗ್, ಈಜು ಇತ್ಯಾದಿಗಳನ್ನು ಕಲಿಯುತ್ತಿರುವ ದಿಶಾ ಅವರು ಓದಿನಲ್ಲೂ ಮುಂದಿದ್ದಾರೆ.

ಎಸ್. ಕೃಷ್ಣ ಪರಮಾತ್ಮನ ಮೇಲೆ ಅಪಾರ ಭಕ್ತಿ ಹೊಂದಿರುವ ದಿಶಾ ಅವರಿಗೆ ಕೃಷ್ಣ ವೇಷ, ಕೃಷ್ಣ ಭಜನೆ, ಹಾಡು ಎಂದರೆ ಬಹಳ ಇಷ್ಟ. ದಿಶಾ ಅವರ ಸಾಧನೆಯನ್ನು ಹಲವಾರು ಪತ್ರಿಕೆಗಳು, ದೂರದರ್ಶನ ಮಾಧ್ಯಮಗಳು ಗುರುತಿಸಿವೆ. ಹಲವು ಸಾಂಸ್ಕೃತಿಕ, ಸಾಮಾಜಿಕ ಕಾರ್ಯಕ್ರಮಗಳ ಉದ್ಘಾಟನೆಗಳಲ್ಲಿ ಭಾಗವಹಿಸುವ ಅವಕಾಶ ಪಡೆದಿದ್ದಾರೆ.


ಎಳೆಯ ಪ್ರಾಯದಲ್ಲಿಯೇ ಏರಿರುವ ಎತ್ತರದ ಹಿಂದೆ ಅವರ ಅಚಲವಾದ ಪ್ರಯತ್ನ ಹಾಗೂ ಕಠಿಣವಾದ ಸಾಧನೆ ಇತರರಿಗೊಂದು ಆದರ್ಶ. ಅವರ ಸಾಧನೆಯ ಹಿನ್ನೆಲೆಯಲ್ಲಿ ತಾಯಿಯ ಪಾತ್ರ ಅಪಾರ. ತಾಯಂದಿರು ಮಕ್ಕಳನ್ನು ಎಳವೆಯಲ್ಲೇ ಪಳಗಿಸಿ ಪ್ರೋತ್ಸಾಹಿಸಿದರೆ ಮಕ್ಕಳು ಸನ್ನಡತೆಯೊಂದಿಗೆ ಗುರಿಮುಟ್ಟುವುದು ಶತಸಿದ್ದ ಎಂದು ಶ್ರೀಮತಿ ಶ್ವೇತಾ ಶ್ರೀರಾಮ್ ಅವರು ಸಾಬೀತು ಪಡಿಸಿದ್ದಾರೆ. ಮುಂದೆ ದಿಶಾ ಚೆನ್ನಾಗಿ ಓದಿ ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಬೇಕೆಂದು ಬಯಸಿದ್ದಾರೆ. ಓದಿನೊಂದಿಗೆ ಕನ್ನಡದ ಧಾರಾವಾಹಿ ಹಾಗೂ ಚಲನಚಿತ್ರ ರಸಿಕರ ಮನಸ್ಸನ್ನು ತಣಿಸುತ್ತಿರಲಿ. ಭವಿಷ್ಯದಲ್ಲಿ ಮತ್ತಷ್ಟು ಅವಕಾಶಗಳು ದೊರೆಯಲಿ ಎಂಬ ಆಶಯ ನಮ್ಮದು.

ಕಿನ್ನರಿ ದಿಶಾ ಅವಳನ್ನು ಸೋಷಿಯಲ್ ಮೀಡಿಯಾದಲ್ಲಿ ಪಾಲೋ ಮಾಡಲು ಇಲ್ಲಿ ಕೊಟ್ಟಿರುವ ಲಿಂಕ್ ಕ್ಲಿಕ್ ಮಾಡಿ

http://www.instagram.com/kinnari_dishaofficial

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

Tags: Cultural CapitalDisha RamKannada News WebsiteKinnari SerialLatest News KannadaMaja TalkiesmysoreSpecial Articleದಿಶಾ ರಾಮ್ಧಾರಾವಾಹಿಮೈಸೂರುಸಾಂಸ್ಕೃತಿಕ ನಗರಿಸಾಂಸ್ಕೃತಿಕ ರಾಜಧಾನಿ
Share197Tweet123Send
Previous Post

ಗಮನಿಸಿ: ಶಿವಮೊಗ್ಗದಲ್ಲಿ ನಾಳೆ ಬಿಎಸ್‌ಎನ್‌ಎಲ್ ಅಂತರ್ಜಾಲ ಸೇವೆ ಇರುವುದಿಲ್ಲ

Next Post

ಸಂವಿಧಾನ ಓದು: ಡಾ ಬಿ ಆರ್ ಅಂಬೇಡ್ಕರ್ ಅಭಿಯಾನ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಸಂವಿಧಾನ ಓದು: ಡಾ ಬಿ ಆರ್ ಅಂಬೇಡ್ಕರ್ ಅಭಿಯಾನ

ಸಂವಿಧಾನ ಓದು: ಡಾ ಬಿ ಆರ್ ಅಂಬೇಡ್ಕರ್ ಅಭಿಯಾನ

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

February 12, 2026
ಪೊಂಗಲ್ ಹಬ್ಬದ ಪ್ರಯುಕ್ತ ಕೊಟ್ಟಾಯಂ – ಬೆಂಗಳೂರು ಕ್ಯಾಂಟೋನ್ಮೆಂಟ್ ನಡುವೆ ವಿಶೇಷ ರೈಲು ಸಂಚಾರ

ಈ ಎಲ್ಲಾ ದಿನಗಳು ಮೈಸೂರು-ಶಿವಮೊಗ್ಗ ಎಕ್ಸ್’ಪ್ರೆಸ್, ಅರಸೀಕೆರೆ ರೈಲುಗಳ ಬಿಗ್ ಅಪ್ಡೇಟ್

February 6, 2026
ಸಮಾಜದ ಬೆಳವಣಿಗೆಯಲ್ಲಿ ಮಹಿಳೆಯರ ಪಾತ್ರ ಅಗತ್ಯ: ಪಿಎಸ್‌ಐ ಕವಿತಾ

ಸಮಾಜದ ಬೆಳವಣಿಗೆಯಲ್ಲಿ ಮಹಿಳೆಯರ ಪಾತ್ರ ಅಗತ್ಯ: ಪಿಎಸ್‌ಐ ಕವಿತಾ

March 10, 2026
ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರು ಮುನ್ನಡೆ: ಶಿಕ್ಷಕಿ ಚಂದನ

ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರು ಮುನ್ನಡೆ: ಶಿಕ್ಷಕಿ ಚಂದನ

March 10, 2026
ಅಮಾನವೀಯ ಕೃತ್ಯ | ಸತ್ತ ಬೆಕ್ಕನ್ನು ಲೈಟ್ ಕಂಬಕ್ಕೆ ತಲೆಕೆಳಗಾಗಿ ನೇತು ಹಾಕಿದ ಕಿಡಿಗೇಡಿ

ಅಮಾನವೀಯ ಕೃತ್ಯ | ಸತ್ತ ಬೆಕ್ಕನ್ನು ಲೈಟ್ ಕಂಬಕ್ಕೆ ತಲೆಕೆಳಗಾಗಿ ನೇತು ಹಾಕಿದ ಕಿಡಿಗೇಡಿ

March 10, 2026
ಅಹಮದಾಬಾದ್‌ನಲ್ಲಿ ಅಜೇಯ ಭಾರತ: ಮೂರನೇ ಬಾರಿ ಟಿ20 ವಿಶ್ವದರ್ಜೆ ಪಟ್ಟ!

ಅಹಮದಾಬಾದ್‌ನಲ್ಲಿ ಅಜೇಯ ಭಾರತ: ಮೂರನೇ ಬಾರಿ ಟಿ20 ವಿಶ್ವದರ್ಜೆ ಪಟ್ಟ!

March 10, 2026
ಶಿವಮೊಗ್ಗ | ಗಾಜನೂರು ಫಾರೆಸ್ಟ್ ವಾಚರ್ಸ್’ಗೆ ಸಾಂತ್ವನ ಟ್ರಸ್ಟ್’ನಿಂದ ಜಾಕೆಟ್ ಕೊಡುಗೆ

ಶಿವಮೊಗ್ಗ | ಗಾಜನೂರು ಫಾರೆಸ್ಟ್ ವಾಚರ್ಸ್’ಗೆ ಸಾಂತ್ವನ ಟ್ರಸ್ಟ್’ನಿಂದ ಜಾಕೆಟ್ ಕೊಡುಗೆ

March 9, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL