ಚಳ್ಳಕೆರೆ: ಮನುಷ್ಯ ಎಷ್ಟೆ ಎತ್ತರಕ್ಕೆ ಬೆಳೆದರೆ, ಯಾವುದೇ ಅಧಿಕಾರದಲ್ಲಿ ಇದ್ದರೂ ತಮ್ಮ ನಡೆತೆಯ ದಿಕ್ಕನ್ನೂ ಬದಲಾಯಿಸಬಾರದು ಅದು ಅವರ ಶ್ರೇಯೋಭಿವೃದ್ದಿಗೆ ದಾರಿ ದೀಪವಾಗುತ್ತದೆ ಎಂದು ಶಾಸಕ ಟಿ. ರಘುಮೂರ್ತಿ ಅಭಿಪ್ರಾಯಪಟ್ಟರು.
ಶಾಸಕರ ಭವನದಲ್ಲಿ ಸುರಕಾ ಪಾಲಿಟೆಕ್ನಿಕ್ ಹಾಗೂ ಬಾಲಾಜಿ ನರ್ಸಿಂಗ್ ಸಹಭಾಗಿತ್ವದೊಂದಿಗೆ ಕಾರ್ಯಕರ್ತರು ಹಾಗೂ ಹಿತೈಹಿಷಿಗಳು ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ ಸ್ವತಃ ತಾವೇ ರಕ್ತದಾನ ಮಾಡುವುದರ ಮೂಲಕ ಚಾಲನೆ ನೀಡಿ ಮಾತನಾಡಿದರು.
ಮನುಷ್ಯ ಇರುವಷ್ಟು ದಿನಗಳಲ್ಲಿ ಉತ್ತಮವಾದ ಕೆಲಸಗಳನ್ನು ಮಾಡಬೇಕು. ಒಳ್ಳೆದು ಮಾಡದಿದ್ದರೂ ಪರವಾಗಿಲ್ಲ, ಕೆಟ್ಟದನ್ನು ಮಾಡಬಾರದು ಎಂಬ ತತ್ವದಡಿಯಲ್ಲಿ ಜೀವನ ಸಾಗಿಸಬೇಕು ಎಂದರು.
ಮನುಷ್ಯ ಹುಟ್ಟಿದ ಮೇಲೆ ಏನಾದರೂ ಸಾಧಿಸುವ ಚಲ ಹೊಂದಿರಬೇಕು. ಅದೇರೀತಿಯಲ್ಲಿ ತಾನು ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು. ಕೇವಲ ನನ್ನ ಹುಟ್ಟು ಅದ್ದೂರಿ ಸಂಭ್ರಮಾಚರಣೆ ಆಗದೇ ಅದು ಸಮಾಜದ ಏಳಿಗೆಗೆ ಮಾದರಿಯ ಸವಿ ದಿನವಾಗಬೇಕು ಎಂದರು.
ರಕ್ತದಾನ ಶಿಬಿರದಲ್ಲಿ ಶಾಸಕರ ಆಪ್ತ ರಕ್ಷಕ ಪ್ರೇಮ್’ಕುಮಾರ್, ರಘು, ಉಷಾ, ಬಂಗ್ಲೆ ಶ್ರೀನಿವಾಸ್, ಓಬಳೇಶ್, ಪ್ರಸನ್ನ, ಕೃಷ್ಣ ಸೇರಿದಂತೆ 50ಕ್ಕೂ ಅಧಿಕ ಮಂದಿ ಶಿಬಿರದಲ್ಲಿ ಪಾಲ್ಗೊಂಡು ರಕ್ತದಾನ ಮಾಡಿದರು.
ಈ ಸಂಧರ್ಭದಲ್ಲಿ ನಗರಸಭಾ ಸದಸ್ಯೆ ಮಂಜುಳಾ ಪ್ರಸನ್ನ, ಮಲ್ಲಿಕಾರ್ಜುನಾ, ಕವಿತಾ, ಕೆ.ಟಿ. ವೀರಭದ್ರಯ್ಯ, ವಿರೂಪಾಕ್ಷ, ಫರೀದಾಖಾನ್, ತಿಮ್ಮಪ್ಪ, ಡಾ.ಪ್ರದೀಪ್, ಮಹೇಶ್, ಚೇತನ್’ಕುಮಾರ್, ಲಕ್ಷ್ಮೀ, ಉಷಾ, ಗೀತಾಬಾಯಿ, ಮಂಜುನಾಥ್, ಹನುಮಂತಪ್ಪ ಇತರರು ಇದ್ದರು.
(ವರದಿ: ಸುರೇಶ್ ಬೆಳಗೆರೆ, ಚಳ್ಳಕೆರೆ)
Discussion about this post